![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 26, 2022, 7:49 PM IST
ಬೆಂಗಳೂರು: ರಾಜ್ಯ ಸರ್ಕಾರ ಒಂದು ವರ್ಷದ ಸಾಧನ ಸಮಾವೇಶ ಮಾಡುತ್ತೇವೆ ಎಂದು ಹೇಳಿದೆ. ಒಂದು ವರ್ಷ ಅಂತ ಯಾಕೆ ಹೇಳುತ್ತಿದ್ದೀರಿ. ಹೆಚ್ಚು ಕಮ್ಮಿ ಬಿಜೆಪಿ ಸರ್ಕಾರ ಬಂದು ನಾಲ್ಕು ವರ್ಷಗಳಾಗಿವೆ. ಬಿಜೆಪಿಯ ಪ್ರಶ್ನೋತ್ಸವ ಎಂದು ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿಯಲ್ಲಿ ಕೈ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಬೆಂಗಳೂರು ಮತ್ತು ರಾಜ್ಯ ಭ್ರಷ್ಟಚಾರದ ಕ್ಯಾಪಿಟಲ್ ಆಗಿದೆ. ನಿಜವಾಗಿಯೂ ಸಾಧನೆ ಮಾಡಿದ್ದರೇ, ನಿಮ್ಮ ಪ್ರಧಾನಿಗಳು, ವರಿಷ್ಠರು ಬಂದು ಹಾಡಿ ಹೊಗಳಿ ಹೋಗುತ್ತಿದ್ದರು. ರೈತರ ಆದಾಯ ಡಬಲ್ ಮಾಡುತ್ತೇನೆ ಹೇಳಿದ್ರಿ, ಯಾರ ಆದಾಯ ಡಬಲ್ ಆಯಿತೋ ಇಲ್ವೋ ಆದರೆ ಅವರ ತೆಗೆದುಕೊಳ್ಳುವ ಗೊಬ್ಬರ ಡಬಲ್ ಆಗಿದೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಯಾರಾದರೂ ಮಂಡಕ್ಕಿ ಮೇಲೆ ತೆರಿಗೆ ಹಾಕ್ತಾರೇನ್ರಿ ? ಸರಕಾರದ ವಿರುದ್ಧ ಗುಡುಗಿದ ಸಿದ್ದರಾಮಯ್ಯ
ಹಾಲು, ಮೊಸರು, ಪನ್ನೀರು ಜೆಎಸ್ ಟಿ ಹಾಕಿ ದಾಖಲೆ ಸೃಷ್ಟಿ ಮಾಡಿದ್ದೀರ. ರೈತರಿಗೆ ಯಾವುದೇ ಅನುಕೂಲ ಆಗಿಲ್ಲ. ನಿರ್ಮಲ ಸೀತಾರಾಮನ್ ಅವರು 21 ಲಕ್ಷ ಕೋಟಿ ಘೋಷಣೆ ಮಾಡಿದರು. ಇದರಿಂದ ಯಾರಿಗೆ ಸಹಾಯ ಆಯಿತೆಂದು ಲಿಸ್ಟ್ ಬಿಡುಗಡೆ ಮಾಡಿಯೆಂದು ಸವಾಲು ಹಾಕಿದರು.
ಪೊಲೀಸ್ ಇರಲಿ, ಶಿಕ್ಷಣ ಇಲಾಖೆ ಇರಲಿ, ಯಾವುದೇ ಇಲಾಖೆಯಲ್ಲಿ ಅರ್ಜಿ ಹಾಕಿದರೆ ,ಭ್ರಷ್ಟಾಚಾರ ತಾಂಡವ ಆಡಿ, ಬಿಜೆಪಿಯವರೇ ಬಂಧಿಸಿದರು. ನಮ್ಮ ನಾಯಕರು ಹೇಳಿದ ಮೇಲೆ ವಿಧಿ ಇಲ್ಲ ಬಂಧನ ಮಾಡಿದರು ಎಂದರು.
You seem to have an Ad Blocker on.
To continue reading, please turn it off or whitelist Udayavani.