ಕೋಟೆಯಲ್ಲಿ ಮರ್ಯಾದಾ ಹತ್ಯೆ
Team Udayavani, Mar 2, 2018, 8:15 AM IST
ಎಚ್.ಡಿ.ಕೋಟೆ: ಪರಿಶಿಷ್ಟ ಜಾತಿಯ ಯುವಕನನ್ನು ತಮ್ಮ ಮಗಳು ಪ್ರೀತಿಸಿ ಮದುವೆಯಾಗುತ್ತಾಳೆಂದು ಅರಿತ ಯುವ ತಿಯ
ಪಾಲಕರು ಆಕೆಯನ್ನು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ಗೊಲ್ಲನಬೀಡು ಗ್ರಾಮದಲ್ಲಿ ನಡೆದಿದೆ.
ಸುಶ್ಮಿತಾ(20) ಮೃತ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ತಂದೆ ಕುಮಾರ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ
ಒಪ್ಪಿಸಲಾಗಿದೆ. ಉಳಿದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಗೊಲ್ಲನಬೀಡಿನ ಒಕ್ಕಲಿಗ ಜನಾಂಗದ ಸುಶ್ಮಿತಾ (20) ಮತ್ತು ಹಲನಹಳ್ಳಿಯ ದಲಿತ ಉಮೇಶ್ (22) ಪರಸ್ಪರ ಪ್ರೀತಿ ಸಿದ್ದರು. ಹೆತ್ತವರ ವಿರೋ ಧದ ನಡುವೆಯೂ ಮದುವೆಗೆ ಮುಂದಾ ಗಿದ್ದರಿಂದ ಹತ್ಯೆ ನಡೆಸಿದ್ದಾಗಿ ಯುವತಿ ತಂದೆ ಕುಮಾರ್ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಸುಶ್ಮಿತಾ ಹಲನಹಳ್ಳಿ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭ ಅದೇ ಗ್ರಾಮದ ಉಮೇಶ್ ಪರಿಚಯವಾಗಿ ಪ್ರೀತಿಸುತ್ತಿದ್ದರು. ಮದುವೆಗೆ ಪೋಷಕರ ವಿರೋಧ ಬರಬಹುದೆಂದು ತಿಳಿದು ಇಬ್ಬರೂ ಮನೆ ತೊರೆದಿದ್ದರು ಎನ್ನಲಾಗಿದೆ. ಗ್ರಾಮದ ಕೆಲ ಮುಖಂಡರು ಸೇರಿ ಪಂಚಾಯಿತಿ ಮಾಡಿ ಯುವಕ-ಯುವತಿಯನ್ನು ಬೇರೆ ಮಾಡಿದ್ದರೆಂದು ಹೇಳಲಾಗುತ್ತಿದೆ. ಇತ್ತೀಚೆಗೆ ಪಾಲಕರು ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ಮಾಡಲು ಮುಂದಾದಾಗ ಯುವತಿ ವಿರೋಧ ವ್ಯಕ್ತಪಡಿಸಿ, ಉಮೇಶ್ನನ್ನೇ
ಮುದುವೆಯಾಗುವುದಾಗಿ ಹಠ ಹಿಡಿದಿದ್ದಳು ಎನ್ನಲಾಗಿದೆ. ತಮ್ಮ ಮಗಳು ಪರಿಶಿಷ್ಟ ಜಾತಿ ಹುಡುಗನನ್ನು ಮದುವೆಯಾಗುತ್ತಾಳೆಂದು ಪಾಲಕರು ಮತ್ತು ಸಂಬಂಧಿಯೋರ್ವ ಸೇರಿ ಕಳೆದ ಫೆ.21ರ ರಾತ್ರಿ ತಮ್ಮ ತೋಟದ ಮನೆಯಲ್ಲಿ ಯುವತಿಗೆ ವಿಷ ಕುಡಿಸಿ ನೇಣು
ಬಿಗಿದು ಕೊಲೆ ಮಾಡಿ ಬಳಿಕ ಸುಟ್ಟು ಹಾಕಿದ್ದರು ಎಂದು ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆಂದು ತಿಳಿದು ಬಂದಿದೆ.
ವಿಷ ಕುಡಿಸಿದ ಆರೋಪ: ತಮ್ಮ ಮಗಳು ಅನ್ಯ ಜಾತಿ ಹುಡುಗನ್ನು ಪ್ರೀತಿಸಿದ ತಪ್ಪಿಗೆ ಮೊದಲೇ ಮಗಳಿಂದ ಆದ ಇಷ್ಟೆಲ್ಲಾ ಘಟನೆಯಿಂದ ಮನನೊಂದಿದ್ದ ಪೋಷಕರು, ಸಂಬಂಧಿಯೋರ್ವ ಕಳೆದ ಫೆ.21ರ ರಾತ್ರಿ ಗೊಲ್ಲನಬಿಡು ಗ್ರಾಮದಲ್ಲಿರುವ ತಮ್ಮ ತೋಟದ ಮನೆಯಲ್ಲಿ ಯುವತಿಗೆ ವಿಷ ಕುಡಿಸಿದ್ದರು. ಆಗಲೂ ಸಾವನ್ನಪ್ಪದಿದ್ದಾಗ, ಆಕೆಯನ್ನು ನೇಣು ಬಿಗಿದು ಕೊಲೆ ಮಾಡಿ ತೋಟದ ಮನೆ ಸಮೀಪದಲ್ಲೇ ಶವ ಸುಟ್ಟು ಹಾಕಲಾಗಿತ್ತು ಎಂದು ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 8 ತಿಂಗಳ ಹಿಂದಷ್ಟೇ ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ಯುವತಿಯೋರ್ವಳು ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾಗಲು ಮುಂದಾಗಿ ದ್ದನ್ನು ತಿಳಿದ ಯುವತಿ ಪೋಷಕರು ಮತ್ತು ಸಂಬಂಧಿಕ ರಿಂದಲೇ ಮರ್ಯಾದಾ ಹತ್ಯೆ ನಡೆದಿತ್ತು. ಈ ಘಟನೆ ಮಾಸುವ
ಮುನ್ನವೇ ಮತ್ತೂಂದು ಮರ್ಯಾದಾ ಹತ್ಯೆ ಘಟನೆ ತಾಲೂಕಿನಲ್ಲಿ ಮರುಕಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Martin: ಇಂದು ಧ್ರುವ ಸರ್ಜಾ ಬರ್ತ್ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್
New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ
Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.