![Yadagiri CEO withdrew the order issued in the matter of blocking the promotion of teachers](https://www.udayavani.com/wp-content/uploads/2024/06/teachers-415x229.jpg)
ನಾನು ಅಪಹರಣ ಮಾಡಿಸಿಲ್ಲ, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ: ಭವಾನಿ ರೇವಣ್ಣ
Team Udayavani, Jun 8, 2024, 8:07 PM IST
![ನಾನು ಅಪಹರಣ ಮಾಡಿಸಿಲ್ಲ, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ: ಭವಾನಿ ರೇವಣ್ಣ](https://www.udayavani.com/wp-content/uploads/2024/06/17-620x372.jpg)
ಬೆಂಗಳೂರು: ಕೆ.ಆರ್.ನಗರದ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ಮುಂದೆ ತನಿಖೆಗಾಗಿ ಹಾಜರಾಗಿರುವ ಭವಾನಿ ರೇವಣ್ಣ ಅವರು, “ನಾನು ಯಾರನ್ನೂ ಅಪಹರಣ ಮಾಡಿಸಿಲ್ಲ. ಎಲ್ಲರೂ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.
ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಭವಾನಿ ಮಹತ್ವದ ಮಾಹಿತಿಯನ್ನೇನೂ ನೀಡಿಲ್ಲ. ಅಪಹರಣದ ಬಗ್ಗೆ ತನಗೇನೂ ಗೊತ್ತಿಲ್ಲ ಎಂದಷ್ಟೇ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರು ಆರೋಪಿಗಳ ನಡುವಿನ ಆಡಿಯೊ ಸಂಭಾಷಣೆಯನ್ನು ಕೇಳಿಸಿ ವಿಚಾರಿಸಿದಾಗ, “ನಾನು ಯಾರನ್ನೂ ಕರೆದುಕೊಂಡು ಬರಲು ಹೇಳಿಲ್ಲ. ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ನನ್ನ ಮೇಲೆ ಬಂದಿರುವ ಆರೋಪಗಳೆಲ್ಲ ಸುಳ್ಳು’ ಎಂದೇ ವಾದಿಸಿದ್ದಾರೆ ಎನ್ನಲಾಗಿದೆ. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಸಂತ್ರಸ್ತೆ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದುದು ನಿಜ. ಆದರೆ, ಅಪಹರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಭವಾನಿ ಹೇಳಿದ್ದಾರೆ ಎನ್ನಲಾಗಿದೆ.
ಆಡಿಯೋ ಮುಂದಿಟ್ಟು ಪ್ರಶ್ನಿಸಿದ ಎಸ್ಐಟಿ :
“ಇನ್ನು 150-200 ರೂಪಾಯಿಯ ಸೀರೆ ಕೊಡಿಸಿದರಾಯಿತು, ಕರೆದುಕೊಂಡು ಬಾ. ಅಥವಾ 2 ವರ್ಷ ಶಿಕ್ಷೆ ಆಗುತ್ತದೆ ಅಂತ ಹೇಳು ಬರುತ್ತಾಳೆ’ ಎಂದು ಚಾಲಕನೊಂದಿಗೆ ಭವಾನಿ ಮಾತನಾಡಿದ್ದಾರೆ ಎನ್ನಲಾದ ಆಡಿಯೊವೊಂದನ್ನು ಸಾಕ್ಷ್ಯವಾಗಿಟ್ಟುಕೊಂಡು ಎಸ್ಐಟಿ ಪ್ರಶ್ನಿಸಿತ್ತು ಎನ್ನಲಾಗಿದೆ. ಭವಾನಿ ಹೇಳಿಕೆ ದಾಖಲಿಸಿಕೊಂಡಿರುವ ಎಸ್ಐಟಿಯು ಅಗತ್ಯಬಿದ್ದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಅದಕ್ಕೆ ಭವಾನಿ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
![Yadagiri CEO withdrew the order issued in the matter of blocking the promotion of teachers](https://www.udayavani.com/wp-content/uploads/2024/06/teachers-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಸಿಎಂ ಬದಲಾವಣೆ ಆಗುವುದಾದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಿ: ಪಂಡಿತಾರಾಧ್ಯ ಸ್ವಾಮೀಜಿ](https://www.udayavani.com/wp-content/uploads/2024/06/jagadgu-150x83.jpg)
ಸಿಎಂ ಬದಲಾವಣೆ ಆಗುವುದಾದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಿ: ಪಂಡಿತಾರಾಧ್ಯ ಸ್ವಾಮೀಜಿ
![CM ಬದಲಾವಣೆ ಒಪ್ಪಂದವೇ ಆಗಿಲ್ಲ; ಬದಲಾವಣೆಯೂ ಆಗಲ್ಲ: ದಿನೇಶ್ ಗುಂಡೂರಾವ್](https://www.udayavani.com/wp-content/uploads/2024/06/dinesh-2-150x83.jpg)
CM ಬದಲಾವಣೆ ಒಪ್ಪಂದವೇ ಆಗಿಲ್ಲ; ಬದಲಾವಣೆಯೂ ಆಗಲ್ಲ: ದಿನೇಶ್ ಗುಂಡೂರಾವ್
![Byadagi incident: ವಿಧಿಯಾಟಕ್ಕೆ ಬಲಿಯಾಯ್ತು ಐಎಎಸ್ ಕನಸು; ಫುಟ್ ಬಾಲ್ ಕ್ಯಾಪ್ಟನ್ ದುರ್ಮರಣ](https://www.udayavani.com/wp-content/uploads/2024/06/manasa-150x83.jpg)
Byadagi incident: ವಿಧಿಯಾಟಕ್ಕೆ ಬಲಿಯಾಯ್ತು ಐಎಎಸ್ ಕನಸು; ಫುಟ್ ಬಾಲ್ ಕ್ಯಾಪ್ಟನ್ ದುರ್ಮರಣ
![Heavy Rain: ಮಲೆನಾಡು, ಕರಾವಳಿಯಲ್ಲಿ ಮಳೆಗೆ ಜನ ತತ್ತರ](https://www.udayavani.com/wp-content/uploads/2024/06/30-3-150x90.jpg)
Heavy Rain: ಮಲೆನಾಡು, ಕರಾವಳಿಯಲ್ಲಿ ಮಳೆಗೆ ಜನ ತತ್ತರ
![Egret ಆರಿದ್ರ ಮಳೆಯೊಂದಿಗೆ ಶಿರಸಿಯ ಮುಂಡಿಗೇಕೆರೆಗೆ ಬೆಳ್ಳಕ್ಕಿಗಳ ಆಗಮನ!](https://www.udayavani.com/wp-content/uploads/2024/06/egret-150x100.jpg)
Egret: ಆರಿದ್ರ ಮಳೆಯೊಂದಿಗೆ ಶಿರಸಿಯ ಮುಂಡಿಗೇಕೆರೆಗೆ ಬೆಳ್ಳಕ್ಕಿಗಳ ಆಗಮನ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.