H.D. Kumaraswamy: 2028ರೊಳಗೆ ನಾನು ಸಿಎಂ ಆಗುತ್ತೇನೆ…
ಜನರಿಂದಲೇ ಈ ಸರಕಾರದ ಪತನ ಖಚಿತ
Team Udayavani, Oct 20, 2024, 6:45 AM IST
ಮಂಡ್ಯ: ನಾನು ಜೋತಿಷಿಯಲ್ಲ, ಆದರೂ ಹೇಳುತ್ತಿದ್ದೇನೆ; 2028ರೊಳಗೆ ನಾನು ಸಿಎಂ ಆಗುತ್ತೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.
ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರ 2028ರವರೆಗೂ ನಡೆಯುವುದಿಲ್ಲ. ಸರಕಾರವನ್ನು ನಾವಲ್ಲ, ಜನರೇ ಉರುಳಿಸುತ್ತಾರೆ. ಜನರೇ ಮೈತ್ರಿಗೆ ಪೂರ್ಣ ಪ್ರಮಾಣದ ಅವಕಾಶ ನೀಡಿದರೆ ಮತ್ತೂಮ್ಮೆ ಮುಖ್ಯಮಂತ್ರಿಯಾಗಬಹುದು ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.
ಜನ ಬಯಸಿದರೆ ಮತ್ತೆ ಸಿಎಂ ಏಕೆ ಆಗಬಾರದು? ನನಗೆ ಪೂರ್ಣ ಪ್ರಮಾಣದ ಐದು ವರ್ಷಗಳ ಅಧಿಕಾರ ಕೊಡಿ ಎಂದು ಜನತೆಗೆ ಈಗಲೂ ಮನವಿ ಮಾಡುತ್ತೇನೆ. ಈ ಹಿಂದೆ ನನ್ನ 14 ತಿಂಗಳ ಆಡಳಿತ ಬೇರೆಯವರ ಹಂಗಿನಲ್ಲಿ ಮಾಡಿದ್ದು. ಆದರೆ ಈಗಿನ ಸಂಪೂರ್ಣ ಬಹುಮತದ ಸರಕಾರದಲ್ಲಿ ಯಾವ ರೀತಿ ಆಡಳಿತ ನಡೆಸುತ್ತಿದ್ದಾರೆ? ಇನ್ನೊಬ್ಬರ ಹಂಗಿನಲ್ಲಿ ಸರಕಾರ ಮಾಡಿದಾಗಲೂ ನಾಡಿಗೆ ಕೊಟ್ಟ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಉಳಿದಿವೆ ಎಂದರು.
ರಾಜ್ಯದ ಹಣ ಇವತ್ತು ಲೂಟಿಯಾಗುತ್ತಿದೆ. ಸರಕಾರದ ಆಸ್ತಿ ಕಬಳಿಕೆ ಆಗುತ್ತಿದೆ. ಜನರು ನನಗೆ ಒಂದು ಅವಕಾಶ ನೀಡಬೇಕು. ಈಗಿನ ಸರಕಾರದ ಬೆಳವಣಿಗೆಗಳಿಗೆ ಜನರು ಬೇಸತ್ತಿದ್ದಾರೆ. ಜನರಲ್ಲಿ ಸರಕಾರದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepavali: ದೀಪಾವಳಿಗೆ ಹಸುರೇತರ ಪಟಾಕಿ ಪೂರ್ಣ ನಿಷೇಧ
ED ಯಿಂದ ದಾಖಲೆ ಪರಿಶೀಲನೆ; ಲೋಕಾದಿಂದ ಸಂಸದನ ವಿಚಾರಣೆ: ಇಂದೂ ತನಿಖೆ ಮುಂದುವರಿಕೆ?
Kalidas Samman; ಗಂಜೀಫಾ ರಘುಪತಿ ಭಟ್ಟರಿಗೆ ರಾಷ್ಟ್ರೀಯ ಕಾಳಿದಾಸ್ ಸಮ್ಮಾನ್
Congress; ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸವಾಲು
Panchayat Raj;10% ಸೇವೆಯನ್ನೂ ಜನರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ: ಪ್ರಿಯಾಂಕ್ ಬೇಸರ
MUST WATCH
ಹೊಸ ಸೇರ್ಪಡೆ
Vijayapura: ಎರಡು ನಾಲಿಗೆ, ಎರಡು ಮೂಗು, ಮೂರು ಕಣ್ಣುಗಳಿರುವ ಕರು ಜನನ
Mayur Patel: ಭೂಮಿ ಅತಿಕ್ರಮಣ ಆರೋಪ; ನಟ ಮಯೂರ್ ವಿರುದ್ಧ ಎಫ್ಐಆರ್
Chikkamagaluru; ಮುಳ್ಳಯನಗಿರಿಯಲ್ಲಿ ಭಾರೀ ಮಳೆ; ಜಲಪಾತದಂತೆ ಹರಿದ ನೀರು
Saroja Sanjeev: ಕಿಚ್ಚನಿಗೆ ಮಾತೃ ವಿಯೋಗ; ಸುದೀಪ್ ತಾಯಿ ಸರೋಜಾ ಸಂಜೀವ್ ಇನ್ನಿಲ್ಲ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಹನುಮಂತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.