ಜೆಲ್‌ ಮಾದರಿ ಸ್ಫೋಟಕ ಬಳಕೆ?

ಐವರು ಸ್ಥಳೀಯರ ಸಾವು ಖಚಿತ ಉನ್ನತ ಮಟ್ಟದ ತನಿಖೆಗೆ ಆದೇಶ

Team Udayavani, Jan 23, 2021, 6:50 AM IST

ಜೆಲ್‌ ಮಾದರಿ ಸ್ಫೋಟಕ ಬಳಕೆ?

ಶಿವಮೊಗ್ಗ/ಬೆಂಗಳೂರು: ದೇಶಾದ್ಯಂತ ಭಾರೀ ಆತಂಕಕ್ಕೆ ಕಾರಣವಾಗಿರುವ ಶಿವಮೊಗ್ಗದ ಭೀಕರ ಸ್ಫೋಟ ಪ್ರಕರಣ ನಾನಾ ಸಂದೇಹಗಳನ್ನು ಹುಟ್ಟುಹಾಕಿದ್ದು, ರಾಜ್ಯ ಸರ ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಸ್ಫೋಟದಲ್ಲಿ ಸುಧಾರಿತ ಜೆಲ್‌ ಮಾದರಿಯ ಬೂಸ್ಟರ್‌ ಬಳಕೆಯಾಗಿರುವ ಸಂದೇಹ ಇದೆ.

ಶಿವಮೊಗ್ಗ  ಬಳಿಯ ಹುಣಸೋಡು ಬಳಿಕಲ್ಲುಕೋರೆಯಲ್ಲಿ ನಿಲ್ಲಿಸಿದ್ದ ಸ್ಫೋಟಕ ತುಂಬಿದ ಬೊಲೆರೋ ಸ್ಫೋಟಗೊಂಡಿರುವುದು ಖಚಿತವಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಮೃತರನ್ನು ಭದ್ರಾವತಿಯ ಪ್ರವೀಣ್‌, ಮಂಜುನಾಥ್‌, ಪವನ್‌, ಜಾವಿದ್‌ ಎಂದು ಅಂದಾಜಿಸಲಾಗಿದೆ. ಘಟನೆ ವೇಳೆ 8 ಮಂದಿ ಇದ್ದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.

ರಾಜಕೀಯ ನಂಟು? :

ಸ್ಫೋಟ ನಡೆದ ಕಲ್ಲುಕೋರೆಯ ಮಾಲ ಕರು ರಾಜಕೀಯವಾಗಿ ಗುರುತಿಸಿಕೊಂಡಿ ದ್ದಾರೆ. ಸಮೀಪದಲ್ಲಿ ರಾಜಕೀಯ ವ್ಯಕ್ತಿಗಳ ಬೇನಾಮಿ ಕೋರೆಗಳಿವೆ ಎನ್ನಲಾಗಿದೆ. ಹೀಗಾಗಿ ಪ್ರಕರಣ ರಾಜಕೀಯ ಸ್ವರೂಪ ಪಡೆದಿದೆ. ಪೊಲೀಸರಿಗೆ ಅಕ್ರಮದ ಮಾಹಿತಿ ಇತ್ತಾದರೂ ರಾಜಕೀಯ ಒತ್ತಡದಿಂದ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪವಿದೆ.

ಹಲವು ಅನುಮಾನಗಳು :

ಸ್ಫೋಟ ಪ್ರಕರಣ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸ್ಫೋಟದ ಸ್ಥಳದಿಂದ 100 ಕಿ.ಮೀ. ದೂರದವರೆಗೂ ಕಂಪನ ದಾಖಲಾಗಿದ್ದು, ಜಿಲೆಟಿನ್‌ಗಿಂತಲೂ ಸುಧಾರಿತವಾದ, ಹೆಚ್ಚು ಶಕ್ತಿಯುಂಟು ಮಾಡುವ ಜೆಲ್‌ ಮಾದರಿಯ ಬೂಸ್ಟರ್‌ಗಳನ್ನು ಬಳಸಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಈವರೆಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಜಿಲೆಟಿನ್‌, ಡಿಟೋನೇಟರ್‌ಗಳಿಗಿಂತಲೂ ಸುಧಾರಿತ ಬೂಸ್ಟರ್‌ಗಳು ಹೆಚ್ಚು ಪರಿಣಾಮಕಾರಿ ಹಾಗೂ ಶಕ್ತಿಶಾಲಿಯಾಗಿದ್ದು ಕಡಿಮೆ ಶಕ್ತಿಯಿಂದಲೂ ಹೊತ್ತಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಇದೇ ಈ ಭಾರೀ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

5 ಲಕ್ಷ ರೂ. ಪರಿಹಾರ :

ಅನಾಹುತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಉನ್ನತ ಮಟ್ಟದ ತನಿಖೆಗೂ ಆದೇಶಿಸಲಾಗಿದೆ. ಸಿಎಂ ಯಡಿಯೂರಪ್ಪ ಅಧಿಕಾರಿ ಗಳೊಂದಿಗೆ ಸಂಪರ್ಕದಲ್ಲಿದ್ದು, ರಕ್ಷಣ ಕಾರ್ಯಾಚರಣೆಗೆ ಸೂಚಿಸಿದ್ದಾರೆ.

ಮೂವರು ವಶಕ್ಕೆ :

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಇಲಾಖೆ, ಕಲ್ಲು ಕೋರೆ ಮಾಲಕ ಸುಧಾಕರ್‌ ಸಹಿತ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ.

ಸ್ಫೋಟಗೊಂಡದ್ದು ಹೇಗೆ? :

ಈ ಭಾಗದ ಕೋರೆಗಳಲ್ಲಿ ಸ್ಫೋಟಕ್ಕಾಗಿ ಜಿಲೆಟಿನ್‌ ಕಡ್ಡಿಗಳನ್ನು ಪೂರೈಸಲು ತಮಿಳುನಾಡಿನಿಂದ ಈ ಜೀಪ್‌ ಬಂದಿತ್ತು. ಇದರಲ್ಲಿ 50ಕ್ಕೂ ಹೆಚ್ಚು ಬಾಕ್ಸ್‌ಗಳಷ್ಟು ಜಿಲೆಟಿನ್‌ ಕಡ್ಡಿಗಳಿದ್ದವು ಎನ್ನಲಾಗಿದೆ. ರಾತ್ರಿ ಕೋರೆಗಳಿಗೆ ಅಗತ್ಯವಿರುವ ಸ್ಫೋಟಕ ಒಯ್ಯಬೇಕಿತ್ತು. ಅದರ ನಡುವೆ ಸ್ಫೋಟ ಸಂಭವಿಸಿದೆ.

ಅಮೋನಿಯಂ ನೈಟ್ರೇಟ್‌? :

ಜೀಪಿನಲ್ಲಿ ಅಮೋನಿಯಂ ನೈಟ್ರೇಟ್‌ ಮತ್ತು ಇತರ ಸ್ಫೋಟಕ ವಸ್ತುಗಳೂ ಇದ್ದವು ಎಂದೂ ಹೇಳಲಾಗಿದೆ.

ಮೋದಿ, ರಾಹುಲ್‌ ಸಂತಾಪ :

ಸ್ಫೋಟದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಸಂತಾಪ ಸೂಚಿಸಿದ್ದಾರೆ.

ಟಾಪ್ ನ್ಯೂಸ್

Mahisha

Mysuru: ಮಹಿಷಾ ಪ್ರತಿಮೆ ಪುಷ್ಪಾರ್ಚನೆಗೆ ಪೊಲೀಸರ ತಡೆ: ಆಕ್ರೋಶ

Central Govt: ಕೇಂದ್ರದ ಎರಡು ಸಮಿತಿಗೆ ಸಂಸದ ರಾಘವೇಂದ್ರ ನೇಮಕ

Central Govt: ಕೇಂದ್ರದ ಎರಡು ಸಮಿತಿಗೆ ಸಂಸದ ರಾಘವೇಂದ್ರ ನೇಮಕ

Dharmasthala: ಭಜನೆಯಿಂದ ಸನಾತನ ಧರ್ಮ, ಸಂಸ್ಕೃತಿ ರಕ್ಷಣೆ

Dharmasthala: ಭಜನೆಯಿಂದ ಸನಾತನ ಧರ್ಮ, ಸಂಸ್ಕೃತಿ ರಕ್ಷಣೆ

Malavoor : ನದಿಯಲ್ಲಿ ಈಜಾಡಲು ತೆರಳಿದ್ದ ನಾಲ್ವರಲ್ಲಿ ಇಬ್ಬರು ನೀರುಪಾಲು

Malavoor : ನದಿಯಲ್ಲಿ ಈಜಾಡಲು ತೆರಳಿದ್ದ ನಾಲ್ವರಲ್ಲಿ ಇಬ್ಬರು ನೀರುಪಾಲು

Rain: ಕೆಲವು ಕಡೆ ಮಳೆ: ಸುಳ್ಯದಲ್ಲಿ ಉತ್ತಮ ಮಳೆ

Rain: ಕೆಲವು ಕಡೆ ಮಳೆ: ಸುಳ್ಯದಲ್ಲಿ ಉತ್ತಮ ಮಳೆ

ಪಂಜ: ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

Sullia: ಪಂಜ; ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

Yakshagana: ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆ: ಪುತ್ತಿಗೆ ಶ್ರೀ

Yakshagana: ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆ: ಪುತ್ತಿಗೆ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DKS

H.D.Kumaraswamy: ಅವರ ಮಾತು ಅವರಿಗೇ ಗೊತ್ತಿರುವುದಿಲ್ಲ: ಡಿ.ಕೆ.ಶಿವಕುಮಾರ್‌

R.Ashok

FIR Rigister: ಕೇಂದ್ರ ಸಚಿವೆ ನಿರ್ಮಲಾ, ಸಿದ್ದರಾಮಯ್ಯ ಪ್ರಕರಣ ಅಜಗಜಾಂತರ: ಆರ್‌. ಅಶೋಕ್‌

CM-Ashokapuram

Mysuru: ನಾನು ಹೆದರುವ, ಜಗ್ಗುವ, ಬಗ್ಗುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

1-lll

UK ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ರಾಜ್ಯದ ಅದಿಶ್ ರಜಿನಿಶ್ ವಾಲಿ

1-bahga

K.S.Bhagawan ವಿವಾದ;ಮಾನ ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು…

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mahisha

Mysuru: ಮಹಿಷಾ ಪ್ರತಿಮೆ ಪುಷ್ಪಾರ್ಚನೆಗೆ ಪೊಲೀಸರ ತಡೆ: ಆಕ್ರೋಶ

Mehabooba

Bangla ಹಿಂದೂಗಳು ಸಾಯುವಾಗ ಮುಫ್ತಿ ಮೌನವಾಗಿದ್ದರು: ಬಿಜೆಪಿ

1-stalin

Tamil Nadu; ಉದಯನಿಧಿ ಈಗ ಅಧಿಕೃತವಾಗಿ ತಮಿಳುನಾಡು ಉಪಮುಖ್ಯಮಂತ್ರಿ

Central Govt: ಕೇಂದ್ರದ ಎರಡು ಸಮಿತಿಗೆ ಸಂಸದ ರಾಘವೇಂದ್ರ ನೇಮಕ

Central Govt: ಕೇಂದ್ರದ ಎರಡು ಸಮಿತಿಗೆ ಸಂಸದ ರಾಘವೇಂದ್ರ ನೇಮಕ

Dharmasthala: ಭಜನೆಯಿಂದ ಸನಾತನ ಧರ್ಮ, ಸಂಸ್ಕೃತಿ ರಕ್ಷಣೆ

Dharmasthala: ಭಜನೆಯಿಂದ ಸನಾತನ ಧರ್ಮ, ಸಂಸ್ಕೃತಿ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.