B. S. Yediyurappa ವರ್ತಮಾನದ ದುರಂತ ನಾಯಕ: ರಮೇಶ್ ಬಾಬು ಟೀಕೆ
Team Udayavani, Aug 4, 2024, 11:01 PM IST
ಬೆಂಗಳೂರು: ಈ ಹಿಂದೆ ವಚನಭ್ರಷ್ಟತೆ ಆರೋಪ ಮಾಡಿದ್ದ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೇ ಇಂದು ಬಿ.ಎಸ್. ಯಡಿಯೂರಪ್ಪ ಕೈಜೋಡಿಸಿ ಪಾದಯಾತ್ರೆ ಆರಂಭಿಸಿದ್ದಾರೆ.
ಈ ಮೂಲಕ ವರ್ತಮಾನದ ದುರಂತ ನಾಯಕರಾಗಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ಕುಮಾರಸ್ವಾಮಿಯಿಂದ ಅಧಿಕಾರ ವಂಚಿತ ರಾಗಿ ವಚನ ಭ್ರಷ್ಟತೆ ಆರೋಪ ಮಾಡಿ, ಇದೇ ಕಾರಣಕ್ಕೆ ಹೋರಾಟವನ್ನೂ ಮಾಡಿ ಬಿಎಸ್ವೈ ಅಧಿಕಾರಕ್ಕೆ ಬಂದರು. ಅನಂತರ ಬೇರೆ ಬೇರೆ ಸಂದರ್ಭಗಳಲ್ಲಿ ದೇವೇಗೌಡರ ಕುಟುಂಬದ ಮೇಲೆ ವಿಧಾನ ಮಂಡಲದ ಒಳಗಡೆ ಗಂಭೀರ ಆರೋಪಗಳನ್ನು ಮಾಡಿದರು. ಅವು ದಾಖಲೆ ಕೂಡ ಆಗಿವೆ. ಆದರೆ ಮಗನ ರಾಜಕೀಯ ಭವಿಷ್ಯಕ್ಕಾಗಿ ಅದೇ ಕುಮಾರಸ್ವಾಮಿ ಜತೆಗೆ ಕೈಜೋಡಿಸಿದ್ದಾರೆ.
ಯಡಿಯೂರಪ್ಪ 2008ರಲ್ಲಿ ಕುಮಾರಸ್ವಾಮಿ ವಿರುದ್ಧ ಮಾಡಿದ್ದ ವಚನ ಭ್ರಷ್ಟತೆ ಆರೋಪವನ್ನು ಈಗ ಹಿಂಪಡೆಯುತ್ತಾರಾ? 2011ರ ಮಾರ್ಚ್ 17ರಂದು ಮುಡಾದಲ್ಲಿ ದೇವೇಗೌಡ ಕುಟುಂಬ ಅಕ್ರಮವಾಗಿ 48 ನಿವೇಶನ ಪಡೆದಿರುವ ಆರೋಪವನ್ನು ವಾಪಸ್ ಪಡೆಯುತ್ತಾರಾ? ಅದೇ ದಿನ ಜಂತ್ಕಲ್ ಮೈನಿಂಗ್ ನವೀಕರಣದಲ್ಲಿ ದೇವೇಗೌಡರ ಕುಟುಂಬದವರು ಪಾಲುದಾರಿಕೆ ಪಡೆದಿದ್ದಾರೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.