![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 27, 2018, 12:21 PM IST
ಬೆಂಗಳೂರು: ಸರ್ಕಾರದ ಭವಿಷ್ಯದ ಬಗ್ಗೆ ಅನುಮಾನವ್ಯಕ್ತ ಪಡಿಸಿರುವ ವಿಡಿಯೋ ಕುರಿತಾಗಿ ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ‘ಯಾರೋ ಕಿಡಿಗೇಡಿಗಳು ಆಂತರಿಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿಕೆಯಿಂದ ಸರ್ಕಾರದ ಮೇಲೆ ಪರಿಣಾಮವಿಲ್ಲ’ ಎಂದಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆಶಿ ನಾವು ರಾಹುಲ್ ಗಾಂಧಿ ಅವರ ಸಮ್ಮತಿಯ ಮೇರೆಗೆ ಬೇಷರತ್ ಬೆಂಬಲ ನೀಡಿದ್ದೇವೆ. ವೇಣುಗೋಪಾಲ್ ರಾಹುಲ್ ಅವರು ತೀರ್ಮಾನ ಕೈಗೊಂಡು ಸಹಿ ಹಾಕಿರುವ ಪತ್ರವನ್ನು ಮಾಧ್ಯಮಗಳಿಗೆ ನೀಡಿದ್ದೇವಲ್ಲಾ ಅದು ಊರ್ಜಿತ, ಮತ್ತೆ ಯಾವ ಹೇಳಿಕೆಗಳೂ ಅಧಿಕೃತವಲ್ಲ ಎಂದರು.
ನಮ್ಮ ಸರ್ಕಾರ 5 ವರ್ಷ ಇರುತ್ತದೆ, ನಾವು ಜನರಿಗೆ ಕೊಟ್ಟ ಮಾತು ಈಡೇರಿಸಿಕೊಡಬೇಕಾಗಿದೆ ಎಂದರು.
You seem to have an Ad Blocker on.
To continue reading, please turn it off or whitelist Udayavani.