ಭಾರತ್ ಜೋಡೋ ; ಮಾಜಿ ಸೈನಿಕರೊಂದಿಗೆ ರಾಹುಲ್ ಪಾದಯಾತ್ರೆ
ಇವರು ದೇಶದ ರಕ್ಷಾ ಕವಚ... ದೇಶಾಭಿಮಾನಕ್ಕೆ ಇವರೇ ಸ್ಫೂರ್ತಿ
Team Udayavani, Oct 22, 2022, 6:58 PM IST
ರಾಯಚೂರು: ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮಾಜಿ ಸೈನಿಕರೊಂದಿಗೆ ಪಾದಯಾತ್ರೆ ನಡೆಸಿದರು.
ಇಂದು ಬೆಳಗ್ಗೆ ಜಿಲ್ಲೆಯ ಯರಗೇರಾದಲ್ಲಿ ಆರಂಭವಾದ 45ನೇ ದಿನದ ಯಾತ್ರೆ ಸಂಜೆ ರಾಯಚೂರು ನಗರದ ಬಸವೇಶ್ವರ ವೃತ್ತದ ಮೈದಾನದಲ್ಲಿ ಮುಕ್ತಾಯಗೊಂಡಿತು. ಮಾಜಿ ಸೈನಿಕರ ರಾಯಚೂರು ಜಿಲ್ಲಾ ಸಂಘದ ಸದಸ್ಯರು ರಾಷ್ಟ್ರಧ್ವಜ ಹಿಡಿದು ಗಾಂಧಿಯವರೊಂದಿಗೆ ಮೆರವಣಿಗೆ ನಡೆಸಿದರು.
ಮಾಜಿ ಸೈನಿಕರೊಂದಿಗೆ ಓಡಿರುವ ಸಣ್ಣ ವಿಡಿಯೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ , ಸೈನಿಕರನ್ನು “ದೇಶದ ಗಡಿ ದೇಶದ ಭದ್ರತೆ ಇಂದು ಇವರಿಂದ ಸುರಕ್ಷಿತವಾಗಿದೆ. ಇವರು ದೇಶದ ರಕ್ಷಾ ಕವಚದಂತೆ. ದೇಶಾಭಿಮಾನಕ್ಕೆ ಇವರೇ ಸ್ಫೂರ್ತಿ. ಜೈ ಜವಾನ್! ಜೈ ಹಿಂದ್!” ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ : ಪೋಷಕರಿಂದ ತಿಂಗಳಿಗೆ 100 ರೂ. ಸಂಗ್ರಹ ; ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟನೆ
ಶುಕ್ರವಾರ ಬೆಳಗ್ಗೆ ರಾಯಚೂರು ಗಡಿಭಾಗದ ಗಿಲ್ಲೇಸುಗೂರು ಬಳಿ ರಾಜ್ಯವನ್ನು ಪ್ರವೇಶಿಸಿದ ಯಾತ್ರೆಯು ಜಿಲ್ಲೆಯ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಹಾದು ಅಕ್ಟೋಬರ್ 23 ರಂದು ನೆರೆಯ ತೆಲಂಗಾಣವನ್ನು ಪ್ರವೇಶಿಸಲಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಇಂದು ಗಾಂಧಿ ಜೊತೆಗೆ ಮೆರವಣಿಗೆಯಲ್ಲಿ ಭಾಗಿಯಾದರು.
ದೇಶದ ಗಡಿ
ದೇಶದ ಭದ್ರತೆ
ಇಂದು ಇವರಿಂದ ಸುರಕ್ಷಿತವಾಗಿದೆಇವರು ದೇಶದ ರಕ್ಷಾ ಕವಚದಂತೆ
ದೇಶಾಭಿಮಾನಕ್ಕೆ ಇವರೇ ಸ್ಫೂರ್ತಿಜೈ ಜವಾನ್! ಜೈ ಹಿಂದ್!#BharatJodoYatra pic.twitter.com/wnuzR2djXy
— Karnataka Congress (@INCKarnataka) October 22, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.