![Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್…](https://www.udayavani.com/wp-content/uploads/2024/07/kejriwal-2-415x234.jpg)
Rameshwaram Cafe Case; ಶಂಕಿತ ಬಾಂಬರ್ ಚೆನ್ನೈಯಲ್ಲಿ ಟೋಪಿ ಖರೀದಿ?
ಟೋಪಿ ಜಾಡು ಹಿಡಿದು ಪತ್ತೆಗೆ ಮುಂದಾದ ಎನ್ಐಎ ತಂಡ
Team Udayavani, Mar 22, 2024, 11:27 PM IST
![Rameshwaram Cafe Case; ಶಂಕಿತ ಬಾಂಬರ್ ಚೆನ್ನೈಯಲ್ಲಿ ಟೋಪಿ ಖರೀದಿ?](https://www.udayavani.com/wp-content/uploads/2024/03/NIA-11-620x349.jpg)
ಬೆಂಗಳೂರು: ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ನಡೆದು 21 ದಿನ ಕಳೆದರೂ ಶಂಕಿತ ಮಾತ್ರ ಇನ್ನೂ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಸಿಕ್ಕಿಬಿದ್ದಿಲ್ಲ. ಆದರೆ ಆತ ಧರಿಸಿದ್ದ ಟೋಪಿಯ ಜಾಡು ಹಿಡಿದು ಹಲವು ಮಹತ್ವದ ಸುಳಿವು ಸಂಗ್ರಹಿಸಿದ್ದಾರೆ.
ಕೃತ್ಯ ಎಸಗಿದ ಬಳಿಕ ಕೆಫೆಯಿಂದ ಒಂದಿಷ್ಟು ಕ್ರಮಿಸಿ ಧಾರ್ಮಿಕ ಸ್ಥಳದ ಬಳಿ ಶಂಕಿತ ಉಗ್ರ ಟೋಪಿಯನ್ನು ಬಿಟ್ಟು ಶರ್ಟ್ ತೆಗೆದು, ರೌಂಡ್-ನೆಕ್ ಟಿ-ಶರ್ಟ್ ಧರಿಸಿ ತೆರಳಿದ್ದ. ಆದರೆ ಅಲ್ಲಿ ಪತ್ತೆಯಾಗಿದ್ದ ಆತನ ಟೋಪಿಯ ಜಾಡು ಹಿಡಿದು ಹೊರಟಾಗ ಇದನ್ನು ಚೆನ್ನೈಯಲ್ಲಿ ಖರೀದಿಸಿರುವ ಸುಳಿವು ಸಿಕ್ಕಿದೆ. ಟೋಪಿ ಖರೀದಿಸಿದ ಚಿಲ್ಲರೆ ಅಂಗಡಿಯ ಒಂದು ತಿಂಗಳ ಸಿಸಿಟಿವಿ ಬ್ಯಾಕ್ಅಪ್ನ್ನು ತನಿಖಾಧಿಕಾರಿಗಳು ಪರಿಶೀಲಿಸಿದ್ದರು. ಆಗ ಕಳೆದ ಜನವರಿ ಅಂತ್ಯದಲ್ಲಿ ಚಿಲ್ಲರೆ ಅಂಗಡಿಯಲ್ಲಿ ಈ ಟೋಪಿ ಖರೀದಿಸಿರುವುದು ಗೊತ್ತಾಗಿದೆ. ಇಬ್ಬರು ಯುವಕರು ಚಿಲ್ಲರೆ ಅಂಗಡಿಗಳಲ್ಲಿ ಟೋಪಿ, ಇತರ ವಸ್ತುಗಳನ್ನು ಖರೀದಿಸುವ ಫೂಟೇಜ್ ತನಿಖಾಧಿಕಾರಿಗಳಿಗೆ ಸಿಕ್ಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವಶಪಡಿಸಿಕೊಂಡ ಟೋಪಿಯಲ್ಲಿ ಕೂದಲು ಪತ್ತೆಯಾಗಿದ್ದು ಇದನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್)ಕ್ಕೆ ಕಳುಹಿಸಲಾಗಿದೆ. ಇದರ ಆಧಾರದ ಮೇಲೆ ವೈಜ್ಞಾನಿಕವಾಗಿ ಕೆಲವೊಂದು ಪ್ರಕ್ರಿಯೆ ಮೂಲಕ ಆತನ ಕುಟುಂಬದ ಮೂಲ ಪತ್ತೆಹಚ್ಚಲು ಒಂದು ತಂಡ ಮುಂದಾಗಿದೆ.
ಟಾಪ್ ನ್ಯೂಸ್
![Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್…](https://www.udayavani.com/wp-content/uploads/2024/07/kejriwal-2-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು](https://www.udayavani.com/wp-content/uploads/2024/07/vishwanarh-150x83.jpg)
MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು
![Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು](https://www.udayavani.com/wp-content/uploads/2024/07/bison-150x98.jpg)
Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು
![Maski: ಸಕಾಲಕ್ಕೆ ಬಾರದ ಮಳೆ ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ](https://www.udayavani.com/wp-content/uploads/2024/07/annadata-150x103.jpg)
Maski: ಸಕಾಲಕ್ಕೆ ಬಾರದ ಮಳೆ, ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ
![Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ](https://www.udayavani.com/wp-content/uploads/2024/07/hdk-150x83.jpg)
Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ
![Transfer of 23 IAS officers including five District Collectors](https://www.udayavani.com/wp-content/uploads/2024/07/IAS-officer-150x83.jpg)
IAS transfer; ಐವರು ಜಿಲ್ಲಾಧಿಕಾರಿಗಳು ಸೇರಿ 23 ಐಎಎಸ್ ಅಧಿಕಾರಿಗಳ ವರ್ಗಾವಣೆ
MUST WATCH
ಹೊಸ ಸೇರ್ಪಡೆ
![Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್…](https://www.udayavani.com/wp-content/uploads/2024/07/kejriwal-2-150x84.jpg)
Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್…
![12-uv-fusion](https://www.udayavani.com/wp-content/uploads/2024/07/12-uv-fusion-150x90.jpg)
UV Fusion: ಕಾಲೆಳೆಯುವ ಕೈಗಳು ನಮ್ಮದಾಗದಿರಲಿ…
![Shimoga; ಬಂದ್ ಆಗದ ತಳಭಾಗದ ಗೇಟ್: ವ್ಯರ್ಥವಾಗುತ್ತಿದೆ ಭದ್ರಾ ಜಲಾಶಯದ ನೀರು](https://www.udayavani.com/wp-content/uploads/2024/07/bhadra-150x83.jpg)
Shimoga; ಬಂದ್ ಆಗದ ತಳಭಾಗದ ಗೇಟ್: ವ್ಯರ್ಥವಾಗುತ್ತಿದೆ ಭದ್ರಾ ಜಲಾಶಯದ ನೀರು
![11-bng](https://www.udayavani.com/wp-content/uploads/2024/07/11-bng-150x90.jpg)
Bengaluru: ಅಕ್ರಮ ಆಸ್ತಿ: ಬೆಸ್ಕಾಂ ಎಇಇಗೆ 3 ವರ್ಷ ಸಜೆ,1 ಕೋಟಿ ರೂ. ದಂಡ ವಿಧಿಸಿದ ಕೋರ್ಟ್
![10-bng](https://www.udayavani.com/wp-content/uploads/2024/07/10-bng-150x90.jpg)
Bengaluru: ಶೋಕಿಲಾಲನಿಗೆ ನಕಲಿ ಎ.ಕೆ.47 ಕೊಡಿಸಿದ್ದ ವ್ಯಕ್ತಿಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.