ಪ್ರತಾಪ್ ಸಿಂಹ ಅಪ್ಪನಿಗೆ ಹುಟ್ಟಿದ್ರೆ ಬಂದು ಮುಟ್ಟಲಿ;ದೇವಯ್ಯ ಸವಾಲು
Team Udayavani, Sep 15, 2018, 2:49 PM IST
ಮಡಿಕೇರಿ : ಅವನು ಅಪ್ಪನಿಗೆ ಹುಟ್ಟಿದ್ದರೆ ಬಂದು ಮಟ್ಟಲಿ ನೋಡೋಣ. ಆ ಮೇಲೆ ನಾನ್ಯಾರು, ಕೊಡಗಿನ ಜನ ಯಾರು ಎಂದು ತೋರಿಸುತ್ತೇನೆ…ಇದು ಹಿರಿಯ ಬಿಜೆಪಿ ಕಾರ್ಯಕರ್ತ ಎಂ.ಬಿ.ದೇವಯ್ಯ ಅವರು ಸಂಸದ ಪ್ರತಾಪ್ ಸಿಂಹ ಅವರಿಗೆ ಶನಿವಾರ ಹಾಕಿದ ಸವಾಲು.
ಮಡಿಕೇರಿಯ ಹೆಬ್ಬಟ್ಟಗೇರಿಯಲ್ಲಿ ಕೇಂದ್ರ ತಂಡಕ್ಕೆ ಭೂ ಪರಿವರ್ತನೆಯ ಬಗ್ಗೆ ಮಾಹಿತಿ ನೀಡುವ ವಿಚಾರದಲ್ಲಿ 68 ರ ಹರೆಯದ ದೇವಯ್ಯ ಅವರು ಪ್ರತಾಪ್ ಸಿಂಹ ಅವರಿಗೆ ನೂರಾರು ಜನರ ಮುಂದೆಯೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ನಿಮ್ಮನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದೇ ತಪ್ಪು ಎಂದಿದ್ದರು. ಆ ಬಳಿಕ ಪ್ರತಾಪ್ ಸಿಂಹ ಫೇಸ್ಬುಕ್ ಲೈವ್ನಲ್ಲಿ ಸ್ಪಷ್ಟನೆ ನೀಡುವ ವೇಳೆ ತದುಕಬೇಕು ಅನ್ನಿಸಿತ್ತು ಎಂದಿದ್ದರು.
ಇದೀಗ ಮತ್ತೆ ದೇವಯ್ಯ ಅವರು ಕೆರಳಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ತದುಕಿಸಿಕೊಳ್ಳುವಷ್ಟು ಮುಟ್ಟಾಳ ನಾನಲ್ಲ. ನಾನು ಗಾಂಧಿ ವಾದಿಯಲ್ಲ , ನಾನು ಸುಭಾಷ್ ಚಂದ್ರ ಬೋಸ್ , ಚಂದ್ರಶೇಖರ್ ಅಜಾದ್ ಅವರ ವರ್ಗಕ್ಕೆ ಸೇರಿದವನು. ಹೊಡೆವನಿಗೆ ಇನ್ನೊಂದು ಕೆನ್ನೆ ತೋರಿಸುವುದಿಲ್ಲ. ತಾಕತ್ ಇದ್ದರೆ ಬಂದು ಮುಟ್ಟಿ ನೋಡಲಿ. ಆವಾಗ ದೇವಯ್ಯ ಯಾರು, ಕೊಡಗಿನ ಜನ ಯಾರು ಎನ್ನುವುದನ್ನು ತೋರಿಸುತ್ತೇನೆ. ಅವನು ಅಪ್ಪನಿಗೆ ಹುಟ್ಟಿದ ಮಗ ಆದರೆ ನನ್ನನ್ನು ಬಂದು ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi: ಕಾಲುಬಾಯಿ ರೋಗ… ಒಂದೇ ವಾರದಲ್ಲಿ 30ಕ್ಕೂ ಹೆಚ್ಚು ಕುರಿ-ಮೇಕೆಗಳ ಸಾವು
Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…
Actor Darshan: ನಟ ದರ್ಶನ್ ಜಾಮೀನು ಅರ್ಜಿ ಹೈಕೋರ್ಟ್ನಲ್ಲಿ ಇಂದು ವಿಚಾರಣೆ
Assembly By Election: ಗೆದ್ದು ಬನ್ನಿ; ಕಾಂಗ್ರೆಸ್ ಸಚಿವರಿಗೆ ರಣದೀಪ್ ಸುರ್ಜೇವಾಲ ಹುಕುಂ
Waqf Property: ವಕ್ಫ್ ಭೂ ವಿವಾದ: ಬಿಜೆಪಿ ಗಡುವು, ಹೋರಾಟದ ಎಚ್ಚರಿಕೆ
MUST WATCH
ಹೊಸ ಸೇರ್ಪಡೆ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
Potholes: ಮೆಜೆಸ್ಟಿಕ್ ಬಸ್ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು
Arrested: ವಿದ್ಯಾರ್ಥಿನಿಗೆ ಮುತ್ತು ನೀಡಿದ್ದ ಸೆಕ್ಯುರಿಟಿ ಗಾರ್ಡ್ ಬಂಧನ
Arjun Janya: ಭರ್ಜರಿ ಮೊತ್ತಕ್ಕೆ ಮಾರಾಟವಾಯ್ತು ʼ45ʼ ಆಡಿಯೋ ರೈಟ್ಸ್
Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.