![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 11, 2020, 3:04 AM IST
ಬೆಳಗಾವಿ: ಮನುಷ್ಯನಿಗೆ ಆಸೆಗಳು ಬಹಳ. ಅದೇ ರೀತಿ ನನಗೂ ಮುಖ್ಯಮಂತ್ರಿ ಆಗುವ ಆಸೆ. ಆದರೆ ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿ, ರಾಜಕಾರಣದಲ್ಲಿ ಪ್ರತಿಯೊಬ್ಬರಿಗೂ ಶಾಸಕ ಆಗಬೇಕು.
ನಂತರ ಸಚಿವರು ಆಮೇಲೆ ಮುಖ್ಯಮಂತ್ರಿಯಾಗುವ ಆಸೆ ಇರುತ್ತದೆ ಎಂದರು. ಸಿದ್ದರಾಮಯ್ಯ ಏನೇನೋ ಮಾತನಾಡುತ್ತಾರೆ. ಅವರು ಕಾನೂನು ಓದಿದವರು. ಒಮ್ಮೊಮ್ಮೆ ನನಗೆ ಕಾನೂನು ಗೊತ್ತಿಲ್ಲ ಎಂದು ನನ್ನ ಮೇಲೆ ವಾಗ್ಧಾಳಿ ನಡೆಸುತ್ತಾರೆ. ಕಾನೂನು ಗೊತ್ತಿರದೇ ಇದ್ದರೆ ನಾನು 25 ವರ್ಷ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿರಲಿಲ್ಲ.
ಪೊಲೀಸ್ ಇಲಾಖೆ ಚಾರ್ಜ್ ಶೀಟ್ ಕೊಟ್ಟ ಮೇಲೆ ವಕೀಲರ ಕೆಲಸ ಆರಂಭವಾಗುತ್ತದೆ. ನಾವು ಸಿದ್ದರಾಮಯ್ಯ ಅವರನ್ನು ಸಂತೋಷ ಪಡಿಸಲು ಸಚಿವರಾಗಿಲ್ಲ. ಸಿದ್ದರಾಮ ಯ್ಯ ನಡೆದುಕೊಂಡ ರೀತಿಯಿಂದ ಬೇಸತ್ತು ಹೊರಬಂದಿದ್ದೇವೆ ಎಂದರು.
You seem to have an Ad Blocker on.
To continue reading, please turn it off or whitelist Udayavani.