State Govt: ಗಂಗಾರತಿ ಮಾದರಿಯಲ್ಲಿ ಅ. 3ರಿಂದ ಕಾವೇರಿ ಆರತಿ
ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇಗುಲ ಬಳಿ ಐದು ದಿನ ಆರತಿ; ಐವರಿಂದ 11 ನಿಮಿಷ ಕಾಲ ಆರತಿ
Team Udayavani, Sep 30, 2024, 7:05 AM IST
ಬೆಂಗಳೂರು: ನವರಾತ್ರಿ ಸಂದರ್ಭ ಅ. 3ರಿಂದ 7ರ ವರೆಗೆ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಬಳಿಯ ಸ್ನಾನಘಟ್ಟದಲ್ಲಿ ಕಾವೇರಿ ನದಿಗೆ ಆರತಿ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.
ಮಂಡ್ಯ ಜಿಲ್ಲಾ ಉಸ್ತು ವಾರಿ ಸಚಿವ ಎನ್. ಚಲುವ ರಾಯಸ್ವಾಮಿ ನೇತೃತ್ವದಲ್ಲಿ 2 ದಿನಗಳ ಕಾಲ ಹರಿದ್ವಾರ ಮತ್ತು ವಾರಾಣಸಿಯ ಗಂಗಾರತಿ ಅಧ್ಯಯನ ನಡೆಸಿದ್ದ ನಿಯೋಗ, ದಸರಾ ಸಂದರ್ಭ ಕಾವೇರಿ ಆರತಿ ನೆರ ವೇರಿಸುವುದಾಗಿ ಪ್ರಕಟಿಸಿತ್ತು.
ಜಲವಿವಾದ ಅಂತ್ಯಕ್ಕೆ ಜನಸಂಕಲ್ಪ ಅ. 3ರ ಸಂಜೆ 7ಕ್ಕೆ ಕಾವೇರಿ ಆರತಿಯ ಪ್ರಕ್ರಿಯೆಗಳು ಆರಂಭವಾಗಿ 7.45ರ ವರೆಗೆ ನಡೆಯಲಿದೆ.
ವಿದ್ವಾಂಸ ಭಾನುಪ್ರಕಾಶ ಶರ್ಮ ಉಸ್ತುವಾರಿ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಆಗಾಗ್ಗೆ ಸೃಷ್ಟಿಯಾಗುವ ಕಾವೇರಿ ನದಿ ನೀರಿನ ವಿವಾದ ಅಂತ್ಯಗೊಳ್ಳಬೇಕು, ಉತ್ತಮ ಮಳೆ, ಬೆಳೆ ಆಗಬೇಕು ಎನ್ನುವ ಸಂಕಲ್ಪದೊಂದಿಗೆ ಪೂಜೆ ನೆರವೇರಿಸಿ ಕಾವೇರಿ ಆರತಿ ಮಾಡಲಾಗುತ್ತದೆ. ಈ ವೇಳೆ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಕಾವೇರಿ ಕೊಳ್ಳದ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
5 ಜನರಿಂದ 11 ನಿಮಿಷ
ಪ್ರಧಾನ ಅರ್ಚಕರು ಪೂಜೆ ನೆರವೇರಿ ಸಿದ ಅನಂತರ ಐವರು ಪ್ರತ್ಯೇಕವಾಗಿ ನಿಂತು ತುಪ್ಪದಲ್ಲಿ ನೆನೆಸಿಟ್ಟ ಬತ್ತಿ ಹಾಗೂ ಕರ್ಪೂರ ಸೇರಿಸಿ ಆರತಿ ಮಾಡಲಿದ್ದಾರೆ. ಒಟ್ಟು 11 ನಿಮಿಷಗಳ ಪ್ರಕ್ರಿಯೆ ಇದಾಗಿರುತ್ತದೆ.
ಯುವ ಬ್ರಿಗೇಡ್ನಿಂದ ಆರಂಭವಾದ ಕಾವೇರಿ ಆರತಿ
ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ಕಾರ್ಯಕರ್ತರು 8 ವರ್ಷಗಳ ಹಿಂದೆ ಭಾಗಮಂಡಲದಿಂದ ಶ್ರೀರಂಗಪಟ್ಟಣದವರೆಗೆ ಕಾವೇರಿ ಸ್ವತ್ಛತಾ ಅಭಿಯಾನ ಆರಂಭಿಸಿದ್ದರು. ನದಿ ಸ್ವತ್ಛತೆಯ ಅನಂತರ ಶ್ರಮಿಕ ಕಾರ್ಯಕರ್ತರಿಂದಲೇ ಆರತಿ ಮಾಡುವ ಸಂಪ್ರದಾಯ ಬೆಳೆಸಿಕೊಂಡಿದ್ದು, 8 ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ತಲಕಾವೇರಿಯಲ್ಲಿ ತೀಥೋìದ್ಭವ ಆಗುವ ತುಲಾ ಸಂಕ್ರಮಣದಂದು “ಕಾವೇರಿ ಆರತಿ’ ಮಾಡಲಾಗುತ್ತಿದ್ದು, ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ನಡೆಯುವ ದಿನದಂದು ನಂಜನಗೂಡಿನಲ್ಲಿ “ಕಪಿಲಾರತಿ’ ಮಾಡಿಕೊಂಡು ಬರಲಾಗುತ್ತಿದೆ.
ಯಾವಾಗ? ಏನು?
- ನವರಾತ್ರಿಯ ಮೊದಲ 5 ದಿನ ಕಾವೇರಿ ನದಿಗೆ ಆರತಿ
-ಜಲವಿವಾದ ಅಂತ್ಯಕ್ಕೆ ಸಂಕಲ್ಪ
-ಅ.3ರ ಸಂಜೆ 7ರಿಂದ 7.45ರ ವರೆಗೆ ಕಾವೇರಿ ಆರತಿ ಪ್ರಕ್ರಿಯೆ ಪೂರ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State Govt: ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್ಲೈನ್ ಕಣ್ಣು !
Congress Guarantee: ರಾಜ್ಯದ 1.82 ಲಕ್ಷ ಗೃಹಲಕ್ಷ್ಮೀಯರಿಗೆ ಇನ್ನೂ 1 ಕಂತೂ ಸಿಕ್ಕಿಲ್ಲ !
BJP: ವರಿಷ್ಠರ ಖಡಕ್ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫಲ
Election Bond: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು
MUDA Case: ಸಿಎಂ ಸಿದ್ದರಾಮಯ್ಯ 45 ವರ್ಷದ ರಾಜಕೀಯ ಜೀವನ ಅಂತ್ಯ: ಪ್ರತಾಪ್ ಸಿಂಹ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Israel: ಯೆಮೆನ್ ಹೌಥಿ ನೆಲೆಗಳ ಮೇಲೆ ಇಸ್ರೇಲ್ ವಾಯು ದಾಳಿ.. ನಾಲ್ವರು ಮೃತ್ಯು, ಹಲವರು ಗಂಭೀರ
Horoscope: ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು ಇರಲಿದೆ
Government: ಕಾಲೇಜಿನಲ್ಲಿ 50 ದಿನಗಳಿಂದ “ತರಗತಿ ನಷ್ಟ’!
Social Networks Use: ಸಾಮಾಜಿಕ ಜಾಲತಾಣ: ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಡಿವಾಣ!
State Govt: ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್ಲೈನ್ ಕಣ್ಣು !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.