![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 14, 2022, 8:10 AM IST
ಬೆಂಗಳೂರು: ಪ್ರೇಮಿಗಳ ದಿನವನ್ನೇ ಟಾರ್ಗೆಟ್ ಮಾಡಿಕೊಂಡಿರುವ ಸೈಬರ್ ವಂಚಕರು, ನಿಮ್ಮ ವೈಯಕ್ತಿಕ ಮಾಹಿತಿ ಸಂಗ್ರಹಿಸಲು ಉಡುಗೊರೆ, ರಿಯಾಯಿತಿ ದರದಲ್ಲಿ ವಸ್ತುಗಳು, ಬಹುಮಾನ ನೀಡುವುದಾಗಿ ಜಾಹಿರಾತು ಪ್ರಕಟಿಸಿ ಪ್ರೇಮಿಗಳನ್ನು ಸೆಳೆದು ಟೋಪಿ ಹಾಕುವ ವ್ಯವಸ್ಥಿತ ಜಾಲ ಸೃಷ್ಟಿಯಾಗಿದೆ.
ಪ್ರೇಮಿಗಳ ದಿನದಂದು ಉಡುಗೊರೆ ನೀಡಬೇಕೆಂದು ಹಲವರು ಆಸೆ ಹೊಂದಿರುತ್ತಾರೆ. ಅಂತಹ ಆಸೆ ಮತ್ತು ಭಾವನೆಗಳನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಸೈಬರ್ ವಂಚಕರು, ನಕಲಿ ವೆಬ್ಸೈಟ್, ಆ್ಯಪ್ಗ್ಳು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ರಿಯಾಯಿತಿ ದರದಲ್ಲಿ ಉಡುಗೊರೆಗಳು, ಬಹುಮಾನ, ರಿಯಾಯಿತಿ ದರದಲ್ಲಿ ಪಂಚತಾರ ಹೊಟೇಲ್ಗಳ ಬಾಡಿಗೆಗೆ ಹೀಗೆ ಹತ್ತಾರು ಮಾದರಿಯ ನಕಲಿ ಲಿಂಕ್ಗಳನ್ನು ಹರಿಬಿಟ್ಟು ವಂಚಿಸುತ್ತಾರೆ.
ಹೇಗೆಲ್ಲ ವಂಚನೆ?
ವಂಚಕರು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್, ಇನ್ಸ್ಟ್ರಾಗ್ರಾಂಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ಅದನ್ನು ಸ್ವೀಕರಿಸಿದ ವ್ಯಕ್ತಿ ಚಾಟಿಂಗ್ ಆರಂಭಿಸಿ ಕೆಲ ಆಮಿಷಗಳನ್ನೊಡ್ಡಿ ಅವರ ವೈಯಕ್ತಿಕ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಆ ವ್ಯಕ್ತಿ ತನ್ನ ಮೊಬೈಲ್ ನಂಬರ್, ಈಮೇಲ್ ವಿಳಾಸ ನೀಡಿದರೆ ಅವರ ಸಂಪೂರ್ಣ ದಾಖಲೆಗಳನ್ನು ಕಳವು ಮಾಡಿ, ನಂತರ ಅವರ ಬ್ಯಾಂಕ್ ಖಾತೆಯಿಂದ ಹಣ ದೋಚುತ್ತಾರೆ.
ಇನ್ನು ಉಡುಗೊರೆ ಬಂದಿದೆ, ರಿಯಾಯಿತಿ ದರದಲ್ಲಿ ಪಂಚತಾರ ಹೋಟೆಲ್ನಲ್ಲಿ ಕೊಠಡಿ ಲಭ್ಯ, ನಗದು ಬಹುಮಾನ, ಲಾಟರಿ ಬಂದಿದೆ. ಪ್ರೇಮಿಗಳ ದಿನದ ವಿಶೇಷ ಕೊಡುಗೆ ನೀಡುವುದಾಗಿ ಕರೆ ಅಥವಾ ನಕಲಿ ವೆಬ್ಸೈಟ್ನ ಲಿಂಕ್ ಕಳುಹಿಸಿ ಕ್ಲೀಕ್ ಮಾಡುವಂತೆ ಕೋರುತ್ತಾರೆ. ಆ ಕೋರಿಕೆಗಳನ್ನು ಸ್ವೀಕರಿಸಿದ ಕೆಲವೇ ಹೊತ್ತಿನಲ್ಲಿ ಆ ವ್ಯಕ್ತಿಯ ಎಲ್ಲ ವೈಯಕ್ತಿಕ ಮಾಹಿತಿಗಳನ್ನು ವಂಚಕರು ಕದ್ದು ಮಾರುತ್ತಾರೆ. ಇಲ್ಲವೆ, ಆ್ಯಪ್ಗ್ಳ ಲಿಂಕ್ಗಳನ್ನು ಕಳುಹಿಸಿ, ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ವಂಚಿಸಲಾಗುತ್ತಿದೆ.
ಅಪರಿಚಿತ ನಂಬರ್ಗಳಿಂದ ಸಾಮಾನ್ಯ ಕರೆ ಅಥವಾ ವಿಡಿಯೋ ಕರೆ ಮಾಡುವ ವಂಚಕರು, ಕರೆ ಸ್ವೀಕರಿಸುತ್ತಿದ್ದಂತೆ ಏಕಾಏಕಿ ಅದನ್ನು ಸ್ಕ್ರೀನ್ ರೆಕಾರ್ಡಿಂಗ್ ಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡುವ ಸಾಧ್ಯತೆಯಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ತಮ್ಮ ಪ್ರೇಮಿ ಜತೆ ತೆಗೆದುಕೊಂಡಿರುವ ವೈಯಕ್ತಿಕ ಫೋಟೋ ಅಥವಾ ವಿಡಿಯೋಗಳನ್ನು ವಂಚಕರು ಸಂಗ್ರಹಿಸಿ, ಅವುಗಳನ್ನು ಮಾಫ್ì ಮಾಡಿ ಬ್ಲ್ಯಾಕ್ವೆುàಲ್ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎನ್ನುತ್ತಾರೆ ಸೈಬರ್ ಪೊಲೀಸರು.
ಪ್ರೇಮಿಗಳ ದಿನ ಸೇರಿ ವಿಶೇಷ ದಿನಗಳಂದೇ ಸೈಬರ್ ವಂಚಕರು ನಾನಾ ರೀತಿಯ ಆಮಿಷವೊಡ್ಡಿ ಸಾರ್ವಜನಿಕರ ವಂಚಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು. ಜತೆಗೆ ಅಪರಿಚಿತ ವ್ಯಕ್ತಿಗಳ ಸಂದೇಶ, ಕರೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿ
– ಅನೂಪ್ ಶೆಟ್ಟಿ , ಈಶಾನ್ಯವಿಭಾಗ ಡಿಸಿಪಿ
-ಮೋಹನ ಭದ್ರಾವತಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.