![Gundlupete: ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರ ಮೃತ್ಯು…](https://www.udayavani.com/wp-content/uploads/2024/07/gundlupete-415x222.jpg)
ನಾನು ಕೋಟಾ ಶ್ರೀನಿವಾಸ್ ಪೂಜಾರಿ ಅವರ ಅಭಿಮಾನಿ: ಡಿ.ಕೆ.ಶಿವಕುಮಾರ್
ವಿಧಾನ ಪರಿಷತ್ ಕಲಾಪದಲ್ಲಿ ಡಿಸಿಎಂ ಮಾತುಗಳು
Team Udayavani, Jul 6, 2023, 6:18 PM IST
![1-sadadasd](https://www.udayavani.com/wp-content/uploads/2023/07/1-sadadasd-620x372.jpg)
ವಿಧಾನಪರಿಷತ್ : ನಾನು ಕೋಟಾ ಶ್ರೀನಿವಾಸ್ ಪೂಜಾರಿ ಅವರ ಅಭಿಮಾನಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗುರುವಾರ ವಿಧಾನ ಪರಿಷತ್ ಕಲಾಪದಲ್ಲಿ ಹೇಳಿದ್ದಾರೆ.
ಕಲಾಪದಲ್ಲಿ ಭಾಗಿಯಾಗಿ ಮಾತನಾಡಿದ ಡಿಸಿಎಂ, ಈ ಪರಿಷತ್ತಿನ ಘನತೆ ಹೇಗಿತ್ತು ಎಂದರೆ ಬಂಗಾರಪ್ಪ ಅವರ ಕಾಲದಲ್ಲಿ ಮಂತ್ರಿಯಾಗಿ ಬಂದವನು ನಾನು. ಎಚ್.ಕೆ.ಪಾಟೀಲ್, ಕಲ್ಮನ್ಕರ್, ಎಕೆ.ಸುಬ್ಬಯ್ಯ, ಎಂಸಿ ನಾಣಯ್ಯ ಇದ್ದರು.ಎರಡನೇ ಹಾಗೂ ಮೂರನೇ ದರ್ಜೆ ಲಿಕ್ಕರ್ ಕುರಿತು ಎಂಸಿ.ನಾಣಯ್ಯ ಅವರ ಮಾತನ್ನು ಕೇಳಿ, ಎಸ್.ಎಂ.ಕೃಷ್ಣ ಅವರು ಲಿಕ್ಕರ್ಗಳನ್ನ ಬ್ಯಾನ್ ಮಾಡುವುದಾಗಿ ಹೇಳಿದ್ದರು ಎಂದರು.
ಹಿರಿಯರ ಮನೆ ಇದು, 33 ವರ್ಷ ಆಯಿತು ಇಲ್ಲಿಗೆ ಬಂದು ಇದರ ಘನತೆಯನ್ನು ಕಾಪಾಡಬೇಕು. ನಮ್ಮ ಪಂಚ ಗ್ಯಾರಂಟಿಗಳನ್ನ ಮನತುಂಬಿ ಒಪ್ಪಿಕೊಂಡಿದ್ದೀರಿ ಧನ್ಯವಾದಗಳು. ನಾನು ಸಮಾಧಾನದಿಂದ ನಿಮ್ಮ ಮಾತನ್ನು ಆಲಿಸಿದ್ದೇನೆ. ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ “ಅರ್ಚಕನ ಪ್ರಭಾವದಿಂದ ಶಿಲೆ ಕೂಡ ಶಂಕರನನ್ನು ಕಾಣಬಹುದು” ಎಂದರು.
ಅಧ್ಯಕ್ಷರೇ, ಈ ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಈ ಹಿಂದನ ಸರ್ಕಾರದ ಎಲ್ಲಾ ಆಚಾರ- ವಿಚಾರಗಳನ್ನ ನಾವು ಪ್ರಚಾರ ಮಾಡಿದ್ದೆವು, ಅದರ ಬಗ್ಗೆ ಮಾತನಾಡುವುದಿಲ್ಲ.ನಮ್ಮಪಂಚ ಗ್ಯಾರಂಟಿಗಳನ್ನ ರಾಜ್ಗಪಾಲರ ಭಾಷಣದ ಮೂಲಕ ನೀವುಗಳು ತಿಳಿದುಕೊಳ್ಳಬಹುದು. ಬೇರೆ ಚರ್ಚೆಗೆ ಸಂದರ್ಭವಲ್ಲ.ಯಾಕೆ ಈ ಯೋಜೆನಗಳನ್ನು ತಂದೆವು ಎಂದರೆ ಪ್ರತಿ ದಿನ ಪಿಕ್ ಪಾಕೆಟ್ ಆಗ್ತಾ ಇತ್ತು. 60 ರೂಪಾಯಿ ಇದ್ದ ಪೆಟ್ರೋಲ್ ಡಿಸೇಲ್ 100 ರೂಪಾಯಿ ಆಗಿ ಗ್ಯಾಸ್ 1 ಸಾವಿರ ರೂಪಾಯಿ ಆಗಿ, ಉಪ್ಪು, ಮೊಸರಿಗೂ ಜಿ ಎಸ್ ಟಿ ಹಾಕಿ ಸಾಕಷ್ಟು ಕಷ್ಟ ಆಗುತ್ತಿತ್ತು.ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದರು ಜನ. ಈ ಕಾರಣಕ್ಕೆ ಈ ಪಂಚ ಯೋಜನೆಗಳನ್ನು ಜಾರಿಗೆ ತರುವ ಆಲೋಚನೆ ಬಂದಿತು. ಯಾವುದೇ ಭ್ರಷ್ಟಾಚಾರ ಇಲ್ಲದೇ, ಯಾವುದೇ ಪೇ ಕಮಿಷನ್, ಪೇ ಮಿನಿಸ್ಟರ್, ಪೇ ಸಿಎಂ ಆಗದಂತೆ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
ನಾವು ನೀವು ಯಾವುದೇ ಸಲಹೆ- ಸೂಚನೆಗಳನ್ನು ಕೊಟ್ಟರು ನಾವು ತೆಗೆದುಕೊಳುತ್ತೇವೆ. ಈಗ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗೆ ಅವಕಾಶವಿದೆ, ಅದರ ಮೇಲೆ ಮೊದಲು ಚರ್ಚೆಯಾಗಲಿ ಎಂದರು.
ಟಾಪ್ ನ್ಯೂಸ್
![Gundlupete: ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರ ಮೃತ್ಯು…](https://www.udayavani.com/wp-content/uploads/2024/07/gundlupete-415x222.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Gundlupete: ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರ ಮೃತ್ಯು…](https://www.udayavani.com/wp-content/uploads/2024/07/gundlupete-150x80.jpg)
Gundlupete: ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರ ಮೃತ್ಯು…
![Basavaraj Bommai](https://www.udayavani.com/wp-content/uploads/2024/07/Basavaraj-Bommai-150x96.jpg)
Basavaraj Bommai; ಒಂದುವರೆ ತಿಂಗಳುಗಳ ಕಾಲ ಶಿಗ್ಗಾವಿಯಲ್ಲಿ ಧನ್ಯವಾದ ಯಾತ್ರೆ
![lakshmi hebbalkar](https://www.udayavani.com/wp-content/uploads/2024/07/lakshmi-hebbalkar-150x89.jpg)
CM-DCM ಬದಲಾವಣೆ ಚರ್ಚೆಯಲ್ಲಿ ನಾನಿಲ್ಲ: ಸಚಿವೆ ಹೆಬ್ಬಾಳ್ಕರ್
![prahlad-joshi](https://www.udayavani.com/wp-content/uploads/2024/07/prahlad-joshi-150x86.jpg)
Mahadayi ಪ್ರವಾಹ್ ಸಮಿತಿ ಭೇಟಿ ಬಗ್ಗೆ ಬೇರೆ ಅರ್ಥ ಕೊಡಬಾರದು: ಜೋಶಿ
![CM-SC-Meeting](https://www.udayavani.com/wp-content/uploads/2024/07/CM-SC-Meeting-150x84.jpg)
Government Decision; ದಲಿತ ವಿದ್ಯಾರ್ಥಿಗಳಿಗೆ ಬಂಪರ್: 15,000 ಸ್ಟೈ ಫಂಡ್
MUST WATCH
ಹೊಸ ಸೇರ್ಪಡೆ
![Gundlupete: ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರ ಮೃತ್ಯು…](https://www.udayavani.com/wp-content/uploads/2024/07/gundlupete-150x80.jpg)
Gundlupete: ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರ ಮೃತ್ಯು…
![Zim vs Ind: ಕನಿಷ್ಠ ಮೊತ್ತ ಗರಿಷ್ಠ ಒತ್ತಡ; ಯುವ ಭಾರತಕ್ಕೆ ಶಾಕ್ ಕೊಟ್ಟ ಜಿಂಬಾಬ್ಬೆ](https://www.udayavani.com/wp-content/uploads/2024/07/5-4-150x90.jpg)
Zim vs Ind: ಕನಿಷ್ಠ ಮೊತ್ತ ಗರಿಷ್ಠ ಒತ್ತಡ; ಯುವ ಭಾರತಕ್ಕೆ ಶಾಕ್ ಕೊಟ್ಟ ಜಿಂಬಾಬ್ಬೆ
![Pune: ಮದ್ಯದ ಮತ್ತಲ್ಲಿ ಪೊಲೀಸರಿಗೇ ಬೆಂಕಿ ಹಚ್ಚಲು ಯತ್ನಿಸಿದಾನ ಸೆರೆ](https://www.udayavani.com/wp-content/uploads/2024/07/pune-1-150x84.jpg)
Pune: ಮದ್ಯದ ಮತ್ತಲ್ಲಿ ಪೊಲೀಸರಿಗೇ ಬೆಂಕಿ ಹಚ್ಚಲು ಯತ್ನಿಸಿದಾನ ಸೆರೆ
![Building Collapses: ಕುಸಿದ 6 ಅಂತಸ್ಥಿನ ಕಟ್ಟಡ… 10ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/SURATH-150x84.jpg)
Surath: ಕುಸಿದ 6 ಅಂತಸ್ತಿನ ಕಟ್ಟಡ… ಓರ್ವ ಮಹಿಳೆ ರಕ್ಷಣೆ, ಹಲವರು ಸಿಲುಕಿರುವ ಶಂಕೆ
![Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ](https://www.udayavani.com/wp-content/uploads/2024/07/4-4-150x90.jpg)
Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.