Eshwara Khandre: “ಕೆಐಒಸಿಎಲ್ನಿಂದ 1334 ಹೆ. ಭೂಮಿ, 1,349 ಕೋಟಿ ದಂಡ ವಸೂಲಿಗೆ ಕ್ರಮ’
Team Udayavani, Oct 16, 2024, 11:48 PM IST
ಬೆಂಗಳೂರು: ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಒಸಿಎಲ್)ಯಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ವಸೂಲಿ ಮಾಡಲು ಶೀಘ್ರವೇ ಕ್ರಮ ವಹಿಸುತ್ತೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಂಪೆನಿ 192 ಕೋಟಿ ರೂ. ಕೊಟ್ಟಿದೆಯಾದರೂ ಗಣಿ ಚಟುವಟಿಕೆಗೆ ರಾಜ್ಯ ಸರಕಾರ ಅಡ್ಡಿಪಡಿಸುತ್ತಿದ್ದು 300 ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಆದರೆ ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಗಣಿ ಚಟುವಟಿಕೆ ನಡೆಸಿರುವ ಈ ಸಂಸ್ಥೆ, ಅನುಮತಿ ಇಲ್ಲದೆ ಲಕ್ಯಾ ಜಲಾಶಯ ನಿರ್ಮಿಸಿದ್ದೂ ಅಲ್ಲದೆ ಎತ್ತರಿಸುವ ಮೂಲಕ 150 ದಶಲಕ್ಷ ಟನ್ (ಶೇ.72) ಹೂಳು ತುಂಬಿಕೊಂಡಿದೆ. ಅದಿರು ಸಾಗಣೆಗೆ ದಾರಿ ಮಾಡಿಕೊಂಡಿದ್ದಾರೆ.
ಎಲ್ಲ ಸೇರಿ ಒಟ್ಟು 350 ಹಕ್ಟೇರ್ ಅರಣ್ಯ ನಾಶ ಮಾಡಿದ್ದಾರೆ. ಇದಕ್ಕೆ ಪರಿಹಾರ ಹಾಗೂ ದಂಡದ ರೂಪದಲ್ಲಿ ಅವರೇ ನಮಗೆ 1,349 ಕೋಟಿ ರೂ.ಗಳನ್ನು ಕೊಡಬೇಕಿದೆ ಎಂದು ಹೇಳಿದರು.
ಅರಣ್ಯ ನಾಶ ಸಂಬಂಧ ನೋಟಿಸ್ ಕೊಟ್ಟರೆ, ಸದ್ಯಕ್ಕೆ ನಷ್ಟದಲ್ಲಿದ್ದೇವೆ, ಗಣಿ ಚಟುವಟಿಕೆ ನಡೆಸಲು ಅನುಮತಿಸಿದರೆ ಅದರಿಂದ ಬರುವ ಆದಾಯದಲ್ಲಿ ಬಾಕಿ ಕೊಡುವುದಾಗಿ ರಾಜಿ-ಸಂಧಾನಕ್ಕೆ ಆಹ್ವಾನಿಸುತ್ತಾರೆ ಎಂದು ಹೇಳಿದರು.
ಶರಾವತಿಯಿಂದ ನೀರು ತರುವ ಯೋಜನೆ ಇರಬಹುದು, ಎತ್ತಿನಹೊಳೆ ಕಾಮಗಾರಿ ಸಂಬಂಧ ಎನ್ಜಿಟಿ ಕೊಟ್ಟಿರುವ ನೋಟಿಸ್ನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪಶ್ಚಿಮಘಟ್ಟ ಪರಿಸರ ಸೂಕ್ಷ್ಮಪ್ರದೇಶದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿ ಸಂಬಂಧ ಅಧ್ಯಯನ ವರದಿಯನ್ನೂ ಪಡೆದುಕೊಳ್ಳುತ್ತೇವೆ.
– ಈಶ್ವರ್ ಖಂಡ್ರೆ, ಅರಣ್ಯ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KEA: ಯುಜಿನೀಟ್; ಮಾಪ್ಅಪ್ ಸುತ್ತಿನ ಸೀಟು ಹಂಚಿಕೆ ಪ್ರಕಟ
Rain: ಹಿಂಗಾರು ಮಳೆಯಬ್ಬರಕ್ಕೆ 18 ಜಿಲ್ಲೆಗಳು ಕಂಗಾಲು; ಕೆಲವು ಕಡೆ ಭಾರೀ ಹಾನಿ
KSRTC: ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವವಿಲ್ಲ: ಸಚಿವ ರಾಮಲಿಂಗಾರೆಡ್ಡಿ
G Parameshwara: ಹರಿಪ್ರಸಾದ್ ಹೇಳಿದ್ದಾರೆಂದು ಡಿ.ಜೆ.ಹಳ್ಳಿ ಪ್ರಕರಣ ವಾಪಸ್ ಅಸಾಧ್ಯ
Karnataka Rajyotsava: ಧ್ವಜಾರೋಹಣಕ್ಕೆ ಉಸ್ತುವಾರಿ ಸಚಿವರ ನಿಯೋಜನೆ
MUST WATCH
ಹೊಸ ಸೇರ್ಪಡೆ
Udupi: ಪಠ್ಯಕ್ರಮದ ಮಾರ್ಪಾಡಿನಿಂದ ಶಿಕ್ಷಣ ವ್ಯವಸ್ಥೆ ಬದಲಾಗಲ್ಲ: ಕುಲಪತಿ ಡಾ.ಧರ್ಮ
Udupi: ಕನ್ನಡ ರಾಜ್ಯೋತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
Udupi: ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನ: ಕಾರ್ಯಾಲಯ ಉದ್ಘಾಟನೆ
Mangaluru: ಕೇಂದ್ರದ ತೆರಿಗೆ ವಿಷಯದಲ್ಲಿ ಬಿಜೆಪಿ ಮೌನ: ಯು.ಟಿ. ಫರ್ಝಾನ
Udupi: “ಸಾಗರ್ ಕವಚ್’ ಅಣಕು ಕಾರ್ಯಾಚರಣೆ; 21 ಮಂದಿ ಬಂಧನ, 2 ಬೋಟ್, ವಾಹನಗಳು ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.