Lok Adalat ದಾಖಲೆ: 1,033 ಪೀಠಗಳಲ್ಲಿ ಅದಾಲತ್; 40 ಲಕ್ಷ ಪ್ರಕರಣ ಇತ್ಯರ್ಥ
Team Udayavani, Jul 16, 2024, 6:45 AM IST
ಬೆಂಗಳೂರು: ರಾಜ್ಯಾದ್ಯಂತ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ದಾಖಲೆಯ 40.3 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ರಾಜಿ- ಸಂಧಾನದ ಮೂಲಕ ಇತ್ಯರ್ಥ ಪಡಿಸಿ, ಒಟ್ಟು 2,640 ಕೋಟಿ ರೂ.ಗಳನ್ನು ಕಕ್ಷಿದಾರ ರಿಗೆ ಪರಿಹಾರ ರೂಪದಲ್ಲಿ ನೀಡ ಲಾಗಿದೆ.
ಈ ಮೂಲಕ ಕರ್ನಾ ಟಕ ಕಾನೂನು ಸೇವಾ ಪ್ರಾಧಿ ಕಾರ ಹೊಸ ದಾಖಲೆ ಬರೆದಿದೆ.ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆಗಿ ರುವ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಸೋಮವಾರ ಈ ಮಾಹಿತಿ ನೀಡಿದರು.
ಜು. 13ರಂದು ರಾಜ್ಯಾದ್ಯಂತ ಒಟ್ಟು 1,033 ಪೀಠಗಳು ಲೋಕ ಅದಾಲತ್ ನಡೆಸಿವೆ. ಈ ವೇಳೆ ನ್ಯಾಯಾಲಯದಲ್ಲಿ ಬಾಕಿಯಿದ್ದ 2.64 ಲಕ್ಷ ಪ್ರಕರಣಗಳು ಹಾಗೂ 37.3 ಲಕ್ಷ ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 40.3 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 1,550 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ, 259 ದಂಪತಿಯನ್ನು ಮತ್ತೆ ಒಂದುಗೂಡಿಸಿರುವುದು ಈ ಬಾರಿಯ ಅದಾಲತ್ನ ಮತ್ತೊಂದು ವಿಶೇಷ ಎಂದರು.
ಇದೇ ಮೊದಲ ಬಾರಿಗೆ ಆಸ್ತಿ ತೆರಿಗೆ ಪಾವತಿಗೆ ರಿಯಾಯಿತಿ ಸೌಲಭ್ಯವನ್ನು ಲೋಕ ಅದಾಲತ್ಗೆ ವಿಸ್ತರಿಸಲಾಗಿದೆ. ರಾಜ್ಯದ ಎಲ್ಲ ಮುನ್ಸಿಪಾಲಿಟಿ ವ್ಯಾಪ್ತಿಯ 9 ಲಕ್ಷ ಪ್ರಕರಣಗಳ ಆಸ್ತಿ ತೆರಿಗೆದಾರರು ರಿಯಾಯಿತಿ ಸೌಲಭ್ಯದ ಪ್ರಯೋಜನ ಪಡೆದಿದ್ದಾರೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.