“ಅವರನ್ನು ಕಂಡ ಆ ಕ್ಷಣ ಕಳೆದು ಹೋದೆ’

ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಬಹುಮಾನ ಗೆದ್ದ ಉಡುಪಿಯ ಅನಾಮಯ

Team Udayavani, Dec 18, 2020, 6:08 AM IST

“ಅವರನ್ನು ಕಂಡ ಆ ಕ್ಷಣ ಕಳೆದು ಹೋದೆ’

ಉಡುಪಿ: “ಅವರನ್ನು ನೋಡುತ್ತಲೇ ಕಳೆದು ಹೋಗುವ ಅದೃಷ್ಟ ನನ್ನದಾಯಿತು. ಕೋಟ್ಯಧಿಪತಿಯಲ್ಲಿ ಭಾಗವಹಿಸಿದ ಖುಷಿಯು ಎಷ್ಟೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ರೋಮಾಂಚನ ಆದದ್ದು ಅವರನ್ನು ಎದುರಿಗೆ ಕಂಡಾಗ, ಮಾತನಾಡಿಸಿದಾಗ. ಅದು ನನ್ನ ಬದುಕಿನ ಅತ್ಯಮೂಲ್ಯ ಕ್ಷಣ’ ಎಂದು ಉದಯವಾಣಿಗೆ ವಿವರಿಸಿದ್ದು ಅಜ್ಜರಕಾಡಿನ ಅನಾಮಯ.

ಜನಪ್ರಿಯ ಕೌನ್‌ ಬನೇಗಾ ಕರೋಡ್‌ ಪತಿಯ (ಕೆಬಿಸಿ) ಹಾಟ್‌ ಸೀಟ್‌ನಲ್ಲಿ ಕುಳಿತು ಬಹುತೇಕ ಗುರಿಯತ್ತಿರ ಹೋಗಿ ಸಾಧನೆ ಮಾಡಿದ ಅನಾಮಯ ಉಡುಪಿಯ ವಿದ್ಯೋದಯ ಪಬ್ಲಿಕ್‌ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿ. ಯೋಗೇಶ್‌ ದಿವಾಕರ್‌ ಮುತ್ತು ಅನುರಾಧಾರ ಪುತ್ರ. ಅಕ್ಕ ಅದಿತಿ ಪಿಪಿಸಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.

ಅನಾಮಯ ಎರಡು ವರ್ಷಗಳಿಂದ ಬಿಡದೇ ಸೂಪರ್‌ ಸ್ಟಾರ್‌ ಅಮಿತಾಬ್‌ ಬಚ್ಚನ್‌ ಅವರ ಕೆಬಿಸಿ ನೋಡುತ್ತಿದ್ದ. ಆ ಮೂಲಕ ಅಲ್ಲಿ ಕೇಳಲಾಗುವ ಪ್ರಶ್ನೆಗಳ ಮಾಹಿತಿ ಸಂಗ್ರಹಿಸುವುದನ್ನೂ ಮಾಡುತ್ತಿದ್ದ. ಆ ಹವ್ಯಾಸವೇ ಹಾಟ್‌ ಸೀಟ್‌ನಲ್ಲಿ ಕುಳ್ಳಿರಿಸಿತು ಎಂದರೆ ನಂಬಲೇಬೇಕು. ಅನಾಮಯ ಭಾಗವಹಿಸಿದ್ದು ಮಕ್ಕಳ ಸಂಚಿಕೆಯಲ್ಲಿ. ಗೆದ್ದ ಮೊತ್ತ 50 ಲಕ್ಷ ರೂ. ಅವರು ಉದಯವಾಣಿಯೊಂದಿಗೆ ಹಂಚಿಕೊಂಡ ಅನುಭವ ಇಲ್ಲಿದೆ.

ಅಮಿತಾಬ್‌ ಬಚ್ಚನ್‌ ಯಾರು ಅಂತ ಗೊತ್ತಿತ್ತಾ?
ಅವರ “ಪೀಕು’ ಚಿತ್ರವನ್ನು ನೋಡಿದ್ದೆ. ಅವರನ್ನು ನೇರವಾಗಿ ನೋಡುವ ಅವಕಾಶ ಸಿಗುತ್ತದೆ ಎಂದುಕೊಂಡಿರಲಿಲ್ಲ. ಆದರೆ ಅದು ಕೆಬಿಸಿ ಮೂಲಕ ಸಿಕ್ಕಿತು. ಮೊದಲ ಬಾರಿಗೆ ಮುಖಾಮುಖೀಯಾ ದಾಗ ರೋಮಾಂಚನವಾಯಿತು. ಅವರನ್ನು ನೋಡಿದ ಒಂದು ಕ್ಷಣ ಕಳೆದೇ ಹೋದೆ.

ಕೆಬಿಸಿಯಲ್ಲಿ ಭಾಗವಹಿಸಬೇಕು ಎಂಬ ಆಸೆ ಇತ್ತಾ?
ಎರಡು ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ನೋಡುತ್ತಿದ್ದಾಗ ಅವಕಾಶ ಸಿಕ್ಕರೆ ಬಿಡಬಾರದು ಎಂದು ಅನ್ನಿಸಿದ್ದು ಸತ್ಯ. ಆ ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗಳಿಗೆ ಮನೆಯಲ್ಲಿ ಕುಳಿತು ಉತ್ತರಿಸುತ್ತಿದ್ದೆ. ಇದು ನನ್ನ ಜ್ಞಾನವನ್ನು ಹೆಚ್ಚಿಸಿತಲ್ಲದೇ ಶಾಲೆ ಹಾಗೂ ಇತರ ಕ್ವಿಜ್‌ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯಲು ಪೂರಕವಾಯಿತು. ಆದರೆ ಅಕ್ಟೋಬರ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಆಸೆ ಈಡೇರಿತು.

ಶಾಲೆ ಕ್ವಿಜ್‌ಗಿಂತ ಈ ಕಾರ್ಯಕ್ರಮ ಹೇಗೆ ವ್ಯತ್ಯಾಸ?
ಎರಡರಲ್ಲೂ ಸಾಮಾನ್ಯ ಜಾನ ಕುರಿತಾದ ಪ್ರಶ್ನೆಗಳೇ. ಆದರೆ ಅದನ್ನು ನಡೆಸಿಕೊಡುವ ವ್ಯಕ್ತಿ ಗಳು ಭಿನ್ನ. ಜತೆಗೆ ಕ್ವಿಜ್‌ ಮಾಸ್ಟರ್‌ ಕೇಳುವ ಪ್ರಶ್ನೆಗೆ ಸಮಯ ಮತ್ತು ಒತ್ತಡ ಕಡಿಮೆ ಇರುತ್ತದೆ. ಆದರೆ ಇದರಲ್ಲಿ ಹಾಟ್‌ ಸೀಟ್‌ನಲ್ಲಿ ಕುಳಿತು ಉತ್ತರಿಸುವಾಗ ಬಹಳ ಎಚ್ಚರಿಕೆ ವಹಿಸಬೇಕು.

“ಬಿಗ್‌’ ಬಿ ಹಾಗೂ ನಿಮ್ಮ ನಡುವಿನ ಮಾತುಕತೆ?
ಅವರೊಂದಿಗಿನ ಮಾತುಕತೆಯಲ್ಲಿ ಶೇ. 90ರಷ್ಟು ಮಾತುಗಳು ನನ್ನ ಆಸಕ್ತಿಯಾದ ಕಾರುಗಳ ಮೇಲೆಯೇ ಇರುತ್ತಿತ್ತು. ಇದರಿಂದಾಗಿ ನನಗೆ ಒತ್ತಡ ಕಡಿಮೆ ಆಗಿ ಉತ್ತರ ನೀಡಲು ಅನುಕೂಲವಾಯಿತು.

ಪ್ರಶ್ನೆ ಹಾಗೂ ಲೈಫ್ ಲೈನ್‌ ಹೇಗೆ ಬಳಸಿದಿರಿ?
40 ಸಾವಿರ ರೂ. ಪ್ರಶ್ನೆಯಿಂದ ಲೈಫ್ಲೈನ್‌ ಬಳಸಲು ಪ್ರಾರಂಭಿಸಿದೆ. 4 ಲೈಫ್ಲೈನ್‌ಗಳಲ್ಲಿ ಎರಡರಿಂದ ಸರಿ ಉತ್ತರ ನೀಡಿದೆ. 6.45 ಲ.ರೂ. ಮೊತ್ತದ ಪ್ರಶ್ನೆಗೆ ಉತ್ತರ ಗೊತ್ತಿತ್ತು. ಆದರೂ ಗೊಂದಲದ ಕಾರಣ ಲೈಫ್ಲೈನ್‌ ಬಳಸಿದೆ. ಅನಂತರ 1 ಕೋ.ರೂ. ಪ್ರಶ್ನೆ ಸಂದರ್ಭದಲ್ಲಿ ನನ್ನಲ್ಲಿ ಒಂದು 50:50 ಲೈಫ್ಲೈನ್‌ ಇತ್ತು. ಆದರೆ ನನಗೆ ಉತ್ತರ ಗೊತ್ತಿರಲಿಲ್ಲ. ಹಾಗಾಗಿ ರಿಸ್ಕ್ ಬೇಡ ಎಂದು ಆಟದಿಂದ ಹೊರಗೆ ಬಂದೆ.

ಮುಂದಿನ ಕನಸು ಏನು?
ಚೆನ್ನಾಗಿ ಓದಿಕೊಂಡು ಕಾರು ಕಂಪೆನಿ ತೆಗೆಯ ಬೇಕು ಎನ್ನುವ ಆಸೆ ಇದೆ. ಅದರಲ್ಲಿ ಹೈಡ್ರೋಜನ್‌ ಕಾರುಗಳನ್ನು ರೂಪಿಸಬೇಕೆಂದುಕೊಂಡಿರುವೆ. ಪ್ರಸ್ತುತ ಕಲಿಕೆಯ ಜತೆಗೆ ಕ್ರೀಡೆ, ಸಂಗೀತ-ವಾದ್ಯ, ಸೇರಿದಂತೆ ಇತರ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದೇನೆ.

ಈ ವಿದ್ಯಾರ್ಥಿ ವಿಶೇಷ ಸಂಚಿಕೆಗೆ ಆನ್‌ಲೈನ್‌ ಲರ್ನಿಂಗ್‌ ಆ್ಯಪ್‌ವೊಂದು 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಅ. 5ರಿಂದ 25 ರವರೆಗೆ ಆನ್‌ಲೈನ್‌ ಕ್ವಿಜ್‌ ಸ್ಪರ್ಧೆ ಆಯೋಜಿಸಿತ್ತು. ದೇಶಾದ್ಯಂತ 1.5 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಾರಂಭಿಕ ಹಂತದಲ್ಲಿ 1,000 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅನಂತರದ ಹಂತದಲ್ಲಿ 200 ಮಂದಿಗೆ ಅವಕಾಶ ಸಿಕ್ಕಿತು. ಅಂತಿಮವಾಗಿ ಆಯ್ಕೆಯಾದ ಒಟ್ಟು 8 ವಿದ್ಯಾರ್ಥಿಗಳಲ್ಲಿ ಅನಾಮಯನೂ ಒಬ್ಬ. ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿ. ಈಗ 4 ವಿದ್ಯಾರ್ಥಿಗಳ ಪೈಕಿ ಹೆಚ್ಚು ಪ್ರಶ್ನೆಗೆ ಉತ್ತರಿಸಿ ಮೊತ್ತ ಗಳಿಸಿದವನೂ ಇವನೇ.

ಅನಾಮಯಗೆ ಎಲ್ಲ ಕ್ಷೇತ್ರದಲ್ಲಿ ಆಸಕ್ತಿ. ಆತನ ಇಷ್ಟದಂತೆ ನಾವೆಲ್ಲರೂ ಅವನಿಗೆ ಪ್ರೋತ್ಸಾಹ ನೀಡು ತ್ತಿದ್ದೇವೆ. ಕಲಿಕೆ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮುಂದಿದ್ದಾನೆ. ಕೆಬಿಸಿಯಲ್ಲಿ ಒಳ್ಳೆಯ ರೀತಿಯಲ್ಲಿ ಉತ್ತರಿಸುತ್ತಾನೆ ಎಂಬ ಆತ್ಮವಿಶ್ವಾಸ ಇತ್ತು. ನಮ್ಮ ನಿರೀಕ್ಷೆ ಮೀರಿ ಉತ್ತರಿಸಿದ್ದಾನೆ.
– ಯೋಗೇಶ್‌ ದಿವಾಕರ್‌, ಅನುರಾಧಾ, ಅನಾಮಯನ ಹೆತ್ತವರು

ಟಾಪ್ ನ್ಯೂಸ್

R.Ashok

Assembly Electionನಲ್ಲಿ ಮೈತ್ರಿಗೆ ದೇವೇಗೌಡರು ಒಪ್ಪಲಿಲ್ಲ: ಅಶೋಕ್‌

Sanganna-Kardi

BJPಯಲ್ಲಿ ಆರೆಸ್ಸೆಸ್‌ ಮಾತು ನಡೆಯಲ್ಲ: ಸಂಗಣ್ಣ ಕರಡಿ

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Kharajola

MUDA Scam; ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಕಾರಜೋಳ

Dravid–gavskar

Indian Cricket; ರಾಹುಲ್‌ ದ್ರಾವಿಡ್‌ಗೆ ಭಾರತ ರತ್ನ ಕೊಡಿ: ಗವಾಸ್ಕರ್‌

rain 21

Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R.Ashok

Assembly Electionನಲ್ಲಿ ಮೈತ್ರಿಗೆ ದೇವೇಗೌಡರು ಒಪ್ಪಲಿಲ್ಲ: ಅಶೋಕ್‌

Sanganna-Kardi

BJPಯಲ್ಲಿ ಆರೆಸ್ಸೆಸ್‌ ಮಾತು ನಡೆಯಲ್ಲ: ಸಂಗಣ್ಣ ಕರಡಿ

renukaacharya

Lok Sabha Elections; ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ: ರೇಣುಕಾಚಾರ್ಯ

ಪ್ರಹ್ಲಾದ ಜೋಶಿ

Hubli; ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ: ಪ್ರಹ್ಲಾದ ಜೋಶಿ

CM-Police

Karnataka Police: ಡ್ರಗ್ಸ್‌, ಜೂಜು ಮಟ್ಟಹಾಕಿ: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

R.Ashok

Assembly Electionನಲ್ಲಿ ಮೈತ್ರಿಗೆ ದೇವೇಗೌಡರು ಒಪ್ಪಲಿಲ್ಲ: ಅಶೋಕ್‌

Sanganna-Kardi

BJPಯಲ್ಲಿ ಆರೆಸ್ಸೆಸ್‌ ಮಾತು ನಡೆಯಲ್ಲ: ಸಂಗಣ್ಣ ಕರಡಿ

Karadi sanganna

Mining; ಸಂಡೂರ ಪ್ರದೇಶದಲ್ಲಿ ಗಣಿಗಾರಿಕೆಗೆ ನಮ್ಮ ವಿರೋಧವಿದೆ: ಕರಡಿ ಸಂಗಣ್ಣ

Yellapur ಒಂದೇ ಮೊಗ್ಗಲ್ಲಿ ಹೂವೆರಡು; ಇದು ಪ್ರಕೃತಿಯ ಸೊಬಗು

Yellapur ಒಂದೇ ಮೊಗ್ಗಲ್ಲಿ ಹೂವೆರಡು; ಇದು ಪ್ರಕೃತಿಯ ಸೊಬಗು

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.