![akhilesh](https://www.udayavani.com/wp-content/uploads/2024/07/akhilesh-415x291.jpg)
Parappana ಅಗ್ರಹಾರದಲ್ಲಿ ಸಪ್ಪೆ ಮುಖದಲ್ಲಿ ಎರಡು ದಿನ ಕಳೆದ “ದಾಸ’!
ಜೈಲೂಟ ಹಿಡಿಸದೇ ಪರದಾಟ ;ಪತ್ರಿಕೆಗಳನ್ನು ಕೊಟ್ಟರೂ ಮುಖ ತಿರುವುತ್ತಿರುವ ನಟ ದರ್ಶನ್ !
Team Udayavani, Jun 24, 2024, 7:10 AM IST
![Parappana ಅಗ್ರಹಾರದಲ್ಲಿ ಸಪ್ಪೆ ಮುಖದಲ್ಲಿ ಎರಡು ದಿನ ಕಳೆದ “ದಾಸ’!](https://www.udayavani.com/wp-content/uploads/2024/06/actor-darshan-620x349.jpg)
ಬೆಂಗಳೂರು: ಮಾಂಸದೂಟ, ಕೈಗೊಬ್ಬ-ಕಾಲಿಗೊಬ್ಬ ಆಳು, ಓಡಾಡಲು ಕೋಟಿ ಬೆಲೆಯ ಕಾರು, ಐಷಾರಾಮಿ ಮನೆ ಸೇರಿದಂತೆ ಸುಖದ ಸುಪ್ಪತ್ತಿಗೆಯಲ್ಲಿ ಬದುಕುತ್ತಿದ್ದ ನಟ ದರ್ಶನ್ ಇದೀಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಾಮಾನ್ಯ ಕೈದಿಯಂತೆ 2 ದಿನಗಳಿಂದ ಮುದ್ದೆ ಮುರಿಯುವಂತಾಗಿದೆ.
ದರ್ಶನ್ಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಜೈಲಿನ ಸೆಕ್ಯುರಿಟಿ ರೂಮ್ ನಂ. 3ರಲ್ಲಿ ನಟ ದರ್ಶನ್ ಹಾಗೂ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮತ್ತೂಬ್ಬ ಆರೊಪಿ ವಿನಯ್ ಸಹ ಕೈದಿಯಾಗಿ ಸೆರೆವಾಸ ಅನುಭವಿಸುತ್ತಿದ್ದಾನೆ. ಶನಿವಾರ ರಾತ್ರಿ ದರ್ಶನ್ಗೆ ಜೈಲಿನ ಮೆನುವಿನಂತೆ ಮುದ್ದೆ, ಚಪಾತಿ, ಅನ್ನ ಸಾಂಬಾರ್, ಮಜ್ಜಿಗೆ ನೀಡ ಲಾಗಿದೆ. ದಿನದಲ್ಲಿ ಹೆಚ್ಚು ಮಾಂಸಾಹಾರ ಸೇವನೆ ಮಾಡುತ್ತಿದ್ದ ದರ್ಶನ್ಗೆ ಜೈಲೂಟ ಸರಿಯಾಗಿ ಸೇರುತ್ತಿಲ್ಲ. ಚಪಾತಿ ಮಾತ್ರ ತಿಂದು ಮಜ್ಜಿಗೆ ಕುಡಿದಿರುವ ದರ್ಶನ್, ಜೈಲು ಸಿಬಂದಿ ಕೊಟ್ಟ ಅನ್ನ ಬೇಡ ಎಂದಿರುವುದು ಗೊತ್ತಾಗಿದೆ.
ರವಿವಾರ ಬೆಳಗ್ಗೆ 6.30ರ ಸುಮಾರಿಗೆ ಎದ್ದ ದರ್ಶನ್ ನಿತ್ಯಕರ್ಮ ಮುಗಿಸಿ ಸೆಲ್ನಲ್ಲಿ ಮೌನವಾಗಿದ್ದ. ಬಳಿಕ ಪಲಾವ್ ಸೇವಿಸಿದ್ದಾರೆ. ಜೈಲು ಸಿಬಂದಿ ಕೊಟ್ಟಿರುವ ಕಾಫಿ ಸೇವಿಸದೆ, ದಿನಪತ್ರಿಕೆಯನ್ನೂ ಓದಿಲ್ಲ. ಮಧ್ಯಾಹ್ನ ಅನ್ನ, ಸಾಂಬರ್, ಮುದ್ದೆ, ಮಜ್ಜಿಗೆ ನೀಡಲಾಗಿದೆ. ರಾತ್ರಿ ಚಪಾತಿ, ಮುದ್ದೆ, ಅನ್ನ, ಸಾಂಬಾರ್ ನೀಡಿದ್ದಾರೆ.
ಚಿಂತಾಕ್ರಾಂತ ಪವಿತ್ರಾ: ಇನ್ನು ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಕೂಡ ಜೈಲೂಟ ಉಂಡು ಚಿಂತೆಗೊಳಗಾಗಿದ್ದಾಳೆ. ಇತರ ಆರೋಪಿಗಳೂ ಅದೇ ಜೈಲಲ್ಲಿದ್ದಾರೆ.
ಶೀಘ್ರ ಸ್ಥಳಾಂತರ?
ಆರೋಪಿಗಳು ಈಗಾಗಲೇ ಒಳಸಂಚಿನಲ್ಲಿ ಭಾಗಿಯಾಗಿದ್ದಾರೆ. ಎಲ್ಲರನ್ನೂ ಒಂದೇ ಜೈಲಿನಲ್ಲಿ ರಿಸಿದರೆ ಸಂಚು ರೂಪಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ರಾಜ್ಯದ ವಿವಿಧ ಜೈಲುಗಳಲ್ಲಿ ಇರಿಸಲು ನಿರ್ದೇಶಿಸುವಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಾಲಯವು ಸೋಮವಾರ ಮತ್ತೆ ವಿಚಾರಣೆ ನಡೆಸಿ ಸ್ಥಳಾಂತರಿಸುವ ಬಗ್ಗೆ ನಿರ್ಧರಿಸುವ ಸಾಧ್ಯತೆಗಳಿವೆ.
ಜೈಲಿನತ್ತ ಧಾವಿಸಿದ ಅಭಿಮಾನಿಗಳು
ದರ್ಶನ್ ಇರುವ ಜೈಲಿನ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ರವಿವಾರ ಉತ್ತರ ಕರ್ನಾಟಕ ಸೇರಿ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಅಭಿಮಾನಿಗಳು ಪರಪ್ಪನ ಅಗ್ರಹಾರದತ್ತ ಧಾವಿಸಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಟಾಪ್ ನ್ಯೂಸ್
![akhilesh](https://www.udayavani.com/wp-content/uploads/2024/07/akhilesh-415x291.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![CID ಸೂರಜ್ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ](https://www.udayavani.com/wp-content/uploads/2024/06/suraj-revanna-5-150x85.jpg)
CID ಸೂರಜ್ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ
![“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ](https://www.udayavani.com/wp-content/uploads/2024/06/Parameshwar-7-150x96.jpg)
Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ
![Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ](https://www.udayavani.com/wp-content/uploads/2024/06/SHIVA-150x90.jpg)
Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ
![1-asdsad](https://www.udayavani.com/wp-content/uploads/2024/06/1-asdsad-6-150x92.jpg)
Election; ಧಾರವಾಡ ಕೆಎಂಎಫ್ ಗೆ 9 ಮಂದಿ ನಿರ್ದೇಶಕರ ಆಯ್ಕೆ
![prahlad-joshi](https://www.udayavani.com/wp-content/uploads/2024/06/prahlad-joshi-2-150x86.jpg)
Siddaramaiah ಸರಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ: ಸಚಿವ ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.