![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 3, 2017, 5:15 PM IST
ಮೈಸೂರು : ಇಲ್ಲಿ ಶುಕ್ರವಾರ ನಡೆದ ರಾಜ್ಯ ಕಾಂಗ್ರೆಸ್ ಸರ್ಕಾರದ 4 ನೇ ವರ್ಷದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರು ವೇದಿಕೆಯಲ್ಲೇ ಟಾಂಗ್ ನೀಡಿದ ಘಟನೆ ನಡೆದಿದೆ.
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆಗಳ ಕುರಿತಾಗಿನ ಸುಧೀರ್ಘ ಭಾಷಣದ ಬಳಿಕ ಭಾಷಣ ಆರಂಭಿಸಿದ ಅಂಬರೀಶ್ ಮೊದಲಿಗೆ ಮುಖ್ಯಮಂತ್ರಿಗಳಿಗೆ ಹೊಗಳಿದರು.
ಮುಖ್ಯಮಂತ್ರಿಗಳು ಸರ್ಕಾರದ ಸಾಧನೆಗಳನ್ನು, ಭಾಗ್ಯಗಳನ್ನು ಬಿಡಿಸಿ ಬಿಡಿಸಿ ಹೃದಯಕ್ಕೆ ಮುಟ್ಟುವಂತೆ ಹೇಳಿದ್ದಾರೆ. ನಿಮ್ಮ ಮತಕ್ಕೆ ನಮ್ಮ ಪ್ರತಿಫಲ ಎನ್ನುವ ಕುರಿತು ಸವಿವರವಾಗಿ ಹೇಳಿದ್ದಾರೆ. ನಾನು 230 ಸಿನಿಮಾ ಮಾಡಿದ್ದೇನೆ ಆದರೆ ಇಷ್ಟು ಮಾತಾಡಿಲ್ಲ. ನಿಷ್ಠೆ ಇದ್ರೆ ಮಾತ್ರ ಆ ತರ ಮಾತನಾಡಲು ಸಾಧ್ಯ ಎಂದರು.
ಬಳಿಕ ಅನ್ನ ಭಾಗ್ಯ .. ಕ್ಷೀರ ಭಾಗ್ಯ .. ರೈತರ ಸಾಲ ಮನ್ನಾ ಸೈಕಲ್.. ಗೂಡ್ಸು ..ಎಲ್ಲಾ ಹೇಳಿದ್ರು. ಆದ್ರೆ ನಾವು ಮಾಡಿದ ವಸತಿ ಇಲಾಖೆಯ ಸಾಧನೆಗಳ ಕುರಿತು ಒಂದು ಮಾತು ಹೇಳಿಲ್ಲ. 3 ಚಿನ್ನದ ಪದಕಗಳು ಇಲಾಖೆಗೆ ಬಂದಿವೆ. ನೀವು ಹೇಳದಿದ್ರೆ ತೊಂದರೆ ಇಲ್ಲ ಬಿಡಿ. ಜನರಿಗೆ ಗೊತ್ತಿದೆ ಎಂದು ಟಾಂಗ್ ನೀಡಿದರು.
ಕೊನೆಗೆ ‘ಬೀರೇಶ್ವರ ದೇವರ ಮುಂದೆ ನೀಡಿದ ಮಾತು ನಡೆಸಿಕೊಡಿ’ ಎಂದು ಸಿದ್ದರಾಮಯ್ಯಗೆ ಮನವಿ ಮಾಡಿ ಎಲ್ಲರ ಕುತೂಹಲಕ್ಕೆ ಕಾರಣವಾದರು.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.