“ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ವಾಪಸ್‌: ಕಾನೂನು ಉಲ್ಲಂಘನೆಯಾಗಿಲ್ಲ’

ರಾಜ್ಯ ಸರಕಾರದಿಂದ ಹೈಕೋರ್ಟ್‌ನಲ್ಲಿ ಪ್ರತಿಪಾದನೆ

Team Udayavani, May 27, 2024, 9:25 PM IST

“ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ವಾಪಸ್‌: ಕಾನೂನು ಉಲ್ಲಂಘನೆಯಾಗಿಲ್ಲ’

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಸಂಬಂಧದ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿಯನ್ನು ರಾಜ್ಯ ಸಚಿವ ಸಂಪುಟ ಹಿಂಪಡೆದಿರುವ ತೀರ್ಮಾನದಲ್ಲಿ ಯಾವುದೇ ರೀತಿಯಲ್ಲೂ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ರಾಜ್ಯ ಸರಕಾರ ಹೈಕೋರ್ಟ್‌ನಲ್ಲಿ ಪ್ರತಿಪಾದಿಸಿದೆ.

ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿಯನ್ನು ರಾಜ್ಯ ಸರಕಾರ ಕಳೆದ ನವೆಂಬರ್‌ನಲ್ಲಿ ಹಿಂದೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ಸಿಬಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್‌ ಮತ್ತು ನ್ಯಾಯಮೂರ್ತಿ ಉಮೇಶ್‌ ಎಂ.ಅಡಿಗ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ.

ಡಿ ಕೆ.ಶಿವಕುಮಾರ್‌ ವಿರುದ್ಧದ ತನಿಖೆಗೆ ಸಮ್ಮತಿ ನೀಡುವಾಗ ಯಾವ ಸೆಕ್ಷನ್‌ಗಳಡಿ ಅಪರಾಧವಿದೆ ಎಂದು ಅಂದಿನ ರಾಜ್ಯ ಸರಕಾರ ತಿಳಿಸಿಲ್ಲ. ಒಕ್ಕೂಟ ವ್ಯವಸ್ಥೆಯ ನಿಯಮಗಳ ಪಾಲನೆ ಆಗಿಲ್ಲ. ಪ್ರಕರಣ ತನಿಖೆಯನ್ನು ಸಿಬಿಐಗೆ ಒಪ್ಪಿಸಿರುವ ಕ್ರಮವೇ ಕಾನೂನುಬಾಹಿರ. ಆದ್ದರಿಂದ ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ವಜಾ ಗೊಳಿಸಬೇಕೆಂದು ರಾಜ್ಯ ಸರಕಾರದ ಪರ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದಿಸಿದರು.

ಡಿ.ಕೆ.ಶಿವಕುಮಾರ್‌ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ, ಒಕ್ಕೂಟ ವ್ಯವಸ್ಥೆ ಸಂವಿಧಾನದ ಅತ್ಯಗತ್ಯ ಭಾಗವಾಗಿದೆ. ಮೊದಲು ಕೇಂದ್ರ, ಬಳಿಕ ರಾಜ್ಯ ಸರಕಾರ ಸಿಬಿಐ ತನಿಖೆಗೆ ಅನುಮತಿ ನೀಡಬೇಕು. ಕೇಂದ್ರ ಅನುಮತಿ ನೀಡಿದರೂ ರಾಜ್ಯ ಸರಕಾರದ ಸಮ್ಮತಿ ಇಲ್ಲದೆ ತನಿಖೆ ನಡೆಸುವುದಕ್ಕೆ ಅವಕಾಶವೇ ಇಲ್ಲ ವಾದಿಸಿದರು.

ಸಿಬಿಐ ಕೇಂದ್ರ ಸರಕಾರದ ಏಜೆಂಟ್‌ನಂತೆ ಕಾರ್ಯನಿರ್ವಹಿಸುತ್ತಿದೆ. ಸಿಬಿಐ ಯಾವ ರಸ್ತೆಗೆ, ಯಾರ ಮನೆಗೆ ಹೋಗಬೇಕು, ಎಲ್ಲಿಗೆ ಹೋಗಬೇಕೆಂದು ಕೇಂದ್ರ ಸರಕಾರ ನಿರ್ಧರಿಸುತ್ತಿದೆ. ಉಳಿದಂತೆ ತನಿಖೆಯನ್ನು ಮಾತ್ರ ಸಿಬಿಐ ನಡೆಸುತ್ತಿದೆ. ಹೀಗಾಗಿ ಸಿಬಿಐ ತನಿಖೆಯು ಒಕ್ಕೂಟ ವ್ಯವಸ್ಥೆಗೆ ಸಹಾಯಕವಾಗಿಲ್ಲ ಎಂದು ವಾದಿಸಿದರು.
ಸಿಬಿಐ ಪರ ವಕೀಲರು ವಾದ ಮಂಡಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿತು.

ಟಾಪ್ ನ್ಯೂಸ್

Prayagraj ಮಹಾಕುಂಭ ಮೇಳ : ಪುಣ್ಯಸ್ನಾನ ಮಾಡಿದ ಸೋದೆ ಶ್ರೀಗಳು

Prayagraj ಮಹಾಕುಂಭ ಮೇಳ : ಪುಣ್ಯಸ್ನಾನ ಮಾಡಿದ ಸೋದೆ ಶ್ರೀಗಳು

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎಂ. 11 ಕಂಪೆನಿಗೆ ಎಚ್ಚರಿಕೆ ನೋಟಿಸ್‌

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎಂ. 11 ಕಂಪೆನಿಗೆ ಎಚ್ಚರಿಕೆ ನೋಟಿಸ್‌

ಸುರಕ್ಷೆ ಖಚಿತಪಡಿಸಲು ಹಣಕಾಸು ಸಂಸ್ಥೆ, ಆಭರಣ ಸಂಸ್ಥೆಗಳಿಗೆ ಪೊಲೀಸ್‌ ಸೂಚನೆ

ಸುರಕ್ಷೆ ಖಚಿತಪಡಿಸಲು ಹಣಕಾಸು ಸಂಸ್ಥೆ, ಆಭರಣ ಸಂಸ್ಥೆಗಳಿಗೆ ಪೊಲೀಸ್‌ ಸೂಚನೆ

Moodbidri: ವಾರಾಣಸಿಯಲ್ಲಿ ಅಂತಾರಾಷ್ಟ್ರೀಯ ಅಧ್ಯಾತ್ಮ ಸಮ್ಮೇಳನ “ಆತ್ಮನ್‌’

Moodbidri: ವಾರಾಣಸಿಯಲ್ಲಿ ಅಂತಾರಾಷ್ಟ್ರೀಯ ಅಧ್ಯಾತ್ಮ ಸಮ್ಮೇಳನ “ಆತ್ಮನ್‌’

ಗೀತಾರ್ಥ ಚಿಂತನೆ-178: ಭಗವಂತನನ್ನು ಅರಿತರೆ ಜಗತ್ತನ್ನು ಅರಿತಂತೆ

Udupi: ಗೀತಾರ್ಥ ಚಿಂತನೆ-178: ಭಗವಂತನನ್ನು ಅರಿತರೆ ಜಗತ್ತನ್ನು ಅರಿತಂತೆ

Udupi: ಯೋಗದಿಂದ ದೈಹಿಕ, ಮಾನಸಿಕ ಸ್ವಾಸ್ಥ್ಯ : ಪುತ್ತಿಗೆ ಶ್ರೀ

Udupi: ಯೋಗದಿಂದ ದೈಹಿಕ, ಮಾನಸಿಕ ಸ್ವಾಸ್ಥ್ಯ : ಪುತ್ತಿಗೆ ಶ್ರೀ

Subrahmanya: ಹಣವಿದ್ದ ಬ್ಯಾಗ್‌ ಕಳ್ಳರ ಪಾಲು

Subrahmanya: ಹಣವಿದ್ದ ಬ್ಯಾಗ್‌ ಕಳ್ಳರ ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Online ಗೇಮ್ ನಲ್ಲಿ 20 ಲಕ್ಷ ರೂ. ಕಳೆದುಕೊಂಡ ಯುವಕ ನೇಣಿಗೆ ಶರಣು

Online ಗೇಮ್ ನಲ್ಲಿ 20 ಲಕ್ಷ ರೂ. ಕಳೆದುಕೊಂಡು ನೇಣಿಗೆ ಶರಣಾದ ಯುವಕ

HD-Revanna

ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್‌ ಶಾಸಕರ ಸೆಳೆಯೋ ದುಸ್ಥಿತಿ: ಎಚ್‌.ಡಿ.ರೇವಣ್ಣ

Dandeli: ಮೀಟರ್ ಬಡ್ಡಿ ದಂಧೆ ವಿರುದ್ಧ ಕಾರ್ಯಾಚರಣೆ: ಇಬ್ಬರ ಬಂಧನ

Dandeli: ಮೀಟರ್ ಬಡ್ಡಿ ದಂಧೆ ವಿರುದ್ಧ ಕಾರ್ಯಾಚರಣೆ: ಇಬ್ಬರ ಬಂಧನ

Belagavi: ಹೆಲ್ಮೆಟ್ ಧರಿಸದೆ ಬೈಕ್ ಸವಾರಿ… ರಸ್ತೆ ಅಪಘಾತ, ಯುವ ನೇಕಾರ ಮೃತ್ಯು…

Belagavi: ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡಿ ಜೀವ ಕಳೆದುಕೊಂಡ ಯುವ ನೇಕಾರ

ಮೃತಪಟ್ಟಿದ್ದ ಮಹಿಳೆ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಾಗ ಕಬಳಿಸಿದ ನಾಲ್ವರು ಸೆರೆ

ಮೃತಪಟ್ಟಿದ್ದ ಮಹಿಳೆ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಾಗ ಕಬಳಿಸಿದ ನಾಲ್ವರು ಸೆರೆ

MUST WATCH

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

ಹೊಸ ಸೇರ್ಪಡೆ

Prayagraj ಮಹಾಕುಂಭ ಮೇಳ : ಪುಣ್ಯಸ್ನಾನ ಮಾಡಿದ ಸೋದೆ ಶ್ರೀಗಳು

Prayagraj ಮಹಾಕುಂಭ ಮೇಳ : ಪುಣ್ಯಸ್ನಾನ ಮಾಡಿದ ಸೋದೆ ಶ್ರೀಗಳು

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎಂ. 11 ಕಂಪೆನಿಗೆ ಎಚ್ಚರಿಕೆ ನೋಟಿಸ್‌

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎಂ. 11 ಕಂಪೆನಿಗೆ ಎಚ್ಚರಿಕೆ ನೋಟಿಸ್‌

ಸುರಕ್ಷೆ ಖಚಿತಪಡಿಸಲು ಹಣಕಾಸು ಸಂಸ್ಥೆ, ಆಭರಣ ಸಂಸ್ಥೆಗಳಿಗೆ ಪೊಲೀಸ್‌ ಸೂಚನೆ

ಸುರಕ್ಷೆ ಖಚಿತಪಡಿಸಲು ಹಣಕಾಸು ಸಂಸ್ಥೆ, ಆಭರಣ ಸಂಸ್ಥೆಗಳಿಗೆ ಪೊಲೀಸ್‌ ಸೂಚನೆ

Moodbidri: ವಾರಾಣಸಿಯಲ್ಲಿ ಅಂತಾರಾಷ್ಟ್ರೀಯ ಅಧ್ಯಾತ್ಮ ಸಮ್ಮೇಳನ “ಆತ್ಮನ್‌’

Moodbidri: ವಾರಾಣಸಿಯಲ್ಲಿ ಅಂತಾರಾಷ್ಟ್ರೀಯ ಅಧ್ಯಾತ್ಮ ಸಮ್ಮೇಳನ “ಆತ್ಮನ್‌’

ಗೀತಾರ್ಥ ಚಿಂತನೆ-178: ಭಗವಂತನನ್ನು ಅರಿತರೆ ಜಗತ್ತನ್ನು ಅರಿತಂತೆ

Udupi: ಗೀತಾರ್ಥ ಚಿಂತನೆ-178: ಭಗವಂತನನ್ನು ಅರಿತರೆ ಜಗತ್ತನ್ನು ಅರಿತಂತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.