“ಎಚ್ಡಿಕೆ ಡ್ರೈವರ್, ಸಿದ್ದು ಕಂಡಕ್ಟರ್’
Team Udayavani, Jul 4, 2018, 6:00 AM IST
ವಿಧಾನಪರಿಷತ್ತು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಡ್ರೈವರ್ ಆಗಿದ್ದರೆ, ಸಿದ್ದರಾಮಯ್ಯ ಕಂಡಕ್ಟರ್ ಆಗಿದ್ದಾರೆ. ಕಂಡಕ್ಟರ್
“ರೈಟ್’ ಎಂದು ಹೇಳುವವರೆಗೆ ಸಮ್ಮಿಶ್ರ ಸರ್ಕಾರದ ಈ ಬಸ್ ಮುಂದೆ ಚಲಿಸುವುದಿಲ್ಲ ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ವ್ಯಂಗ್ಯದ
ಧಾಟಿಯಲ್ಲಿ ಹೇಳಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಕುಮಾರಸ್ವಾಮಿ ಮುಂದಿನ
ಸೀಟಿನಲ್ಲಿ ಕೂತಿದ್ದರೆ, ಸಿದ್ದರಾಮಯ್ಯನವರು ಅವರ ಹಿಂದಿನ ಸೀಟಿನಲ್ಲಿ ಕೂತಿರುವುದನ್ನು ಪ್ರಸ್ತಾಪಿಸುತ್ತ, ಈ ಸಮ್ಮಿಶ್ರ ಸರ್ಕಾರಕ್ಕೆ ಮುಂದೆ ಕೂತಿರುವ ಕುಮಾರಸ್ವಾಮಿ ಡ್ರೈವರ್, ಹಿಂದೆ ಕೂತಿರುವ ಸಿದ್ದರಾಮಯ್ಯ ಕಂಡಕ್ಟರ್ ಆಗಿದ್ದಾರೆ ಎಂದು ಕಾಲೆಳೆದರು. ಇದು ಟ್ರೇಲರ್ ಅಷ್ಟೇ: ರಾಜ್ಯಪಾಲರ ಭಾಷಣದ ಮೂಲಕ ಸರ್ಕಾರದ ಮುಂದಿನ ಯೋಜನೆಗಳ ಬಗ್ಗೆ ಟ್ರೇಲರ್ ಅಷ್ಟೇ ಬಿಟ್ಟಿದ್ದೀವಿ. 5ನೇ ತಾರೀಕಿಗೆ ಪಿಕ್ಷರ್ ರಿಲೀಸ್ ಆಗಲಿದೆ ನೋಡುತ್ತಾ ಇರಿ ಎಂದು ಜೆಡಿಎಸ್ನ ಟಿ.ಎ ಶರವಣ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿ ಹೇಳಿದರು.
ಬಿಜೆಪಿ ಧರಣಿ
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡುವಾಗ ಜೆಡಿಎಸ್ನ ಭೋಜೇಗೌಡ ಕೇಂದ್ರ ಸರ್ಕಾರದ “ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ’ ಉಲ್ಲೇಖೀಸಿ ಇದೊಂದು ರೈತರ ಪಾಲಿನ ಮಾರಕ ಹಾಗೂ ಮಹಾ ಮೋಸದ ಯೋಜನೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಟು ಧಾಟಿಯಲ್ಲಿ ಮಾತನಾಡಿದರು. ಇದಕ್ಕೆ ಆಕ್ಷೇಪಿಸಿ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತಿಗೆ ಮುಂದಾದರು. ಆದರೆ, ಭೋಜೇಗೌಡ ತಮ್ಮದೇ ಮಾತು ಮುಂದುವರಿಸಿದರು. ಪ್ರತಿಪಕ್ಷದ ನಾಯಕ ಎದ್ದು ನಿಂತಾಗಲೂ ಸದಸ್ಯರು ಗೌರವ ಕೊಡುವುದಿಲ್ಲ ಎಂದರೆ ಹೇಗೆ ಎಂದು ಬಿಜೆಪಿಯ
ಉಳಿದ ಸದಸ್ಯರ ಜೊತೆ ಸೇರಿ ಸದನದ ಬಾವಿಗಳಿದು ಧರಣಿ ನಡೆಸಿದರು. ಸಭಾಪತಿಯವರ ಮಧ್ಯಸ್ಥಿಕೆಯಿಂದ ಬಿಜೆಪಿ ಸದಸ್ಯರು ಧರಣಿ ವಾಪಸ್ ಪಡೆದರು.
ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ ಅನ್ನುವುದು ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ರೈತರ ಸಾಲ ಮನ್ನಾ ವಿಚಾರದಲ್ಲಿ ಜೆಡಿಎಸ್ ಕಾಂಗ್ರೆಸ್ ಪಕ್ಷದ ಹೆಗಲ ಮೇಲೆ ಬಂದೂಕು ಇಟ್ಟಿದೆ. ಸ್ವಲ್ಪವೂ ಹೆಚ್ಚು ಕಡಿಮೆ ಆದರೆ ಕಾಂಗ್ರೆಸ್ಗೆ ಗುಂಡು ಬೀಳುವುದು ಗ್ಯಾರಂಟಿ.
● ಆಯನೂರು ಮಂಜುನಾಥ, ಬಿಜೆಪಿ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Koppal: ಚಿಕನ್, ಮಟನ್ ಸೆಂಟರ್ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ
Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್?
Caste census: ನಾಡಿದ್ದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ
Result: ಇಂದು ಯುಜಿನೀಟ್ ಪರಿಷ್ಕೃತ ತಾತ್ಕಾಲಿಕ ಫಲಿತಾಂಶ ಪ್ರಕಟ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.