

Team Udayavani, Jan 15, 2024, 8:58 PM IST
ದಾವಣಗೆರೆ: ಸಂಸದ ಅನಂತ್ ಕುಮಾರ್ ಹೆಗಡೆ ಏಕವಚನ ಬಳಸಿದ್ದು ನಾನು ಒಪ್ಪುವುದಿಲ್ಲ ಹಿಂದೆ ಸಿದ್ದರಾಮಯ್ಯ ಸರ್ಜಿಕಲ್ ಸ್ಟ್ರೈಕ್ ವಿಚಾರ ಮಾತನಾಡುವಾಗ ಏಕವಚನ ಪದ ಬಳಕೆ ಮಾಡಿದ್ದರು, ಯಾರೇ ಆಗಲಿ ಏಕವಚನದಲ್ಲಿ ಮಾತನಾಡಬಾರದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೋಮವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ”ಬಿಜೆಪಿಗೆ ಒಂದು ಸಿದ್ಧಾಂತ ಇದೆ.ಅನಂತ್ ಕುಮಾರ್ ಹೆಗಡೆ ಆಗಲಿ, ಯಾರೇ ಆಗಲಿ ಆರೋಗ್ಯಕರವಾಗಿ ಟೀಕೆ, ಟಿಪ್ಪಣಿ ಮಾಡಬೇಕು” ಎಂದರು.
ಸಂಸದ ಜಿ ಎಂ ಸಿದ್ದೇಶ್ವರ್ ಅವರಿಗೆ ಜೀವ ಬೆದರಿಕೆ ಇದ್ದರೆ ಅವರು ದೂರು ದಾಖಲು ನೀಡಲಿ. ಆ ರೀತಿ ಆಗಿದ್ದರೆ ಅದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.
ಹಾನಗಲ್ ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಬೇಕು, ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.
You seem to have an Ad Blocker on.
To continue reading, please turn it off or whitelist Udayavani.