ಕಾನೂನು ಸಮರಕ್ಕೆ ಮುಂದಾದ ಹೆಗಡೆ
Team Udayavani, Mar 12, 2018, 12:23 PM IST
ಶಿರಸಿ: “ಪೂಜನೀಯ ಶ್ರೀ ಕೆಂಪೇಗೌಡರ ವಿಷಯದಲ್ಲಿ ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವವರ ವಿರುದ್ಧ ಕಾನೂನು ರೀತಿಯ ಹೋರಾಟ ಮಾಡಿರುವೆನು’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ.
ಮಾ.11ರಂದು ತಮ್ಮ ಫೇಸ್ಬುಕ್ ಪುಟದಲ್ಲಿ ಸುಳ್ಳು ಸುದ್ದಿ ಹರಡುವ ವ್ಯಕ್ತಿಗಳ ವಿರುದ್ಧ ನಗರದ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರತಿ ಪ್ರಕಟಿಸಿ ಅನಂತಕುಮಾರ ಹೆಗಡೆ ತಮ್ಮ ಅಭಿಮತವನ್ನು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ವ್ಯಕ್ತಪಡಿಸಿದ್ದಾರೆ.
“ಶ್ರೀ ಕೆಂಪೇಗೌಡರ ಆ ಕಾಲದ ಪ್ರಬುದ್ಧ ಚಿಂತನೆ ಹಾಗೂ ಕಾರ್ಯದಿಂದಾಗಿ ಬೆಂಗಳೂರು ಅಂದರೆ ಕೆಂಪೇಗೌಡರು ಎನ್ನುವ ಅನುಭೂತಿ ತರುವ ಮಹಾನ್ ವ್ಯಕ್ತಿ. ನಾಡು, ನುಡಿ, ದೇಶದ ಬಗ್ಗೆ ಹೋರಾಟ ಮಾಡುವವರ ವಿರುದ್ಧ ನನ್ನ ಗೌರವ ಯಾವತ್ತೂ ಇದೆ’ ಎಂದು ಹೇಳಿದ್ದಾರೆ.
ಏನಿದು ಪ್ರಕರಣ?: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಆಪ್ತ ಕಾರ್ಯದರ್ಶಿ ಸುರೇಶ ಗೋವಿಂದ ಶೆಟ್ಟಿ ಶಿರಸಿಯ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಮಾ.11ರಂದು ದೂರೊಂದು ದಾಖಲಿಸಿದ್ದಾರೆ. ತಾವು ದಾಖಲಿಸಿದ ದೂರಿನಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ತೇಜೋವಧೆ ಆಗುವಂತಹ ಹೇಳಿಕೆಗಳು ಬಂದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮಾ.10ರಂದು ಪ್ರಜಾಕೀಯ ಎಂಬ ಫೇಸ್ಬುಕ್ ಖಾತೆಯಿಂದ “ಬಿಜೆಪಿ ಅ ಧಿಕಾರಕ್ಕೆ ಬಂದರೆ ಕೆಂಪೇಗೌಡ ಪ್ರತಿಮೆಯನ್ನು ಉರುಳಿಸಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿ ಸುತ್ತೇವೆ- ಅನಂತಕುಮಾರ ಹೆಗಡೆ’ ಎಂಬ ತಲೆಬರಹವುಳ್ಳ ಸಂದೇಶಗಳನ್ನು ಅನಂತಕುಮಾರ ಹೆಗಡೆ ಅವರೇ ಹೇಳಿರು ವಂತೆ ರೀತಿಯಲ್ಲಿ ಬರೆದು ಇತರರಿಗೆ ಕಳುಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ
Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ
Lokayukta ಪತ್ರ ಸೋರಿಕೆ ಹೇಗಾಯ್ತು: ರಾಜ್ಯಪಾಲರ ಪ್ರಶ್ನೆ
Court ಕಲಾಪ ನೇರಪ್ರಸಾರ ಚಿತ್ರೀಕರಣಕ್ಕೆ ನಿರ್ಬಂಧ; ಪೂರ್ವಾನುಮತಿ ಅಗತ್ಯ: ಹೈಕೋರ್ಟ್ ಸೂಚನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.