ಕಲೆಕ್ಷನ್ ಬಿಟ್ಟು ನನ್ನ ಬಗೆಗಿನ ತೀರ್ಪು ಓದಲಿ: ಪರಂಗೆ ಯತ್ನಾಳ್ ತಿರುಗೇಟು
ನಿಷ್ಪಕ್ಷ ತನಿಖೆಯಾದರೆ ನನಗಿಂತ ಮೊದಲೇ ಅವರ ಬಂಧನ
Team Udayavani, Oct 19, 2024, 12:50 AM IST
ಬೆಂಗಳೂರು: ಬರೀ ಕಲೆಕ್ಷನ್ ಮಾಡುವುದನ್ನು ಬಿಟ್ಟು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಅವರು ನನ್ನ ಬಗ್ಗೆ ಕೋರ್ಟ್ ಏನು ತೀರ್ಪು ನೀಡಿದೆ ಎಂಬುದನ್ನು ಓದಲಿ ಎಂದು ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದರು.
ಕೋರ್ಟ್ ಆದೇಶಿಸಿದರೆ ಬಸನಗೌಡ ಯತ್ನಾಳ್ ಅವರನ್ನು ಬಂಧಿಸಲಾಗುವುದು ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಈಗಾಗಲೇ ಹೈಕೋರ್ಟ್ನಲ್ಲಿ ನನ್ನ ಪ್ರಕರಣ ರದ್ದಾಗಿದೆ. ಈ ಬಗ್ಗೆ ಪರಮೇಶ್ವರ್ ಕಣ್ಣುಬಿrಟು ಓದಲಿ ಎಂದರು. ಪೊಲೀಸರು ಅವರ ಮೇಲಿರುವ ಹಗರಣಗಳ ಬಗ್ಗೆ ನಿಷ್ಪಕ್ಷ ತನಿಖೆ ನಡೆಸಿದರೆ ಅವರು ನನಗಿಂತಲೂ ಮೊದಲೇ ಬಂಧನಕ್ಕೊಳಗಾಗಲಿದ್ದಾರೆ ಎಂದು ಕುಟುಕಿದರು.
ಪಂಚಮಸಾಲಿ ಲಿಂಗಾಯತ ಸಮುದಾಯದಕ್ಕೆ 2ಎ ಮೀಸಲಾತಿ ವಿಚಾರದಲ್ಲಿ ಹಲವು ವರ್ಷಗಳಿಂದ ಹೋರಾಟ ನಡೆದಿದೆ. ಆದರೆ ಈ ಬಗ್ಗೆ ಸಮುದಾಯದ ಶ್ರೀಗಳು ಮಾತನಾಡುತ್ತಾರೆ. ನಾನು ಮಾತನಾಡುವುದಿಲ್ಲ ಎಂದು ಸ್ಪಷ್ಪಡಿಸಿದರು.
ಯಾವುದೇ ಕಾರಣಕ್ಕೂ ಸರಕಾರ ಕಾಂತರಾಜ ಆಯೋಗದ ವರದಿಯನ್ನು ಜಾರಿ ಮಾಡಬಾರದು. ಸರಿಯಾದ ರೀತಿಯಲ್ಲಿ ಕಾಂತ ರಾಜ ಆಯೋಗ ವರದಿಯನ್ನು ಸಿದ್ಧಪಡಿಸಿಲ್ಲ. ಸರಕಾರ ಹೊಸದಾಗಿ ಜನಗಣತಿ ಮಾಡಬೇಕು ಎಂಬುದು ನಮ್ಮ ಸಮುದಾಯದ ಆಗ್ರಹವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CCB Police: ಅಂಚೆ ಮೂಲಕ ತರಿಸಿದ್ದ 21 ಕೋಟಿ ರೂ. ಡ್ರಗ್ಸ್ ಜಪ್ತಿ!
Assembly Session: ಡಿ. 9ರಿಂದ 20ರ ವರೆಗೆ ಚಳಿಗಾಲ ಅಧಿವೇಶನ?
MUDA CASE: 2 ಪುಟಗಳಲ್ಲಿ 41 ಪ್ರಶ್ನೆ ಮುಂದಿಟ್ಟ ಇ.ಡಿ.; ಅಯುಕ್ತರಿಗೆ ಪ್ರಶ್ನೆಗಳ ಸುರಿಮಳೆ
ಮುಡಾ ಕಚೇರಿಗೆ ಇ.ಡಿ. ದಾಳಿ: ಸರಕಾರ-ವಿಪಕ್ಷ ವಾಗ್ಧಾಳಿ
MUDA Case: ದಾಖಲೆ ಪರಿಶೀಲನೆಗಿಂತ ಹೆಚ್ಚಿನದೇನು ಸಾಧ್ಯ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.