![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Feb 11, 2022, 7:00 AM IST
ಬೆಂಗಳೂರು: ವೈದ್ಯಕೀಯ ಪದವಿ ಆಕಾಂಕ್ಷಿಗಳಿಗೆ ಹೊಸ ಆತಂಕ ಎದುರಾಗಿದೆ. ಎಂಜಿನಿಯರಿಂಗ್ ಸೀಟು ಉಳಿಸಿಕೊಂಡಿರುವ ವಿದ್ಯಾರ್ಥಿಗಳು ಆ ಕೋರ್ಸ್ ಶುಲ್ಕ ಪಾವತಿಸ ಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೂಚಿಸಿದೆ. ಹೀಗಾಗಿ ಅವರು ಮೆಡಿಕಲ್, ಎಂಜಿನಿಯರಿಂಗ್ -ಎರಡೂ ಶುಲ್ಕ ತೆರಬೇಕಿದೆ. ಎಂಬಿಬಿಎಸ್ಗೆ ಮುನ್ನವೇ ಎಂಜಿನಿ ಯರಿಂಗ್ ಪ್ರವೇಶ ಪ್ರಕ್ರಿಯೆ ಪೂರ್ಣ ಗೊಳಿಸಿದ್ದೇ ಇದಕ್ಕೆ ಕಾರಣ.
ವೈದ್ಯಕೀಯ ಪ್ರವೇಶ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಇದ್ದು, ಪ್ರಕ್ರಿಯೆ ವಿಳಂಬವಾಗಿತ್ತು. ಹಲವರು ವೈದ್ಯ ಸೀಟು ಸಿಗದಿದ್ದರೆ ಎಂದು ಎಂಜಿ ನಿಯರಿಂಗ್ ಸೀಟು ಉಳಿಸಿಕೊಂಡಿದ್ದರು. ಈಗ ವೈದ್ಯ ಸೀಟು ಸಿಕ್ಕಿರುವುದರಿಂದ ಎಂಜಿನಿಯರಿಂಗ್ ಸೀಟ್ ವಾಪಸ್ ನೀಡಲು ಸಿದ್ಧರಿದ್ದಾರೆ.
ವೈದ್ಯ ಸೀಟು ಸಿಕ್ಕಿದೆ. ಕಾಲೇಜು ಪ್ರವೇಶಕ್ಕಾಗಿ 1,41,196 ರೂ. ಪಾವತಿಸ ಬೇಕಿದೆ. ಆದರೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಹೋದರೆ ಎರಡೂ ಕೋರ್ಸ್ಗಳ ಶುಲ್ಕ ಪಾವತಿಸುವಂತೆ ವೆಬ್ಸೈಟ್ನಲ್ಲಿ ತೋರಿಸುತ್ತಿದೆ. ಒಟ್ಟು 2,24,722 ರೂ. ಪಾವತಿಸಬೇಕು. ಫೆ. 14ರೊಳಗೆ ಪ್ರವೇಶ ಪಡೆದು ಕೊಳ್ಳ ಬೇಕಿದೆ. ಮೊದಲ ಸುತ್ತಿನಲ್ಲಿ ಸುಮಾರು 1,500ಕ್ಕೂ ಹೆಚ್ಚಿನ ಆಕಾಂಕ್ಷಿಗಳಿದ್ದು, ನಮ್ಮದಲ್ಲದ ತಪ್ಪಿಗೆ ನಾವೇಕೆ ಎರಡೆರಡು ಶುಲ್ಕ ಪಾವತಿಸಬೇಕು ಎಂದು ವೈದ್ಯ ಸೀಟು ಆಕಾಂಕ್ಷಿಯೊಬ್ಬರು ಪ್ರಶ್ನಿಸಿದ್ದಾರೆ.
ಪ್ರತೀ ವರ್ಷದಂತೆ ಈ ವರ್ಷವೂ ಪ್ರವೇಶ ಪ್ರಕ್ರಿಯೆ ನಡೆದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಸರಕಾರ ಎಂಜಿನಿಯರಿಂಗ್ ಪ್ರವೇಶ ಪ್ರಕ್ರಿಯೆ ಮುಗಿಸಿದೆ. ಒಂದು ವೇಳೆ ವೈದ್ಯ ಸೀಟು ಕೂಡ ಸಿಗದಿದ್ದರೆ 1 ವರ್ಷ ಕಾಯ ಬೇಕಾಗಿತ್ತು. ಸರಕಾರದ ಎಡವಟ್ಟಿನಿಂದ ನಾವು ಶುಲ್ಕ ಭಾರ ಹೊರಬೇಕಾಗಿದೆ ಎಂದಿದ್ದಾರೆ.
ಇತರ ವಿದ್ಯಾರ್ಥಿಗಳಿಗೆ ನಷ್ಟ: ಕೆಇಎ
ಸರಕಾರ ಸೂಚಿಸಿದಂತೆ ಮತ್ತು ಸಿಇಟಿ ಪ್ರವೇಶ ಪ್ರಕ್ರಿಯೆ ವೇಳಾಪಟ್ಟಿಯಂತೆ ಎಂಜಿನಿಯರಿಂಗ್ ಪ್ರವೇಶ ಪ್ರಕ್ರಿಯೆ ನಡೆಸಲಾಗಿದೆ. ವೈದ್ಯ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೀಟು ಉಳಿಸಿ ಕೊಂಡಿರುವುದರಿಂದ ಮತ್ತು ಎಂಜಿನಿಯರಿಂಗ್ ಪ್ರವೇಶ ಪ್ರಕ್ರಿಯೆ ಈಗಾಗಲೇ ಮುಗಿದಿರುವುದರಿಂದ ಕಾಲೇಜುಗಳಿಗೆ 1 ಸೀಟು ನಷ್ಟವಾಗುತ್ತದೆ.
ವಿದ್ಯಾರ್ಥಿಗಳು ಸೀಟನ್ನು ಉಳಿಸಿಕೊಳ್ಳದಿದ್ದರೆ ಬೇರೆ ವಿದ್ಯಾರ್ಥಿಗಳು ಪಡೆಯುತ್ತಿದ್ದರು. ಆದರೆ ಈಗ ಸೀಟು ಉಳಿಯುವ ಜತೆಗೆ ಬೇರೆ ವಿದ್ಯಾರ್ಥಿ ಗಳಿಗೆ ಅನ್ಯಾಯವಾಗಿದೆ. ಸೀಟು ಉಳಿಸಿ ಕೊಂಡು ವಿದ್ಯಾರ್ಥಿಗಳು ತಪ್ಪು ಮಾಡಿದ್ದಾರೆ. ಹಿಂದಿನ ವರ್ಷಗಳಲ್ಲಿ ಈ ರೀತಿ ಸೀಟು ಉಳಿಸಿಕೊಂಡಿದ್ದರೆ ಸೀಟು ಬ್ಲಾಕ್ ಮಾಡಿದ್ದಾರೆ ಎಂದು ಶುಲ್ಕದ 5 ಪಟ್ಟು ದಂಡ ವಿಧಿಸಲಾಗುತ್ತಿತ್ತು. ಆದರೆ ಈ ವರ್ಷ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಕನಿಷ್ಠ ಒಂದು ವರ್ಷದ ಶುಲ್ಕ ಪಾವತಿಸಲೇ ಬೇಕು ಎಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ ತಿಳಿಸಿದ್ದಾರೆ.
ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಸೀಟ್ ಬಗ್ಗೆ ಆಕಾಂಕ್ಷಿಗಳು ಸ್ಪಷ್ಟತೆ ಹೊಂದಿರ ಬೇಕು. ನಿಯಮ ಪ್ರಕಾರ ಎರಡೂ ಕೋರ್ಸ್ ಶುಲ್ಕ ಪಾವತಿಸಲೇಬೇಕು. ಶುಲ್ಕ ಮರು ಪಾವತಿ ಅಧಿಕಾರ ಪರೀಕ್ಷಾ ಪ್ರಾಧಿಕಾರಕ್ಕೆ ಇಲ್ಲ. ಸರಕಾರ ನಿರ್ಧರಿಸಿದಂತೆ ಕ್ರಮ ಕೈಗೊಳ್ಳಲಾಗುತ್ತದೆ.
– ರಮ್ಯಾ,
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.