“ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ವಾಪಸ್‌: ಕಾನೂನು ಉಲ್ಲಂಘನೆಯಾಗಿಲ್ಲ’

ರಾಜ್ಯ ಸರಕಾರದಿಂದ ಹೈಕೋರ್ಟ್‌ನಲ್ಲಿ ಪ್ರತಿಪಾದನೆ

Team Udayavani, May 27, 2024, 9:25 PM IST

“ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ವಾಪಸ್‌: ಕಾನೂನು ಉಲ್ಲಂಘನೆಯಾಗಿಲ್ಲ’

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಸಂಬಂಧದ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿಯನ್ನು ರಾಜ್ಯ ಸಚಿವ ಸಂಪುಟ ಹಿಂಪಡೆದಿರುವ ತೀರ್ಮಾನದಲ್ಲಿ ಯಾವುದೇ ರೀತಿಯಲ್ಲೂ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ರಾಜ್ಯ ಸರಕಾರ ಹೈಕೋರ್ಟ್‌ನಲ್ಲಿ ಪ್ರತಿಪಾದಿಸಿದೆ.

ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿಯನ್ನು ರಾಜ್ಯ ಸರಕಾರ ಕಳೆದ ನವೆಂಬರ್‌ನಲ್ಲಿ ಹಿಂದೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ಸಿಬಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್‌ ಮತ್ತು ನ್ಯಾಯಮೂರ್ತಿ ಉಮೇಶ್‌ ಎಂ.ಅಡಿಗ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ.

ಡಿ ಕೆ.ಶಿವಕುಮಾರ್‌ ವಿರುದ್ಧದ ತನಿಖೆಗೆ ಸಮ್ಮತಿ ನೀಡುವಾಗ ಯಾವ ಸೆಕ್ಷನ್‌ಗಳಡಿ ಅಪರಾಧವಿದೆ ಎಂದು ಅಂದಿನ ರಾಜ್ಯ ಸರಕಾರ ತಿಳಿಸಿಲ್ಲ. ಒಕ್ಕೂಟ ವ್ಯವಸ್ಥೆಯ ನಿಯಮಗಳ ಪಾಲನೆ ಆಗಿಲ್ಲ. ಪ್ರಕರಣ ತನಿಖೆಯನ್ನು ಸಿಬಿಐಗೆ ಒಪ್ಪಿಸಿರುವ ಕ್ರಮವೇ ಕಾನೂನುಬಾಹಿರ. ಆದ್ದರಿಂದ ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ವಜಾ ಗೊಳಿಸಬೇಕೆಂದು ರಾಜ್ಯ ಸರಕಾರದ ಪರ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದಿಸಿದರು.

ಡಿ.ಕೆ.ಶಿವಕುಮಾರ್‌ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ, ಒಕ್ಕೂಟ ವ್ಯವಸ್ಥೆ ಸಂವಿಧಾನದ ಅತ್ಯಗತ್ಯ ಭಾಗವಾಗಿದೆ. ಮೊದಲು ಕೇಂದ್ರ, ಬಳಿಕ ರಾಜ್ಯ ಸರಕಾರ ಸಿಬಿಐ ತನಿಖೆಗೆ ಅನುಮತಿ ನೀಡಬೇಕು. ಕೇಂದ್ರ ಅನುಮತಿ ನೀಡಿದರೂ ರಾಜ್ಯ ಸರಕಾರದ ಸಮ್ಮತಿ ಇಲ್ಲದೆ ತನಿಖೆ ನಡೆಸುವುದಕ್ಕೆ ಅವಕಾಶವೇ ಇಲ್ಲ ವಾದಿಸಿದರು.

ಸಿಬಿಐ ಕೇಂದ್ರ ಸರಕಾರದ ಏಜೆಂಟ್‌ನಂತೆ ಕಾರ್ಯನಿರ್ವಹಿಸುತ್ತಿದೆ. ಸಿಬಿಐ ಯಾವ ರಸ್ತೆಗೆ, ಯಾರ ಮನೆಗೆ ಹೋಗಬೇಕು, ಎಲ್ಲಿಗೆ ಹೋಗಬೇಕೆಂದು ಕೇಂದ್ರ ಸರಕಾರ ನಿರ್ಧರಿಸುತ್ತಿದೆ. ಉಳಿದಂತೆ ತನಿಖೆಯನ್ನು ಮಾತ್ರ ಸಿಬಿಐ ನಡೆಸುತ್ತಿದೆ. ಹೀಗಾಗಿ ಸಿಬಿಐ ತನಿಖೆಯು ಒಕ್ಕೂಟ ವ್ಯವಸ್ಥೆಗೆ ಸಹಾಯಕವಾಗಿಲ್ಲ ಎಂದು ವಾದಿಸಿದರು.
ಸಿಬಿಐ ಪರ ವಕೀಲರು ವಾದ ಮಂಡಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿತು.

ಟಾಪ್ ನ್ಯೂಸ್

Fraud Case: ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

Fraud Case: ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

ಇನ್ನು ಮುಂದೆ ಡಿಪ್ಲೊಮಾಕ್ಕೂ ಡಿಜಿಟಲ್‌ ಮೌಲ್ಯಮಾಪನ; ತಾಂತ್ರಿಕ ಶಿಕ್ಷಣ ಇಲಾಖೆ ಅಸ್ತು

ಇನ್ನು ಮುಂದೆ ಡಿಪ್ಲೊಮಾಕ್ಕೂ ಡಿಜಿಟಲ್‌ ಮೌಲ್ಯಮಾಪನ; ತಾಂತ್ರಿಕ ಶಿಕ್ಷಣ ಇಲಾಖೆ ಅಸ್ತು

ಹವಾಮಾನ ವೈಪರೀತ್ಯ: ಕರಟುತ್ತಿರುವ ಗೇರು ಹೂ; ಶೇ. 50ರಷ್ಟು ಇಳುವರಿ ಕುಸಿಯುವ ಆತಂಕ

ಹವಾಮಾನ ವೈಪರೀತ್ಯ: ಕರಟುತ್ತಿರುವ ಗೇರು ಹೂ; ಶೇ. 50ರಷ್ಟು ಇಳುವರಿ ಕುಸಿಯುವ ಆತಂಕ

Madanthyar: ಕುತೂಹಲ ಮೂಡಿಸಿದ ವಿಚಿತ್ರ ಘಟನೆ: ಮನೆಯನ್ನೇ ತ್ಯಜಿಸಿದರು

Madanthyar: ಕುತೂಹಲ ಮೂಡಿಸಿದ ವಿಚಿತ್ರ ಘಟನೆ: ಮನೆಯನ್ನೇ ತ್ಯಜಿಸಿದರು

1-horoscope

Daily Horoscope: ಕೈಗೊಂಡ ಕಾರ್ಯಗಳಲ್ಲಿ ಆಶ್ಚರ್ಯಕರ ಯಶಸ್ಸು,ನಿರೀಕ್ಷಿತ ಲಾಭ ಕೈಸೇರಿ ಹರ್ಷ

Market: ಬೆಳ್ಳುಳ್ಳಿ ದರ ಕೆಜಿಗೆ 500ರಿಂದ 150 ರೂ.ಗೆ ಕುಸಿತ

Market: ಬೆಳ್ಳುಳ್ಳಿ ದರ ಕೆಜಿಗೆ 500ರಿಂದ 150 ರೂ.ಗೆ ಕುಸಿತ

mob

WhatsApp; ಲಿಂಕ್‌ ತೆರೆಯದಿದ್ದರೂ ವಾಟ್ಸ್‌ಆ್ಯಪ್‌ ಖಾತೆಗಳು ಹ್ಯಾಕ್‌: ಎಚ್ಚರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇನ್ನು ಮುಂದೆ ಡಿಪ್ಲೊಮಾಕ್ಕೂ ಡಿಜಿಟಲ್‌ ಮೌಲ್ಯಮಾಪನ; ತಾಂತ್ರಿಕ ಶಿಕ್ಷಣ ಇಲಾಖೆ ಅಸ್ತು

ಇನ್ನು ಮುಂದೆ ಡಿಪ್ಲೊಮಾಕ್ಕೂ ಡಿಜಿಟಲ್‌ ಮೌಲ್ಯಮಾಪನ; ತಾಂತ್ರಿಕ ಶಿಕ್ಷಣ ಇಲಾಖೆ ಅಸ್ತು

R Ashok (2)

BJP Rift; ಮುಂದಿನ ವಾರ ವಿಪಕ್ಷ ನಾಯಕ ಅಶೋಕ್‌ ದಿಲ್ಲಿಗೆ?

1-cm-ex

Karnataka CM, Ex CM; ಸಿದ್ದು, ಯಡಿಯೂರಪ್ಪ ಭವಿಷ್ಯ ಇಂದು ನಿರ್ಧಾರ

HighCourt: ಪಿಲಿಕುಳ ಕಂಬಳದ ಆಕ್ಷೇಪಣೆ ಅರ್ಜಿ ವಿಚಾರಣೆ ಫೆ. 18ಕ್ಕೆ ಮುಂದೂಡಿಕೆ

HighCourt: ಪಿಲಿಕುಳ ಕಂಬಳದ ಆಕ್ಷೇಪಣೆ ಅರ್ಜಿ ವಿಚಾರಣೆ ಫೆ. 18ಕ್ಕೆ ಮುಂದೂಡಿಕೆ

1-kandaya

ಕಂದಾಯ ದಾಖಲೆ ಗಣಕೀಕರಣ 8 ಕಡೆ ಪೂರ್ಣ: ಲಾಭವೇನು?

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

Fraud Case: ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

Fraud Case: ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

ಇನ್ನು ಮುಂದೆ ಡಿಪ್ಲೊಮಾಕ್ಕೂ ಡಿಜಿಟಲ್‌ ಮೌಲ್ಯಮಾಪನ; ತಾಂತ್ರಿಕ ಶಿಕ್ಷಣ ಇಲಾಖೆ ಅಸ್ತು

ಇನ್ನು ಮುಂದೆ ಡಿಪ್ಲೊಮಾಕ್ಕೂ ಡಿಜಿಟಲ್‌ ಮೌಲ್ಯಮಾಪನ; ತಾಂತ್ರಿಕ ಶಿಕ್ಷಣ ಇಲಾಖೆ ಅಸ್ತು

ಹವಾಮಾನ ವೈಪರೀತ್ಯ: ಕರಟುತ್ತಿರುವ ಗೇರು ಹೂ; ಶೇ. 50ರಷ್ಟು ಇಳುವರಿ ಕುಸಿಯುವ ಆತಂಕ

ಹವಾಮಾನ ವೈಪರೀತ್ಯ: ಕರಟುತ್ತಿರುವ ಗೇರು ಹೂ; ಶೇ. 50ರಷ್ಟು ಇಳುವರಿ ಕುಸಿಯುವ ಆತಂಕ

Madanthyar: ಕುತೂಹಲ ಮೂಡಿಸಿದ ವಿಚಿತ್ರ ಘಟನೆ: ಮನೆಯನ್ನೇ ತ್ಯಜಿಸಿದರು

Madanthyar: ಕುತೂಹಲ ಮೂಡಿಸಿದ ವಿಚಿತ್ರ ಘಟನೆ: ಮನೆಯನ್ನೇ ತ್ಯಜಿಸಿದರು

Court-1

Mangaluru: ಪತ್ನಿಯ ಕೊ*ಲೆ; ಪತಿಗೆ ಜೀವಾವಧಿ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.