![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 13, 2019, 3:00 AM IST
ಬಳ್ಳಾರಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್.ಆನಂದ್ಸಿಂಗ್ ಶುಕ್ರವಾರ ದಿಢೀರ್ನೆ ಗೋವಾಕ್ಕೆ ತೆರಳಿದ್ದಾರೆ.
ಜಿಂದಾಲ್ಗೆ ಜಮೀನು ಪರಭಾರೆ ನೆಪವೊಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಶಾಸಕರ ರಾಜೀನಾಮೆ ಪರ್ವಕ್ಕೆ ನಾಂದಿ ಹಾಡಿದ್ದ ಶಾಸಕ ಆನಂದ್ಸಿಂಗ್, ಕೆಲ ದಿನಗಳಿಂದ ಹೊಸಪೇಟೆಯಲ್ಲೇ ತಂಗಿದ್ದರು. ಎರಡ್ಮೂರು ದಿನಗಳ ಹಿಂದಷ್ಟೇ ಬೆಂಗಳೂರಿಗೆ ತೆರಳಿದ್ದ ಅವರು ಶುಕ್ರವಾರ ಗೋವಾ ವಿಮಾನ ಏರಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ವಿಚಾರಣೆಗೆಂದು ಸ್ಪೀಕರ್ ನೋಟಿಸ್ ನೀಡಿದ್ದರೂ ಆನಂದ ಸಿಂಗ್ ವಿಚಾರಣೆಗೆ ಹಾಜರಾಗಿಲ್ಲ. ಶುಕ್ರವಾರ ಸುಪ್ರೀಂಕೋರ್ಟ್ ಪ್ರಕಟಿಸಿದ ಆದೇಶ ಆನಂದ್ಸಿಂಗ್ಗೆ ಅನ್ವಯಿಸಲ್ಲ ಎನ್ನಲಾಗುತ್ತಿದೆ. ಅತೃಪ್ತ ಶಾಸಕರೆಲ್ಲ ಮುಂಬೈಗೆ ತೆರಳಿದ್ದರೂ ಆನಂದ್ಸಿಂಗ್ ಮಾತ್ರ ಗೋವಾಕ್ಕೆ ತೆರಳಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
You seem to have an Ad Blocker on.
To continue reading, please turn it off or whitelist Udayavani.