![Sullia ಜಾಲ್ಸೂರು: ಪತ್ನಿಗೆ ಚೂರಿಯಿಂದ ಹಲ್ಲೆ](https://www.udayavani.com/wp-content/uploads/2024/07/ban-415x277.jpg)
JDS MLC ಸೂರಜ್ ರೇವಣ್ಣಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ
Team Udayavani, Jun 24, 2024, 6:00 AM IST
![1-SURAJ](https://www.udayavani.com/wp-content/uploads/2024/06/1-SURAJ-620x371.jpg)
ಬೆಂಗಳೂರು: ಪರಿಚಯಸ್ಥ ಯುವಕನ ಮೇಲೆ ಅನೈಸರ್ಗಿಕ ಲೈಂಗಿಕ ಕ್ರಿಯೆ, ದೌರ್ಜನ್ಯ ಎಸಗಿದ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಜೆಡಿಎಸ್ ಎಂಎಲ್ಸಿ ಸೂರಜ್ ರೇವಣ್ಣ ಅವರನ್ನು ರವಿವಾರ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದಕ್ಕೂ ಮುನ್ನ ಹಾಸನ ದಲ್ಲಿ ಪೊಲೀಸರು ಅವರನ್ನು ಶನಿ ವಾರ ಸಂಜೆಯೇ ವಶಕ್ಕೆ ಪಡೆದು ತಡರಾತ್ರಿವರೆಗೆ ವಿಚಾರಣೆ ನಡೆಸಿ ದ್ದರು. ರವಿವಾರ ಬೆಳಗ್ಗೆ ಅವರನ್ನು ಅಧಿಕೃತವಾಗಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಸೂರಜ್ ಅವರನ್ನು 42ನೇ ಎಸಿಎಂಎಂ ಕೋರ್ಟ್ನ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಅವರನ್ನು ಜು. 6ರ ವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ.
ಈ ನಡುವೆ ರಾಜ್ಯ ಸರಕಾರ ಪ್ರಕರಣದ ತನಿಖೆಯ ಹೊಣೆ ಯನ್ನು ಸಿಐಡಿಗೆ ಒಪ್ಪಿಸಿದೆ. ಸೋಮವಾರ ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಲಿದ್ದು, ಬಾಡಿ ವಾರಂಟ್ ಪಡೆದು ಸೂರಜ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಹೊಳೇನರಸೀಪುರ ಠಾಣೆಯಲ್ಲಿ ಜೂ. 22ರಂದು ದಾಖಲಾಗಿದ್ದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ರಾಜ್ಯ ಸರಕಾರ ಸಿಐಡಿಗೆ ವರ್ಗಾವಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹೊಳೇನರಸೀಪುರ ಠಾಣೆ ಪೊಲೀಸರು ಸೂರಜ್ ಅವರನ್ನು ಬಿಗಿ ಭದ್ರತೆಯಲ್ಲಿ ಬೆಂಗಳೂರಿಗೆ ಕರೆತಂದು, ರವಿವಾರ ಸಂಜೆ ಕೋರಮಂಗಲದಲ್ಲಿರುವ 42ನೇ ಎಸಿಎಂಎಂ ಕೋರ್ಟ್ನ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಿದರು. ಬಳಿಕ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿರುವುದರಿಂದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡಿದರು. ಅದಕ್ಕೆ ನ್ಯಾಯಾಧೀಶರು ಸಮ್ಮತಿಸಿ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.
ಇಂದು ಪ್ರಕರಣದ ಕಡತಗಳು ಹಸ್ತಾಂತರ
ರಾಜ್ಯ ಸರಕಾರದ ಸೂಚನೆ ಮೇರೆಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಪ್ರಕರಣದ ವರ್ಗಾವಣೆಗೆ ಆದೇಶ ಹೊರಡಿಸಿದ್ದಾರೆ. ಹೊಳೇನರಸಿಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಕ್ರೈಂ ನಂಬರ್ 92/2024 ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದ್ದು, ಈ ಕೂಡಲೇ ಮುಂದಿನ ತನಿಖೆಗಾಗಿ ಪ್ರಕರಣದ ಎಲ್ಲ ಕಡತಗಳನ್ನು ಸಿಐಡಿ ಕಚೇರಿಗೆ ತೆರಳಿ, ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದ ಹಿರಿಯ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ. ಹಾಸನ ಪೊಲೀಸರು ಆರೋಪಿ ಸೂರಜ್ ಸಮೇತ ಬೆಂಗಳೂರಿಗೆ ಕರೆತಂದಿದ್ದು, ರಾತ್ರಿ ತಡವಾಗಿದ್ದರಿಂದ ಸೋಮವಾರ ಪ್ರಕರಣದ ಎಲ್ಲ ಕಡತಗಳನ್ನು ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ.
ಸಂಕಷ್ಟದ ಸುಳಿಗೆ ಸಿಲುಕಿದ ರೇವಣ್ಣ ಕುಟುಂಬ!
ಸಂತ್ರಸ್ತೆಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಬಂಧನಕ್ಕೆ ಒಳಗಾಗಿ 10 ದಿನ ಸೆರೆವಾಸ ಅನುಭವಿಸಿ, ಬಿಡುಗಡೆಯಾಗಿದ್ದಾರೆ. ಅವರ ದ್ವಿತೀಯ ಪುತ್ರ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ದ್ದಾರೆ. ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಬಂಧನ ಭೀತಿ ಎದುರಿಸುತ್ತಿದ್ದು, ಸದ್ಯ ನಿರೀಕ್ಷಣ ಜಾಮೀನು ಪಡೆದುಕೊಂಡಿದ್ದಾರೆ. ಈಗ ಮೊದಲ ಪುತ್ರ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅನೈಸರ್ಗಿಕ ಲೈಂಗಿಕ ಕ್ರಿಯೆ, ದೌರ್ಜನ್ಯ ಆರೋಪಡಿ ಬಂಧನಕ್ಕೆ ಒಳಗಾಗಿದ್ದಾರೆ. ಹೀಗೆ ರೇವಣ್ಣ ಕುಟುಂಬಕ್ಕೆ ಸಾಲು ಸಾಲು ಸಂಕಷ್ಟಗಳು ಎದುರಾಗಿವೆ.
ಸೂರಜ್ ರೇವಣ್ಣ ಬಗ್ಗೆ ನನ್ನಲ್ಲೇಕೆ ಕೇಳುತ್ತೀರಿ? ಈ ರೀತಿಯ ವಿಷಯ ಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಕಾನೂನು ಅದರ ಕ್ರಮ ತೆಗೆದುಕೊಳ್ಳುತ್ತದೆ.
-ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ನಮ್ಮ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡು ತ್ತಿದ್ದಾರೆ. ಹಾಸನದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸದೆ ಬೆಂಗಳೂರಿಗೆ ಯಾಕೆ ಕರೆ ತಂದರು? ಯಾರು ಷಡ್ಯಂತ್ರ ಮಾಡುತ್ತಿ ದ್ದಾರೆ ಎಂದು ಈಗ ಹೇಳುವುದಿಲ್ಲ. ಸಮಯ ಬಂದಾಗ ಹೇಳುತ್ತೇನೆ.
– ಎಚ್.ಡಿ. ರೇವಣ್ಣ, ಮಾಜಿ ಸಚಿವ
ಟಾಪ್ ನ್ಯೂಸ್
![Sullia ಜಾಲ್ಸೂರು: ಪತ್ನಿಗೆ ಚೂರಿಯಿಂದ ಹಲ್ಲೆ](https://www.udayavani.com/wp-content/uploads/2024/07/ban-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![CID ಸೂರಜ್ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ](https://www.udayavani.com/wp-content/uploads/2024/06/suraj-revanna-5-150x85.jpg)
CID ಸೂರಜ್ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ
![“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ](https://www.udayavani.com/wp-content/uploads/2024/06/Parameshwar-7-150x96.jpg)
Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ
![Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ](https://www.udayavani.com/wp-content/uploads/2024/06/SHIVA-150x90.jpg)
Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ
![1-asdsad](https://www.udayavani.com/wp-content/uploads/2024/06/1-asdsad-6-150x92.jpg)
Election; ಧಾರವಾಡ ಕೆಎಂಎಫ್ ಗೆ 9 ಮಂದಿ ನಿರ್ದೇಶಕರ ಆಯ್ಕೆ
![prahlad-joshi](https://www.udayavani.com/wp-content/uploads/2024/06/prahlad-joshi-2-150x86.jpg)
Siddaramaiah ಸರಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ: ಸಚಿವ ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
![Sullia ಜಾಲ್ಸೂರು: ಪತ್ನಿಗೆ ಚೂರಿಯಿಂದ ಹಲ್ಲೆ](https://www.udayavani.com/wp-content/uploads/2024/07/ban-150x100.jpg)
Sullia ಜಾಲ್ಸೂರು: ಪತ್ನಿಗೆ ಚೂರಿಯಿಂದ ಹಲ್ಲೆ
![Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ](https://www.udayavani.com/wp-content/uploads/2024/07/Vandse-150x85.jpg)
Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ
![Modi Interview](https://www.udayavani.com/wp-content/uploads/2024/07/Modi-Interview-150x84.jpg)
Constitution ಮೇಲೆ ನಂಬಿಕೆಗೆ ಧನ್ಯವಾದ: ಮನ್ ಕೀ ಬಾತ್ನಲ್ಲಿ ಮೋದಿ ಹೇಳಿದ್ದೇನು?
![Sharad pawar (2)](https://www.udayavani.com/wp-content/uploads/2024/07/Sharad-pawar-2-150x88.jpg)
Maharashtra ಚುನಾವಣೆಯಲ್ಲಿ MVA ಜತೆಗೂಡಿ ಕಣಕ್ಕೆ: ಶರದ್ ಘೋಷಣೆ
![1-jha](https://www.udayavani.com/wp-content/uploads/2024/07/1-jha-150x84.jpg)
Bihar, ಬಳಿಕ ಝಾರ್ಖಂಡ್ನಲ್ಲಿ ಸೇತುವೆಯೊಂದರ ಗರ್ಡರ್ ಕುಸಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.