![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 21, 2021, 2:55 PM IST
ಕುಳಗೇರಿ ಕ್ರಾಸ್ : ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅವರು ಬಾದಾಮಿ ತಾಲೂಕಿನಲ್ಲಿ ಸುಮಾರು 45 ವರ್ಷಗಳಿಂದ ಪಕ್ಷ ಕಟ್ಟಿ ಬೆಳೆಸಿದ್ದು, ಅವರಿಗೆಅನ್ಯಾಯವಾದರೆ ತಾಲೂಕಿನಲ್ಲಿ
ಕಾಂಗ್ರೆಸ್ ಪಕ್ಷ ಸರ್ವನಾಶವಾಗುತ್ತದೆ ಎಂದು ಮುಖಂಡ ಶ್ರೀಕಾಂತಗೌಡ ಗೌಡರ ಹೇಳಿದರು.
ಗ್ರಾಮದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಬೆರಳೆಣಿಕೆಯ ಕಾರ್ಯಕರ್ತರ ಮಾತು ಕೇಳಿಕೊಂಡು ಚಿಮ್ಮನಕಟ್ಟಿ ಅವರನ್ನುಕಡೆಗಣಿಸಿ, ಪಕ್ಷದ
ಪ್ರಮುಖರ ಗಮನಕ್ಕೆ ತರದೆ ಪಕ್ಷದ ಹುದ್ದೆಗಳನ್ನು ಬದಲಾಯಿಸಲಾಗುತ್ತಿದೆ ಎಂದು ಆರೋಪಿಸಿದರು.
ಬಾಗಲಕೋಟೆ ಕೆಎಂಎಫ್ ನಿರ್ದೇಶಕ ಈರನಗೌಡ ಕರಿಗೌಡ್ರ ಮಾತನಾಡಿ, ಬಾದಾಮಿ ಕ್ಷೇತ್ರ ತ್ಯಾಗ ಮಾಡಿದ ಚಿಮ್ಮನಕಟ್ಟಿ ಅವರನ್ನು ಕಡೆಗಣಿಸಿ ಪಕ್ಷದ ಚಟುವಟಿಕೆ ನಡೆಸಲಾಗುತ್ತಿದೆ. ಪಕ್ಷಕ್ಕೆ ಅನ್ಯಾಯ ಮಾಡಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಆದ್ಯತೆ ನೀಡುತ್ತಿರುವುದು ಸರಿಯಲ್ಲ ಎಂದರು.
ಕಾಣದ ಕೈಗಳು ಸಿದ್ದರಾಮಯ್ಯ ಹಾಗೂ ಚಿಮ್ಮನಕಟ್ಟಿ ಅವರಲ್ಲಿ ಒಡಕು ಹುಟ್ಟಿಸುವ ಹುನ್ನಾರ ಮಾಡುತ್ತಿವೆ. ಡಿಕೆಶಿ ಅವರು ಅಸಮಾಧಾನಗೊಂಡ ನಾಯಕರನ್ನು ಒಂದೂಗೂಡಿಸುವತ್ತ
ಗಮನ ಹರಿಸಬೇಕು ಎಂದರು. ಶ್ರೀಕಾಂತಅಡಪಟ್ಟಿಮಾತನಾಡಿದರು. ಮುಖಂಡರಾದ ನಿಂಗಪ್ಪ ಕುರಿ, ಹನಮಂತ ಚಿಕ್ಕೊಪ್ಪ, ಬೀರಪ್ಪ ಪೆಂಟಿ, ಶಿವಾನಂದ ಚೋಳನ್ನವರ, ಲಕ್ಷ ¾ಣ
ದಾದನಟ್ಟಿ, ಕಲ್ಲಪ್ಪ ಬೀರಗೌಡ್ರ, ಹನಮಂತ ಸಿಗಾರ, ಪ್ರಕಾಶ ಬಿಲ್ಲಾರ, ಸಿದ್ದಪ್ಪ ಕರಕಿಕಟ್ಟಿ ಇದ್ದರು.
ಇದನ್ನೂ ಓದಿ : ಗ್ರಾಮದೇವತೆ ಜಾತ್ರೆಗೆ ಪೂರ್ಣಕುಂಭ ಮೆರಗು : ಗ್ರಾಮ ದೇವಿಯರ ಭವ್ಯ ಮೆರವಣಿಗೆ
You seem to have an Ad Blocker on.
To continue reading, please turn it off or whitelist Udayavani.