Krishna Byre Gowda; 17 ಲಕ್ಷ ರೈತ ಕುಟುಂಬಕ್ಕೆ ಜೀವನೋಪಾಯ ಪರಿಹಾರ

ಸಣ್ಣ, ಅತಿ ಸಣ್ಣ ರೈತರಿಗೆ ತಲಾ 2,800-3,000 ರೂ. ವಿತರಣೆ

Team Udayavani, Jun 11, 2024, 12:40 AM IST

Krishna Byre Gowda; 17 ಲಕ್ಷ ರೈತ ಕುಟುಂಬಕ್ಕೆ ಜೀವನೋಪಾಯ ಪರಿಹಾರ

ಬೆಂಗಳೂರು: ರಾಷ್ಟ್ರೀಯ ವಿಪತ್ತು ನಿಧಿಯಿಂದ ಜೀವನೋಪಾಯ ಪರಿಹಾರ ರೂಪದಲ್ಲಿ ಬರದಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ 17.09 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 2,800- 3,000 ರೂ.ನಂತೆ ವಿತರಿಸಲು ಸಂಪುಟ ಉಪ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿ ಪರಾಮರ್ಶಿಸಿ ನಿಭಾಯಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ರಚಿಸಲಾಗಿರುವ ಸಂಪುಟ ಉಪ ಸಮಿತಿ ಸೋಮವಾರ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ.

ಆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣಬೈರೇಗೌಡರು, ರಾಜ್ಯದ 17.09 ಲಕ್ಷ ಸಣ್ಣ ಅತಿ ಸಣ್ಣ ರೈತರಿಗೆ ಜೀವನೋಪಾಯಕ್ಕಾಗಿ ನಷ್ಟ ಪರಿಹಾರವಾಗಿ ತಲಾ 3 ಸಾ.ರೂ. ನೀಡಲು ನಿರ್ಧರಿಸಲಾಗಿದೆ. ಫ‌ಲಾನುಭವಿಗಳ ಪಟ್ಟಿ ಸಿದ್ಧವಾಗಿದ್ದು, ಒಂದು ವಾರದೊಳಗೆ ರೈತರ ಖಾತೆಗೆ ಜಮೆ ಆಗಲಿದೆ ಎಂದರು.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯೊಂದಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯನ್ನೂ ಸೇರಿಸಿ ನೀಡಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ 3,454 ಕೋಟಿ ರೂ.ಬಂದಿತ್ತು. ಇದರಲ್ಲಿ 2,451 ಕೋಟಿ ರೂ.ವನ್ನು 27.5. ಲಕ್ಷ ರೈತರಿಗೆ ಮೇ ಮೊದಲ ವಾರದಲ್ಲಿ ವಿತರಿಸಲಾಗಿದೆ. ಉಳಿದ ಹಣವನ್ನು ಇನ್ನಷ್ಟು ರೈತರಿಗೆ ಕೊಡಲು ಸಂಪುಟ ಸಮಿತಿಯಲ್ಲಿ ತೀರ್ಮಾನ ಮಾಡಬೇಕಾಗಿತ್ತು. ಈಗ ಚರ್ಚೆ ನಡೆಸಿ ನಿರ್ಣಯಿಸಲಾಗಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಬೆಳೆ ನಷ್ಟ ಪರಿಹಾರ ಸಿಗದ ಮಳೆ ಆಶ್ರಿತ ರೈತರು, ನಾಲೆ ಕೊನೆಯ ಭಾಗದ ರೈತರಿಗೆ ಪರಿಹಾರ ಕೊಡಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಗಳ ವರದಿ ಆಧಾರದಲ್ಲಿ ಪರಿಹಾರ ನೀಡಲಾಗುತ್ತದೆ. ಈ ತೀರ್ಮಾನದಿಂದ 7 ಲಕ್ಷ ರೈತರಿಗೆ ಲಾಭವಾಗಲಿದೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅತಿ ಗರಿಷ್ಠ ಸಂಖ್ಯೆಯಲ್ಲಿ ರೈತರು ಬರ ಪರಿಹಾರ ಪಡೆದುಕೊಂಡಿದ್ದಾರೆ. ಈ ಹಿಂದೆ 25 ಲಕ್ಷ ರೈತರಿಗೆ ಗರಿಷ್ಠ ಅನುಕೂಲ ಆಗಿತ್ತು. ಈ ಬಾರಿ 40 ಲಕ್ಷಕ್ಕಿಂತ ಹೆಚ್ಚು ರೈತರಿಗೆ ಪರಿಹಾರ ಸಿಗಲಿದೆ ಎಂದರು. ಸಹಕಾರ ಸಚಿವ ಎನ್‌.ರಾಜಣ್ಣ ಉಪಸ್ಥಿತರಿದ್ದರು.

ವಾಡಿಕೆಗಿಂತ ಶೇ.31 ಹೆಚ್ಚು ಮಳೆ
ಮೇ 31ರ ವರೆಗೆ ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ 115 ಮಿ.ಮೀ. ವಾಡಿಕೆ ಮಳೆ ಆಗುತ್ತದೆ. ಈ ಬಾರಿ 151 ಮಿ.ಮೀ. ಮಳೆಯಾಗಿದೆ. ಇದು ವಾಡಿಕೆಗಿಂತ ಶೇ.31ರಷ್ಟು ಹೆಚ್ಚು ಎಂದು ಕೃಷ್ಣ ಬೈರೇಗೌಡರು ಹೇಳಿದರು. ಮುಂಗಾರು ಜೂನ್‌ 2ಕ್ಕೆ ಪ್ರವೇಶಿಸಿದ್ದು, ಸೋಮವಾರ ರಾಜ್ಯದ ಸಂಪೂರ್ಣ ಭಾಗಕ್ಕೆ ವಿಸ್ತರಿಸಿದೆ. ಹತ್ತು ದಿನಗಳ ಅವಧಿಯಲ್ಲಿ ವಾಡಿಕೆ ಪ್ರಕಾರ 51 ಮಿ.ಮೀ. ಮಳೆ ಆಗಬೇಕಾಗಿತ್ತು, ಈಗಾಗಲೇ 91 ಮಿ.ಮೀ. ಮಳೆಯಾಗಿದ್ದು, ಅದು ವಾಡಿಕೆಗಿಂತ ಶೇ.78 ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಹೋದ ವರ್ಷ ಶೇ.8 ಮಳೆಯಾಗಿತ್ತು ಎಂದರು.

 

ಟಾಪ್ ನ್ಯೂಸ್

Mangaluru ಅಡ್ಯಾರ್‌ನಲ್ಲೂ ಕುಸಿದ ಮನೆಯ ಆವರಣ ಗೋಡೆ

Mangaluru ಅಡ್ಯಾರ್‌ನಲ್ಲೂ ಕುಸಿದ ಮನೆಯ ಆವರಣ ಗೋಡೆ

Bantwal: ಮೇಲ್ಪತ್ತರ ಶಾಲಾ ಬಾವಿ ಕುಸಿತ

Bantwal: ಮೇಲ್ಪತ್ತರ ಶಾಲಾ ಬಾವಿ ಕುಸಿತ

Sensitive Area ವಿಪತ್ತು ನಿರ್ವಹಣೆ ಕುರಿತು ಕೃಷ್ಣಬೈರೇಗೌಡ ಕಡ್ಡಾಯ ಸೂಚನೆ

Sensitive Area ವಿಪತ್ತು ನಿರ್ವಹಣೆ ಕುರಿತು ಕೃಷ್ಣಬೈರೇಗೌಡ ಕಡ್ಡಾಯ ಸೂಚನೆ

krishna-byre-gowda

Krishna Byre Gowda ಮಳೆಗಾಲದ ದುರಂತ ತಡೆಯಲು ಸರಕಾರ ಚಿಂತನೆ

Heavy Rain ಮುನ್ನೆಚ್ಚರಿಕೆ ಕ್ರಮಕ್ಕೆ ಸಂಸದ ಕ್ಯಾ| ಚೌಟ ಸೂಚನೆ

Heavy Rain ಮುನ್ನೆಚ್ಚರಿಕೆ ಕ್ರಮಕ್ಕೆ ಸಂಸದ ಕ್ಯಾ| ಚೌಟ ಸೂಚನೆ

Subrahmanya: ಯುವಕನನ್ನು ಎಳೆದಾಡಿದ ದೇಗುಲದ ಆನೆ

Subrahmanya: ಯುವಕನನ್ನು ಎಳೆದಾಡಿದ ದೇಗುಲದ ಆನೆ

Udupi ಮನೆಯಲ್ಲಿದ್ದ ಚಿನ್ನಾಭರಣ ನಾಪತ್ತೆ: ದೂರು ದಾಖಲು

Udupi ಮನೆಯಲ್ಲಿದ್ದ ಚಿನ್ನಾಭರಣ ನಾಪತ್ತೆ: ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮಗೆ ನ್ಯಾಯ ಸಿಗುವ ಭರವಸೆಯಿದೆ.. ದರ್ಶನ್ ಬಗ್ಗೆ ಮೌನ ಮುರಿದ ಪತ್ನಿ ವಿಜಯಲಕ್ಷ್ಮೀ

ನಮಗೆ ನ್ಯಾಯ ಸಿಗುವ ಭರವಸೆಯಿದೆ.. ದರ್ಶನ್ ಬಗ್ಗೆ ಮೌನ ಮುರಿದ ಪತ್ನಿ ವಿಜಯಲಕ್ಷ್ಮೀ

ISRO ಅಧ್ಯಕ್ಷರಿಗೆ ಧಾರವಾಡ ಕೃಷಿ ವಿವಿ ಗೌರವ ಡಾಕ್ಟರೇಟ್

ISRO ಅಧ್ಯಕ್ಷರಿಗೆ ಧಾರವಾಡ ಕೃಷಿ ವಿವಿ ಗೌರವ ಡಾಕ್ಟರೇಟ್

Hunasur: ಪತ್ನಿ ಮನೆಗೆ ಹೋಗಿ ಹಿಂತಿರುಗುವ ವೇಳೆ ರಸ್ತೆ ಅಪಘಾತ… ಪತಿ ಮೃತ್ಯು

Hunasur: ಪತ್ನಿ ಮನೆಗೆ ಹೋಗಿ ಹಿಂತಿರುಗುವ ವೇಳೆ ರಸ್ತೆ ಅಪಘಾತ… ಪತಿ ಮೃತ್ಯು

Kalaburagi: ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ ತಡೆಗೆ ಮಹಿಳಾ ಅಯೋಗದ ಸೆಲ್: ಡಾ|ನಾಗಲಕ್ಷ್ಮಿ

Kalaburagi: ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ ತಡೆಗೆ ಮಹಿಳಾ ಅಯೋಗದ ಸೆಲ್: ಡಾ।ನಾಗಲಕ್ಷ್ಮಿ

Prajwal Revanna ಗೆ ಮತ್ತೆ ಜೈಲು… ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ

Prajwal Revanna ಗೆ ಜೈಲೇ ಗತಿ… ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

Mangaluru ಅಡ್ಯಾರ್‌ನಲ್ಲೂ ಕುಸಿದ ಮನೆಯ ಆವರಣ ಗೋಡೆ

Mangaluru ಅಡ್ಯಾರ್‌ನಲ್ಲೂ ಕುಸಿದ ಮನೆಯ ಆವರಣ ಗೋಡೆ

Bantwal: ಮೇಲ್ಪತ್ತರ ಶಾಲಾ ಬಾವಿ ಕುಸಿತ

Bantwal: ಮೇಲ್ಪತ್ತರ ಶಾಲಾ ಬಾವಿ ಕುಸಿತ

Sensitive Area ವಿಪತ್ತು ನಿರ್ವಹಣೆ ಕುರಿತು ಕೃಷ್ಣಬೈರೇಗೌಡ ಕಡ್ಡಾಯ ಸೂಚನೆ

Sensitive Area ವಿಪತ್ತು ನಿರ್ವಹಣೆ ಕುರಿತು ಕೃಷ್ಣಬೈರೇಗೌಡ ಕಡ್ಡಾಯ ಸೂಚನೆ

krishna-byre-gowda

Krishna Byre Gowda ಮಳೆಗಾಲದ ದುರಂತ ತಡೆಯಲು ಸರಕಾರ ಚಿಂತನೆ

Heavy Rain ಮುನ್ನೆಚ್ಚರಿಕೆ ಕ್ರಮಕ್ಕೆ ಸಂಸದ ಕ್ಯಾ| ಚೌಟ ಸೂಚನೆ

Heavy Rain ಮುನ್ನೆಚ್ಚರಿಕೆ ಕ್ರಮಕ್ಕೆ ಸಂಸದ ಕ್ಯಾ| ಚೌಟ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.