ಜಿಲ್ಲಾ ಯೋಜನಾ ಸಮಿತಿ ಸಭೆ: 434 ಕೋ.ರೂ.ಗೆ ಅನುಮೋದನೆ


Team Udayavani, Feb 9, 2018, 11:54 AM IST

money-500-2000.jpg

ಉಡುಪಿ: ಸ್ಥಳೀಯ ಸಂಸ್ಥೆಗಳ ಕ್ರಿಯಾ ಯೋಜನೆಯಡಿ 2017-18ನೇ ಸಾಲಿಗೆ ಪಂಚಾಯತ್‌ರಾಜ್‌ ಸಂಸ್ಥೆಗಳಿಗೆ ಸರಕಾರದಿಂದ ಜಿಲ್ಲಾ ವಲಯ ಯೋಜನೆಯಡಿ 434.21 ಕೋ.ರೂ. ಅನುದಾನ ನಿಗದಿಯಾಗಿದೆ. 

 ಜಿ.ಪಂ.ಗೆ 148.60 ಕೋಟಿ ರೂ., ತಾ.ಪಂ.ಗೆ 267.84 ಕೋಟಿ ರೂ., ಗ್ರಾ.ಪಂ.ಗೆ 17.76 ಕೋಟಿ ರೂ. ಅನುದಾನಕ್ಕೆ ಸಂಬಂಧಿಸಿ ಕ್ರಿಯಾಯೋಜನೆ ತಯಾರಿಸಿ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ವಿವರಿಸಿದರು. 

 ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆ ಬುಧವಾರ ಜಿ. ಪಂ. ಸಭಾಂಗಣದಲ್ಲಿ ನಡೆಯಿತು.

 ತಾ.ಪಂ. ಅನುದಾನಕ್ಕೆ ಸಂಬಂಧಿಸಿ ಕ್ರಿಯಾ ಯೋಜನೆ ಯಡಿ ಉಡುಪಿಗೆ 111.83 ಕೋಟಿ ರೂ., ಕುಂದಾಪುರ 98.56 ಕೋಟಿ ರೂ., ಕಾರ್ಕಳದಲ್ಲಿ 57.45 ಕೋಟಿ ರೂ. ಒಟ್ಟು 267.84 ಕೋಟಿ ರೂ. ಯೋಜನೆಗೆ ಅನುಮೋದನೆ ಪಡೆಯಲಾಯಿತು. 

 ಗ್ರಾ.ಪಂ. ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಉಡುಪಿ ಶಾಸನಬದ್ಧ ಅನುದಾನ 648 ಲಕ್ಷ ರೂ., 14ನೇ ಹಣಕಾಸಿನಡಿ 685.55 ಲಕ್ಷ ರೂ., ಕುಂದಾಪುರ 685, 659.76, ಕಾರ್ಕಳ 356, 1,695.86 ಲಕ್ಷ ರೂ.ಗಳಿಗೆ ಅನುಮೋದನೆ ಪಡೆಯಲಾಗಿದೆ. 

ಈ ಸಭೆ ಜಿಲ್ಲಾ ಯೋಜನಾ ಸಮಿತಿಯ ಎರಡನೇ ಸಭೆಯಾಗಿದ್ದು, ಕ್ರಿಯಾ ಯೋಜನೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಎಸ್‌. ಜನಾರ್ದನ್‌, ಎನ್‌. ಎಸ್‌. ಶೆಟ್ಟಿ ಮಾಹಿತಿ ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವ್ಯವಸ್ಥೆಯ ಧ್ಯೇಯ, ತ್ರಿಸ್ತರ ಆಡಳಿತ ವ್ಯವಸ್ಥೆಯ ಪಾತ್ರದ ಬಗ್ಗೆ ವಿವರಿಸಿದ ಅವರು, ಯೋಜನಾ ಸಮಿತಿ ಹೆಚ್ಚು ಕ್ರಿಯಾಶೀಲವಾಗಿರಬೇಕು. ಇಲ್ಲಿ ರೂಪಿಸಿದ ಯೋಜನೆಗಳು ರಾಜ್ಯ ಬಜೆಟ್‌ನಲ್ಲಿ ಪ್ರತಿಬಿಂಬಿತವಾಗಬೇಕೆಂದರು. 

 ಗ್ರಾಮ ಮಟ್ಟದಲ್ಲಿ ಯೋಜನೆಗಳು ಯಶಸ್ವಿಯಾಗ ಬೇಕಾದರೆ ಮೂರು ಮುಖ್ಯ ಘಟಕಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಅನುಷ್ಠಾನ ಶಕ್ತಿ ದೊರೆಯಬೇಕೆಂದರು. 
ಕಳೆದ ಸಾಲಿಗಿಂತ 46.47 ಕೋಟಿ ರೂ. ಅನುದಾನ ಹೆಚ್ಚು ವರಿಯಾಗಿ ಕೋರಲಾಗಿದ್ದು, ನಮ್ಮ ಜಿಲ್ಲೆಯ ನಮ್ಮ ಗ್ರಾಮ ನಮ್ಮ ಯೋಜನೆ ಉತ್ತಮ ಮಾದರಿಯಾಗಿದೆ ಎಂದರು. 

 ಯೋಜನ ಸಮಿತಿ ಸಭೆಯಲ್ಲೂ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಬಗ್ಗೆ ಸವಿವರ ಚರ್ಚೆ ನಡೆಯಿತಲ್ಲದೆ, ತ್ಯಾಜ್ಯ ಸಂಪನ್ಮೂಲವಾಗಿ ಪರಿವರ್ತನೆಯಾದ ಬಗ್ಗೆ ಮಾಹಿತಿಯನ್ನು ನೀಡಲಾಯಿತು. 

 ಯೋಜನೆ ಕೋಟೇಶ್ವರ, ಸಾಲಿಗ್ರಾಮ, ಗಂಗೊಳ್ಳಿ ಯಂತಹ ಪಂಚಾಯತ್‌ಗಳಲ್ಲಿ ಅನುಷ್ಠಾನಗೊಳ್ಳಲು ಮುಖ್ಯ ಯೋಜನಾಧಿಕಾರಿಗಳು ಖುದ್ದು ಭೇಟಿ ನೀಡಿ ಪಿಡಿಒ ಗಳನ್ನು ಬೆಂಬಲಿಸುವ ಕೆಲಸವಾಗಬೇಕೆಂದು ಶಾಸಕ ರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು. 

ನದಿಗೆ ಕೋಳಿತ್ಯಾಜ್ಯ
ಸೀತಾನದಿಯನ್ನು ಕೋಳಿತ್ಯಾಜ್ಯದಿಂದ ಕಲುಷಿತ ಗೊಳಿಸುತ್ತಿರುವ ಬಗ್ಗೆ ತಾ.ಪಂ. ಸದಸ್ಯರು ಗಮನ ಸೆಳೆದಾಗ ವಾರಂಬಳ್ಳಿ ಮಾದರಿಯನ್ನು ಅಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ವಿವರಿಸಿದರು.  ಕ್ರಿಯಾ ಯೋಜನೆಯಲ್ಲಿ ಕೃಷಿಗೆ ನೀರು ಪೂರೈಕೆ ಬಗ್ಗೆ ಏನು ಕ್ರಮಕೈಗೊಳ್ಳಲಾಗಿದೆ ಎಂದು ತಾ.ಪಂ. ಸದಸ್ಯ ಭುಜಂಗ ಶೆಟ್ಟಿ ಪ್ರಶ್ನಿಸಿದರು. 

 ಜಿ.ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸಿಇಒ ಹಾಗೂ ಸಮಿತಿ ಸದಸ್ಯ ಕಾರ್ಯದರ್ಶಿ ಶಿವಾನಂದ ಕಾಪಶಿ, ಉಪಕಾರ್ಯದರ್ಶಿ ನಾಗೇಶ್‌ ರಾಯ್ಕರ್‌ ಸಭೆಯಲ್ಲಿದ್ದರು. ಜಿ.ಪಂ., ತಾ.ಪಂ., ನಗರ ಸ್ಥಳೀಯ ಸಂಸ್ಥೆಯ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡರು.

ಟಾಪ್ ನ್ಯೂಸ್

ಶೌಚಾಲಯದಲ್ಲಿ ನವಜಾತ ಹೆಣ್ಣು ಮಗು ಪತ್ತೆ… ನೈರ್ಮಲ್ಯ ಕಾರ್ಯಕರ್ತರಿಂದ ರಕ್ಷಣೆ

ಶೌಚಾಲಯದಲ್ಲಿ ನವಜಾತ ಹೆಣ್ಣು ಮಗು ಪತ್ತೆ… ನೈರ್ಮಲ್ಯ ಕಾರ್ಯಕರ್ತರಿಂದ ರಕ್ಷಣೆ

Jimmy Tata: ಮೊಬೈಲ್‌ ಬಳಸದೇ 2BHK ಮನೆಯಲ್ಲಿ ವಾಸಿಸುವ ರತನ್‌ ಟಾಟಾ ಸಹೋದರನ ಬಗ್ಗೆ ಗೊತ್ತಾ?

Jimmy Tata:ಮೊಬೈಲ್‌ ಬಳಸದೇ 2BHK ಮನೆಯಲ್ಲಿ ವಾಸಿಸುವ ರತನ್‌ ಟಾಟಾ ಸಹೋದರನ ಬಗ್ಗೆ ಗೊತ್ತಾ?

1-tata-aa

Ratan Tata; ಉದ್ಯಮ ರಂಗದ ಭೀಷ್ಮ, ಅಮೂಲ್ಯ ರತುನ: ಜಗದಗಲ ಕೀರ್ತಿ

Renukaswamy Case: ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ ಆರೋಪಿ ಪ್ರದೋಷ್

Renukaswamy Case: ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ ಆರೋಪಿ ಪ್ರದೋಷ್

Chitradurga: ಸಿದ್ದರಾಮಯ್ಯ ಸಂಕಟ ಬಂದಾಗ ಜಾತಿ ಮುಂದೆ ತರುತ್ತಾರೆ: ಸಿ.ಟಿ ರವಿ

Chitradurga: ಸಿದ್ದರಾಮಯ್ಯ ಸಂಕಟ ಬಂದಾಗ ಜಾತಿ ಮುಂದೆ ತರುತ್ತಾರೆ: ಸಿ.ಟಿ ರವಿ

4-chitthapura

Dargah: ಚಿತ್ತಾಪುರ-ಕರದಳ್ಳಿ ರಸ್ತೆ ಮಧ್ಯದಲ್ಲಿರುವ ಸೈಯದ್ ಪೀರ್ ದರ್ಗಾ ಧ್ವಂಸ

Vettaiyan: ಹೇಗಿದೆ ರಜಿನಿಕಾಂತ್‌ ʼವೆಟ್ಟಯ್ಯನ್ʼ? ಫಸ್ಟ್‌ ಹಾಫ್‌ ಓಕೆ ಸೆಕೆಂಡ್ ಹಾಫ್..

Vettaiyan: ಹೇಗಿದೆ ರಜಿನಿಕಾಂತ್‌ ʼವೆಟ್ಟಯ್ಯನ್ʼ? ಫಸ್ಟ್‌ ಹಾಫ್‌ ಓಕೆ ಸೆಕೆಂಡ್ ಹಾಫ್..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renukaswamy Case: ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ ಆರೋಪಿ ಪ್ರದೋಷ್

Renukaswamy Case: ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ ಆರೋಪಿ ಪ್ರದೋಷ್

Actor Darshan Bail: ನಟ ದರ್ಶನ್‌ಗೆ ಬಳ್ಳಾರಿ ಜೈಲಲ್ಲೇ ದಸರಾ ಹಬ್ಬ?

Actor Darshan Bail: ನಟ ದರ್ಶನ್‌ಗೆ ಬಳ್ಳಾರಿ ಜೈಲಲ್ಲೇ ದಸರಾ ಹಬ್ಬ?

Bagalakote: ಖ್ಯಾತ ಉದ್ಯಮಿ ರತನ್ ಟಾಟಾ ಅಗಲಿಕೆ ಬಹಳ ಆಘಾತ ತಂದಿದೆ : ಡಾ.ನಿರಾಣಿ

Bagalakote: ಖ್ಯಾತ ಉದ್ಯಮಿ ರತನ್ ಟಾಟಾ ಅಗಲಿಕೆ ಬಹಳ ಆಘಾತ ತಂದಿದೆ : ಡಾ.ನಿರಾಣಿ

Munirathna-case

Munirathna Case: ಭದ್ರತೆ ಕೊಟ್ಟರೆ ಮಾಜಿ ಸಿಎಂಗಳ ಹನಿಟ್ರ್ಯಾಪ್‌ ಬಹಿರಂಗ: ಸಂತ್ರಸ್ತೆ

Madhu-Bangarappa

Exam: ಈ ವರ್ಷ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೃಪಾಂಕ ಇಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಶೌಚಾಲಯದಲ್ಲಿ ನವಜಾತ ಹೆಣ್ಣು ಮಗು ಪತ್ತೆ… ನೈರ್ಮಲ್ಯ ಕಾರ್ಯಕರ್ತರಿಂದ ರಕ್ಷಣೆ

ಶೌಚಾಲಯದಲ್ಲಿ ನವಜಾತ ಹೆಣ್ಣು ಮಗು ಪತ್ತೆ… ನೈರ್ಮಲ್ಯ ಕಾರ್ಯಕರ್ತರಿಂದ ರಕ್ಷಣೆ

3

Puttur: ಸುಧಾರಣೆ ನಿರೀಕ್ಷೆಯಲ್ಲಿ ಕಬಕ-ಪುತ್ತೂರು ರೈಲು ನಿಲ್ದಾಣ

Jimmy Tata: ಮೊಬೈಲ್‌ ಬಳಸದೇ 2BHK ಮನೆಯಲ್ಲಿ ವಾಸಿಸುವ ರತನ್‌ ಟಾಟಾ ಸಹೋದರನ ಬಗ್ಗೆ ಗೊತ್ತಾ?

Jimmy Tata:ಮೊಬೈಲ್‌ ಬಳಸದೇ 2BHK ಮನೆಯಲ್ಲಿ ವಾಸಿಸುವ ರತನ್‌ ಟಾಟಾ ಸಹೋದರನ ಬಗ್ಗೆ ಗೊತ್ತಾ?

2

Puttur:ಇಲ್ಲಿ ವೇಷಗಳಿಗೆ ಪ್ರವೇಶವಿಲ್ಲ;ನೇಮದ ದಿನ ವ್ಯಾಪಾರವಿಲ್ಲ, ಎಲ್ಲವೂ ಉಚಿತವಾಗಿ ವಿತರಣೆ

1-tata-aa

Ratan Tata; ಉದ್ಯಮ ರಂಗದ ಭೀಷ್ಮ, ಅಮೂಲ್ಯ ರತುನ: ಜಗದಗಲ ಕೀರ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.