![Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !](https://www.udayavani.com/wp-content/uploads/2024/07/azaz-415x241.jpg)
Actor Darshan ಭೇಟಿಯಾದ ಕುಟುಂಬ: ಇಡೀ ಕುಟುಂಬ ಕಂಡು ಕಣ್ಣೀರಿಟ್ಟ ದರ್ಶನ್
ಮಗನ ಸಂತೈಸಿದ ಮೀನಾ ತೂಗುದೀಪ್
Team Udayavani, Jul 2, 2024, 12:35 AM IST
![Actor Darshan ಭೇಟಿಯಾದ ಕುಟುಂಬ: ಇಡೀ ಕುಟುಂಬ ಕಂಡು ಕಣ್ಣೀರಿಟ್ಟ ದರ್ಶನ್](https://www.udayavani.com/wp-content/uploads/2024/07/actor-darshan-620x349.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ನನ್ನು ತಾಯಿ ಮೀನಾ ತೂಗುದೀಪ, ಸಹೋದರ, ಪತ್ನಿ, ಮಗ ಸೋಮವಾರ ಭೇಟಿಯಾದರು. ಇಡೀ ಕುಟುಂಬವನ್ನು ಕಂಡು ದರ್ಶನ್ ಭಾವುಕನಾದನು.
ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಇದೇ ಮೊದಲ ಬಾರಿಗೆ ತಾಯಿ ಮತ್ತು ಸಹೋದರ ದಿನಕರ್ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು. ಜತೆಗೆ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಕೂಡ ಬಂದಿದ್ದರು. ಇದು ಅವರ ಎರಡನೇ ಭೇಟಿಯಾಗಿದೆ.
ದರ್ಶನ್ ಜೈಲು ಪಾಲಾದ ಬಳಿಕ ತಾಯಿ ಮೀನಾ ಮತ್ತು ಸಹೋದರ ದಿನಕರ್ ಈ ವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಘಟನೆ ಸಂಬಂಧ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಸೋಮವಾರ ಕುಟುಂಬದ ಸದಸ್ಯರು ದರ್ಶನ್ನನ್ನು ಭೇಟಿಯಾದರು. ತಾಯಿ ಹಾಗೂ ಸಹೋದರನನ್ನು ಕಂಡು ಕೂಡಲೇ ದರ್ಶನ್ ಕಣ್ಣೀರಿಟ್ಟರು. ಈ ವೇಳೆ ತಾಯಿ ಮೀನಾ ಕೂಡ ಕಣ್ಣೀರಿಟ್ಟು ಮಗನನ್ನು ತಬ್ಬಿ ಸಂತೈಸಿದರು. ಸಹೋದರ ದಿನಕರ್ ನಿನ್ನೊಂದಿಗೆ ನಾವಿದ್ದೇವೆ ಎಂದು ಧೈರ್ಯ ಹೇಳಿದರು. ಪುತ್ರ ವಿನೀಶ್ನನ್ನು ತೊಡೆಯ ಮೇಲೆ ಕೂರಿಸಿಕೊಂಡು ದರ್ಶನ್ ಮುತ್ತಿಕ್ಕಿ ಸಾರಿ ಕಣೋ ಎಂದು ಭಾವುಕನಾದ. ಈ ವೇಳೆ ಪತ್ನಿ ವಿಜಯಲಕ್ಷಿ$¾à ಕೂಡ ಕಣ್ಣೀರಿಟ್ಟರು.
ದರ್ಶನ್ ಭೇಟಿಗಾಗಿ
ಜೈಲಿಗೆ ಬಂದ ವೃದ್ಧೆ !
ಈ ಮಧ್ಯೆ ದರ್ಶನ್ ಅವರನ್ನು ಭೇಟಿಯಾಗಲು ಹುಬ್ಬಳ್ಳಿಯ ಅಭಿಮಾನಿ ರಾಜೇಶ್ವರಿ ಎಂಬ ವೃದ್ಧೆ ಸೋಮವಾರ ಕಾರಾಗೃಹದ ಬಳಿಗೆ ಬಂದು ಭೇಟಿಗೆ ಅವಕಾಶ ನೀಡುವಂತೆ ಪೊಲೀಸರ ಬಳಿ ಗೋಗರೆದರು. ಪೊಲೀಸರು ಅವಕಾಶ ನೀಡಲಿಲ್ಲ.
ಟಾಪ್ ನ್ಯೂಸ್
![Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !](https://www.udayavani.com/wp-content/uploads/2024/07/azaz-415x241.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![BJP-Member](https://www.udayavani.com/wp-content/uploads/2024/07/BJP-Member-140x115.jpg)
Congress Government: ರಾಜ್ಯ ಸರಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ
![VIjayendra](https://www.udayavani.com/wp-content/uploads/2024/07/VIjayendra-150x90.jpg)
CM Siddaramaiah ರಾಜೀನಾಮೆ ನೀಡಲಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
![Congress-Symbol](https://www.udayavani.com/wp-content/uploads/2024/07/Congress-Symbol-150x90.jpg)
By Election: ಸಚಿವ ಜಾರಕಿಹೊಳಿ ಮುಂದೆಯೇ ಶಿಗ್ಗಾವಿ ಟಿಕೆಟ್ ಕಿತ್ತಾಟ
![Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ](https://www.udayavani.com/wp-content/uploads/2024/07/magu-150x82.jpg)
Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ
![BK-hariprasad](https://www.udayavani.com/wp-content/uploads/2024/07/BK-hariprasad-150x90.jpg)
RSSನಿಂದ ತುರ್ತು ಪರಿಸ್ಥಿತಿಗೆ ಬೆಂಬಲ: ಎಂಎಲ್ಸಿ ಬಿ.ಕೆ.ಹರಿಪ್ರಸಾದ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.