KHB ನಿವೇಶನ ಖಾಲಿ ಬಿಟ್ಟರೆ “ದಂಡ’ ಪ್ರಯೋಗ

ಪ್ರಸ್ತುತ ಮಾರ್ಗಸೂಚಿ ಬೆಲೆಯ ಶೇ.25ರಷ್ಟು ದಂಡ ವಿಧಿಸಲು ಶಿಫಾರಸು

Team Udayavani, Nov 28, 2023, 7:25 AM IST

KHB ನಿವೇಶನ ಖಾಲಿ ಬಿಟ್ಟರೆ “ದಂಡ’ ಪ್ರಯೋಗ

ಬೆಂಗಳೂರು: ಕರ್ನಾಟಕ ಗೃಹಮಂಡಳಿ (ಕೆಎಚ್‌ಬಿ)ಯಿಂದ ಹಂಚಿಕೆಯಾದ ನಿವೇಶನಗಳನ್ನು ದೀರ್ಘ‌ಕಾಲ ಖಾಲಿ ಬಿಟ್ಟರೆ, ಅಂತಹ ಹಂಚಿಕೆದಾರರಿಗೆ ದಂಡ ವಿಧಿಸಲು ಸರ್ಕಾರಕ್ಕೆ ಕರ್ನಾಟಕ ಆಡಳಿಯ ಸುಧಾರಣಾ ಆಯೋಗ-2 ಶಿಫಾರಸು ಮಾಡಿದೆ.

ಕೆಎಚ್‌ಬಿ ಮನೆಗಳನ್ನು ನಿರ್ಮಿಸುವ ಬದಲು ನಿವೇಶನಗಳ ರಚನೆ ಮತ್ತು ಹಂಚಿಕೆಗೆ ಹೆಚ್ಚು ಗಮನ ಹರಿಸುತ್ತಿದೆ. ಅನೇಕ ಸೈಟ್‌ ಹಂಚಿಕೆದಾರರು ತಮ್ಮ ನಿವೇಶನಗಳಲ್ಲಿ ನಿಗದಿತ ಅವಧಿಯೊಳಗೆ ಮನೆಗಳನ್ನು ನಿರ್ಮಿಸುವ ಬದಲು ಹೂಡಿಕೆಯಾಗಿ ಇಟ್ಟುಕೊಳ್ಳುತ್ತಾರೆ. ನಿವೇಶನಗಳನ್ನು ಖಾಲಿ ಇಡುವುದನ್ನು ತಡೆಯುವುದು ಮತ್ತು ವಿಳಂಬವಿಲ್ಲದೆ ಮನೆ ನಿರ್ಮಿಸಲು ಹಂಚಿಕೆದಾರರನ್ನು ಪ್ರೇರೇಪಿಸಲು ಎರಡು ಕ್ರಮಗಳನ್ನು ಶಿಫಾರಸು ಮಾಡಿದೆ.

ಖಾಲಿ ನಿವೇಶನಗಳ ಸಂಪೂರ್ಣ ಮಾರಾಟ ಪತ್ರವನ್ನು ನೋಂದಾಯಿಸಲು ನಿವೇಶನದ ಪ್ರಸ್ತುತ ಮಾರ್ಗಸೂಚಿ ಬೆಲೆಯ ಶೇ.25ರಷ್ಟು ದಂಡ ವಿಧಿಸಬಹುದು. ಖಾಲಿ ನಿವೇಶನಗಳ ಮೇಲೆ ವಿಧಿಸಲಾಗುವ ನಿರ್ವಹಣಾ ಶುಲ್ಕವು ನಿರ್ಮಿಸಲಾದ ಮನೆಗಳ ಮೇಲೆ ವಿಧಿಸುವ ಶುಲ್ಕಕ್ಕಿಂತ ಎರಡುಪಟ್ಟು ವಿಧಿಸಬಹುದು. ಇದು ಖಾಲಿ ನಿವೇಶನದಿಂದ ನಿಯಮಿತವಾಗಿ ಮರ-ಗಿಡಗಳ ತೆರವು, ಘನತ್ಯಾಜ್ಯ ತೆರವುಗೊಳಿಸುವ ವೆಚ್ಚ ಒಳಗೊಂಡಿರಬೇಕೆಂಬ ಷರತ್ತು ವಿಧಿಸಬಹುದು ಎಂದಿದೆ.

ನಿರ್ಮಾಣ ವೆಚ್ಚದ ಮೇಲೆ ಕಟ್ಟಡ ನಕ್ಷೆ ಶುಲ್ಕ: ಕಟ್ಟಡ ನಕ್ಷೆಯ ಅನುಮೋದನೆಗಾಗಿ 2013ರಲ್ಲಿ 10 ರೂ.ಗಳ ಶುಲ್ಕ ನಿಗದಿಪಡಿಸಿತ್ತು. ಪ್ರತಿ ಕಟ್ಟಡ ಯೋಜನೆಗೆ ಕಟ್ಟಡ ನಕ್ಷೆ ಅನುಮೋದನೆ, ರಸ್ತೆ ಕಟಾವಣಾ ಶುಲ್ಕ, ಅಭಿವೃದ್ಧಿ ಶುಲ್ಕ, ಸಾಮಗ್ರಿ ಸಂಗ್ರಹ ಶುಲ್ಕವನ್ನು ಮೊತ್ತವಾಗಿ ನಿಗದಿಪಡಿಸುವ ಬದಲು, ಕಟ್ಟಡ ನಿರ್ಮಾಣದ ಅಂದಾಜು ವೆಚ್ಚದ ಶೇಕಡಾವಾರು ನಿಗದಿಪಡಿಸಬೇಕು. ಇನ್ನು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಸತಿ ಯೋಜನೆ (ಪಿಎಂಎಎವೈ)ಯಡಿ ಮನೆ ನಿರ್ಮಾಣ ವೆಚ್ಚದ ಅರ್ಧದಷ್ಟು ಮೊತ್ತವನ್ನು ಬ್ಯಾಂಕ್‌ಗಳಿಂದ ಸಾಲದ ರೂಪದಲ್ಲಿ ಪಡೆಯಲು ಅವಕಾಶವಿದೆ. ಆದರೆ, ಬ್ಯಾಂಕ್‌ಗಳು ಸಿಬಿಲ್‌ ಸ್ಕೋರ್‌ ಪರಿಗಣಿಸುತ್ತಿದ್ದು, ಈ ವ್ಯವಸ್ಥೆ ರದ್ದಾಗಿದ್ದರೂ ಅನುಷ್ಠಾನವಾಗುತ್ತಿಲ್ಲ. ಈ ಬಗ್ಗೆ ಎಸ್‌ಎಲ್‌ಬಿಸಿ ಮೂಲಕ ಸೂಕ್ತ ಸ್ಪಷ್ಟನೆ ನೀಡಬೇಕು ಎಂದು ಶಿಫಾರಸು ಮಾಡಿದೆ.

ಜತೆಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಿದ ಬಡಾವಣೆಗಳ ನಿರ್ವಹಣಾ ಶುಲ್ಕ ಪರಿಷ್ಕರಣೆಗೆ ಸಲಹೆ ನೀಡಿದ್ದು, ಹೆಚ್ಚು ಆದಾಯ ವರ್ಗಕ್ಕೆ ಪ್ರತಿ ಚ.ಮೀ.ಗೆ 240 ರೂ., ಮಧ್ಯಮ ಆದಾಯ ವರ್ಗಕ್ಕೆ 225 ರೂ., ಕಡಿಮೆ ಆದಾಯ ವರ್ಗಕ್ಕೆ 180 ರೂ. ಹಾಗೂ ಇಡಬ್ಲ್ಯುಎಸ್‌ಗೆ 105 ರೂ.ಗೆ ಹೆಚ್ಚಳ ಮಾಡಬಹುದು.

ಬಡಾವಣೆಗಳಿಗೆ ಮೂಲಸೌಕರ್ಯ: ಇನ್ನು ಪ್ರತಿ ನಿವೇಶನ ರಚನೆಗೆ ಎಕರೆಗೆ 3200 ರೂ.ಗಳನ್ನು ವಸತಿ ಇಲಾಖೆಯು ಏಜೆನ್ಸಿಗಳಿಗೆ ನೀಡುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಏಕರೂಪದ ದರವಿದೆ. ರಸ್ತೆ, ಚರಂಡಿ ಗಡಿ ಗುರುತು ಇತ್ಯಾದಿ ಮೂಲಸೌಕರ್ಯ ಒದಗಿಸಿ ನಿವೇಶನ ರಚಿಸಲು ಎಕರೆಗೆ 5 ಲಕ್ಷ ರೂ. ವರೆಗೆ ಹೆಚ್ಚಿಸಬಹುದು. ಶೇ.80ರಷ್ಟು ಮನೆಗಳ ನಿರ್ಮಾಣದ ನಂತರ ಬಡಾವಣೆಗೆ ನೀರು ಸರಬರಾಜು, ವಿದ್ಯುತ್‌ ಪೂರೈಕೆ, ಚರಂಡಿ ಇತ್ಯಾದಿಗಳನ್ನು ಮಾಡುವ ಬದಲು ಶೇ.40 ಅಥವಾ 50ರಷ್ಟು ಮನೆಗಳ ನಿರ್ಮಾಣವಾದ ಕೂಡಲೇ ಒದಗಿಸುವುದು ಸೂಕ್ತ.

ವಸತಿ ನಿವೇಶನ, ಮನೆಗಳ ಸಮೀಕ್ಷೆ: ಡಾ.ಬಿ.ಆರ್‌.ಅಂಬೇಡ್ಕರ್‌ ಸೇರಿ ವಿವಿಧ ವಸತಿ ಯೋಜನೆಗಳಡಿ ಹಂಚಿಕೆಯಾಗಿ ಖಾಲಿ ಇರುವ ಕೆಲ ಮನೆ, ನಿವೇಶನಗಳನ್ನು ಫ‌ಲಾನುಭವಿಗಳಲ್ಲದವರು ಅತಿಕ್ರಮಿಸಿಕೊಂಡಿದ್ದಾರೆ. ಕೆಲವೆಡೆ ಮಾಲೀಕತ್ವ ಪಡೆಯುವ ಮುನ್ನ ಹಂಚಿಕೆದಾರರೇ ಬಾಡಿಗೆ ಇತ್ಯಾದಿ ರೂಪದಲ್ಲಿ ಕೊಟ್ಟಿರುವುದೂ ಇದೆ. ಗ್ರಾಪಂಗಳ ಮೂಲಕ ಗ್ರಾಮೀಣ ಪ್ರದೇಶದ ಮಾಹಿತಿ ಪಡೆದು, ನಗರ ಪ್ರದೇಶದಲ್ಲಿ ಏಜೆನ್ಸಿ ಮೂಲಕ ನಿವೇಶನ ಮತ್ತು ಮನೆಗಳ ಸಮೀಕ್ಷೆ ನಡೆಸಬೇಕು. ಅನರ್ಹರಿಗೆ ಹಂಚಿಕೆಯಾಗಿರುವ ನಿವೇಶನ, ಮನೆಗಳನ್ನು ರದ್ದುಪಡಿಸಬೇಕು. ಅರ್ಹರಿಗೆ ಮಂಜೂರು ಮಾಡಲು ವಿಶೇಷ ಅಭಿಯಾನ ನಡೆಸಬೇಕು.
ಅತಿಕ್ರಮಿಸಿಕೊಂಡವರಿಂದ ಹಿಂಪಡೆದು, ಕಾನೂನು ಕ್ರಮ ಜರುಗಿಸಬಹುದು.

“ಕುಟುಂಬ’ ಡೇಟಾಬೇಸ್‌ಗೆ ಅಪ್‌ಲೋಡ್‌ ಮಾಡಬೇಕು: ರಾಜೀವಗಾಂಧಿ ವಸತಿ ನಿಗಮವು ಪ್ರತಿ ಫ‌ಲಾನುಭವಿಯ ಆಧಾರ್‌ ಸಂಖ್ಯೆ ಪಡೆದು ಸರ್ಕಾರದ “ಕುಟುಂಬ’ ಡೇಟಾಬೇಸ್‌ಗೆ ಅಪ್‌ಲೋಡ್‌ ಮಾಡುತ್ತದೆ. ಆದರೆ, ಗೃಹ ಮಂಡಳಿಯಾಗಲೀ, ಕೊಳೆಗೇರಿ ಅಭಿವೃದ್ಧಿ ಮಂಡಳಿಯಾಗಲೀ ಈ ಕೆಲಸ ಮಾಡದಿರುವುದರಿಂದ ಒಬ್ಬರಿಗೇ ಎರಡು ಯೋಜನೆಗಳ ಫ‌ಲ ಸಿಗುವ ಅಪಾಯವಿದ್ದು, ಅನರ್ಹ ಹಂಚಿಕೆದಾರರಿಗೂ ಸೌಲಭ್ಯ ವಿತರಣೆ ಆಗುತ್ತದೆ. ಇದನ್ನು ಸರಿಪಡಿಸಲು ಪ್ರತಿ ನಿವೇಶನ ಮತ್ತು ಮನೆಯ ಹಂಚಿಕೆದಾರರ ಆಧಾರ್‌ ವಿಲೀನಗೊಳಿಸಬೇಕು. ಅದನ್ನು ಕುಟುಂಬ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಇ-ಖಾತಾ, ಇ-ಸ್ವತ್ತು, ಬಿಬಿಎಂಪಿ, ಬಿಡಿಎಗಳ ಖಾತಾ ಡೇಟಾಬೇಸ್‌ಗಳಿಗೂ ವಿಲೀನಗೊಳಿಸಬೇಕೆಂದು ಶಿಫಾರಸು ಮಾಡಿದೆ.

2.16 ಲಕ್ಷ ಕುಟುಂಬಗಳಿಗೆ ಸಿಕ್ಕೇ ಇಲ್ಲ ಹಕ್ಕುಪತ್ರ
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ (ಕೆಎಸ್‌ಡಿಬಿ)ಯು ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ಭೂಮಿಯಲ್ಲಿ 1,821 ಘೋಷಿತ ಕೊಳೆಗೇರಿಗಳನ್ನು ಗುರುತಿಸಿದ್ದು, ಇಲ್ಲಿನ 3.36 ಲಕ್ಷ ಕುಟುಂಬಗಳ ಪೈಕಿ 1.20 ಲಕ್ಷ ಕುಟುಂಬಗಳು ಮಾತ್ರ ಹಕ್ಕುಪತ್ರ ಪಡೆದಿವೆಯಾದರೂ ಇನ್ನೂ 2,16 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ, ಒಂದೆರಡು ವರ್ಷಗಳಲ್ಲಿ ಹಕ್ಕುಪತ್ರ ನೀಡಬೇಕೆಂದು ಶಿಫಾರಸು ಮಾಡಿದೆ.

ಮಂಡಳಿಯ ಜಮೀನು ಅತಿಕ್ರಮಿಸಿದವರಿಗೆ ಆ ಭೂಮಿಯ ಮಾರ್ಗಸೂಚಿ ಮೌಲ್ಯದ ಶೇಕಡಾವಾರು ದಂಡ ವಿಧಿಸಬಹುದು. ಅನಧಿಕೃತ ಸಾಗುವಳಿ ಮಾಡಿದರೆ 5 ಸಾವಿರ ರೂ.ಗಳಿಂದ 48 ಸಾವಿರ ರೂ.ವರೆಗೆ ದಂಡ, ನೋಟಿಸ್‌ ಅಥವಾ ನಿರ್ದೇಶನ ಉಲ್ಲಂ ಸಿದರೆ 36 ಸಾವಿರ ರೂ.ಗಳಿಂದ 72 ಸಾವಿರ ರೂ.ವರೆಗೆ ದಂಡ, ಅತಿಕ್ರಮ ತೆರವುಗೊಳಿಸುವ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ 35 ಸಾವಿರ ರೂ. ದಂಡ ವಿಧಿಸಲು ಶಿಫಾರಸು ಮಾಡಿದೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Chikkamagaluru: ಸಾವಿನಲ್ಲೂ ಸಾರ್ಥಕತೆ; ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

9

Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.