![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jan 4, 2020, 3:05 AM IST
ಬಳ್ಳಾರಿ: “ಇದು ನಮ್ಮ ದೇಶ..ಇಲ್ಲಿ ಶೇ.80ರಷ್ಟು ನಾವಿದ್ದೇವೆ. ಕಾಂಗ್ರೆಸ್ನ ಬೇಕೂಫ್ಗಳು ಹೇಳುವುದನ್ನು ಕೇಳಿ ನೀವು ಬೀದಿಗೆ ಬಂದರೆ ಎಚ್ಚರ..ಶೇ.80ರಷ್ಟು ಇರುವ ನಾವು ತಿರುಗಿ ಬಿದ್ದರೆ ನಿಮ್ಮ ಪರಿಸ್ಥಿತಿ ಏನು..?’ – ಇದು ಎನ್ಆರ್ಸಿ, ಸಿಎಎ ಕಾಯ್ದೆ ವಿರೋಧಿಗಳಿಗೆ ಶಾಸಕ ಸೋಮಶೇಖರ ರೆಡ್ಡಿ ನೀಡಿದ ಎಚ್ಚರಿಕೆ. ನಗರದಲ್ಲಿ ಶುಕ್ರವಾರ ದೇಶಭಕ್ತ ನಾಗರಿಕ ವೇದಿಕೆ ಎನ್ಆರ್ಸಿ, ಸಿಎಎ ಕಾಯ್ದೆ ಬೆಂಬಲಿಸಿ ಆಯೋಜಿಸಿದ್ದ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.
ಹಿಂದೂಗಳು ಎಂದರೆ ಬಂಧುಗಳು ಎನ್ನುತ್ತಲೇ ಮಾತು ಆರಂಭಿಸಿದ ಅವರು, ಸಿಎಎ ವಿರೋಧಿಸುತ್ತಿರುವವರಿಗೆ ಇದು ಎಚ್ಚರಿಕೆ. ಇಲ್ಲಿ ಕೇವಲ ಶೇ.5ರಷ್ಟು ಜನರು ಮಾತ್ರ ಬಂದಿದ್ದಾರೆ. ಇನ್ನು ಶೇ.100ರಷ್ಟು ಜನರು ಬಂದರೆ ಹೇಗಿರುತ್ತದೆ. ಅದಕ್ಕೆ ಜಾಸ್ತಿ ನಖರಾ ಮಾಡಿದರೆ ನಿಮ್ಮ ಪರಿಸ್ಥಿತಿ ಏನಾಗಲಿದೆ ಎಂದು ಯೋಚಿಸಿ ಎಂದು ಕಾಯ್ದೆ ವಿರೋಧಿಸುತ್ತಿರುವವರಿಗೆ ಎಚ್ಚರಿಕೆ ನೀಡಿದರು.
ಪೌರತ್ವ ಕಾಯ್ದೆ ತಿದ್ದುಪಡಿ ಹಾಗೂ ಎನ್ಆರ್ಸಿಯಿಂದ ಯಾರಿಗೂ ಸಮಸ್ಯೆಯಾಗಲ್ಲ. ಒಂದು ವೇಳೆ ನಿಮಗೆ ಹೋಗಬೇಕೆಂದು ಅನಿಸಿದರೆ ನೀವೆಲ್ಲ ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಹೋಗಬಹುದು. ಇಲ್ಲಿ ನಾವು-ನೀವೆಲ್ಲರೂ ಅಣ್ಣ-ತಮ್ಮಂದಿರ ಥರ ಇದ್ದೇವೆ. ಅದು ಹಾಗೆ ಇರಬೇಕು. ಅದನ್ನು ಬಿಟ್ಟು ಕಾಯ್ದೆಯನ್ನು ವಿರೋ ಧಿಸಿದರೆ ಒಬ್ಬೊಬ್ಬರು ಒಬ್ಬೊಬ್ಬ ಶಿವಾಜಿಯಾಗಿ ಕನಕದುರ್ಗಮ್ಮನ ದರ್ಶನ ಪಡೆದು ಖಡ್ಗ ಹಿಡಿದು ನಿಂತರೆ ಹೇಗೆ? ಎಂದು ಪ್ರಶ್ನಿಸಿದರು.
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.