![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 7, 2024, 3:44 PM IST
ಕೊಪ್ಪಳ: ಗೃಹ ಸಚಿವರು ತನಿಖೆ ಮಾಡುತ್ತಿದ್ದೇವೆ ಎಂದಿದ್ದಾರೆ. ವರದಿ ಬಂದ ಬಳಿಕ ಆರೋಪಿ ಯಾರೇ ಇರಲಿ ಅವರನ್ನು ಬಂಧಿಸುವೆವು ಎಂದಿದ್ದಾರೆ ಎಂದು ಸೋಮನಾಳದಲ್ಲಿ ಮೃತ ಪಿಎಸ್ಐ ಪರಶುರಾಮ ಅವರ ಸಹೋದರ ಹನುಮಂತಪ್ಪ ಹೇಳಿದ್ದಾರೆ.
ಸಿಓಡಿಯಿಂದ ನ್ಯಾಯ ಸಿಗಲಿಲ್ಲ ಎಂದರೆ ಮುಂದೆ ವಿಚಾರ ಮಾಡಿ ಎಂದಿದ್ದಾರೆ. ನಾವು ನಮ್ಮ ಕುಟುಂಬಕ್ಕೆ ನ್ಯಾಯ ಬೇಕು ಎಂದು ಒತ್ತಾಯ ಮಾಡಿದ್ದೇವೆ. ಸಿಓಡಿ ತನಿಖೆಯಿಂದ ನ್ಯಾಯ ಕೊಡಿಸುವೆವು ಎಂದಿದ್ದಾರೆ ಎಂದರು.
ನಮಗೆ ನ್ಯಾಯ ಮುಖ್ಯ. ನಮಗೆ 2 ಕೋಟಿ ಪರಿಹಾರ ಕೊಡಿ ಎಂದಿದ್ದೆವು. ನಮ್ಮ ಕುಟುಂಬ ಆರ್ಥಿಕ ಸ್ಥಿತಿ ಸರಿಯಿಲ್ಲ. ಅವರು 50 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ ಎಂದ ಅವರು ನಮ್ಮ ಜೊತೆ ಮಾತನಾಡುವ ವೇಳೆ ಪರಿಹಾರದ ವಿಚಾರ ಮಾತನಾಡಿಲ್ಲ ಎಂದು ಹೇಳಿದರು.
ಮಾಧ್ಯಮದ ಮುಂದೆ 50 ಲಕ್ಷ ಪರಿಹಾರ ಕೊಡುವ ಹೇಳಿಕೆ ನೀಡಿದ್ದಾರೆ. ನಮಗೆ ಆರೋಪಿಗಳು ಬಂಧನ ಆಗಬೇಕು ಎಂದಿದ್ದೇವೆ. ಪರಿಹಾರದ ವಿಚಾರ ನಾವು ಗೃಹ ಸಚಿವರ ಜೊತೆಗೆ ಮಾತನಾಡುವೆವು. ಅವರು ಹುದ್ದೆ ಕೊಡುವ ಭರವಸೆ ನೀಡಿದ್ದಾರೆ. ಗೃಹ ಸಚಿವರು ನಮ್ಮ ಮನೆಗೆ ಭೇಟಿ ನೀಡಿದ ಸಮಾಧಾನಕ್ಕಿಂತ ನಮಗೆ ನ್ಯಾಯ ಬೇಕು ಎಂದಿದ್ದೇವೆ ಎಂದು ಹೇಳಿದರು.
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.