![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Oct 15, 2019, 3:05 AM IST
ತುಮಕೂರು: “ನಾಳೆ ನಾಡಿದ್ದು ನನ್ನ ಮೇಲೂ ಐಟಿ ದಾಳಿ ಮಾಡಬಹುದು. ಹಾಗೊಂದು ವೇಳೆ ಆದರೆ ಅದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಕಾರಣ. ನನ್ನ ಮೇಲೆ ದಾಳಿ ಆದರೆ ಅವರ ಮೇಲೂ ದಾಳಿ ಮಾಡಿ ಎಂದು ನಾನು ಒತ್ತಾಯ ಮಾಡುತ್ತೇನೆ, ಅವರ ಆಸ್ತಿ ಸಂಪಾದನೆಯೂ ಬಹಿರಂಗಗೊಳ್ಳಲಿ’ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನಾಳೆ, ನಾಡಿದ್ದು ನಮ್ಮ ಮೇಲೂ ಐಟಿ ರೈಡ್ ಮಾಡಬಹುದು, ಅದನ್ನು ಎದುರಿಸಲು ನಾನು ತಯಾರಾಗಿದ್ದೇನೆ ಎಂದರು. “ನಿಮ್ಮ ಮೇಲೆ ಐಟಿ ರೇಡ್ ಆಗುತ್ತದೆ ಎಂದು ನಿಮಗೆ ಗೊತ್ತಾಗಿದೆಯಾ?’ ಎಂಬ ಪ್ರಶ್ನೆಗೆ , ನಮಗೂ ಎಲ್ಲಾ ಕಡೆ ಇಂಟೆಲಿಜನ್ಸ್ ಇದೆ, ಮಾಹಿತಿ ಬರುತ್ತದೆ, ಮಾಡುವುದು ಮಾಡಲಿ, ನಮ್ಮದೇನೂ ತೊಂದರೆ ಇಲ್ಲ ಎಂದು ಹೇಳಿದರು.
ನನಗೂ ಇಡಿಗೂ ಸಂಬಂಧವೇ ಇಲ್ಲ, ಕೆಲವು ಮಾಹಿತಿಗಳನ್ನು ಅವರು ಕೇಳಿದ್ದಾರೆ. ಅದನ್ನೆಲ್ಲಾ ತಗೊಂಡು ಹೋಗಿ ನಾಳೆ ಕೊಟ್ಟು ಬರುತ್ತೇನೆ. ಇನ್ನೊಂದು ಸಲ ನೋಟಿಸ್ ನೀಡಬೇಡಿ, ಯಾವಾಗ ಬೇಕೋ ಅವಾಗ ನಾನೇ ಬರುತ್ತೇನೆ ಎಂದು ಹೇಳಿದ್ದೇನೆ ಎಂದು ರಾಜಣ್ಣ ಹೇಳಿದರು.
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.