Kalidas Samman; ಗಂಜೀಫಾ ರಘುಪತಿ ಭಟ್ಟರಿಗೆ ರಾಷ್ಟ್ರೀಯ ಕಾಳಿದಾಸ್ ಸಮ್ಮಾನ್
ಉಡುಪಿ ಮೂಲದ ಹೆಸರಾಂತ ಕಲಾವಿದ
Team Udayavani, Oct 20, 2024, 6:40 AM IST
ಬೆಂಗಳೂರು: ಉಡುಪಿ ಮೂಲದ ಹೆಸರಾಂತ ಕಲಾವಿದ ಗಂಜೀಫಾ ರಘುಪತಿ ಭಟ್ಟರಿಗೆ ಮಧ್ಯಪ್ರದೇಶ ಸರಕಾರ ನೀಡುವ 2023ನೇ ಸಾಲಿನ ರಾಷ್ಟ್ರೀಯ “ಕಾಳಿದಾಸ್ ಸಮ್ಮಾನ್’ ಪ್ರಶಸ್ತಿ ಲಭಿಸಿದೆ. ಜೀವಿತಾವಧಿಯ ಶ್ರೇಷ್ಠ ಸಾಧನೆಯನ್ನು ಪರಿಗಣಿಸಿ ಈ ಪುರಸ್ಕಾರ ನೀಡಲಾಗುತ್ತಿದ್ದು, ಭಟ್ಟರ ಭಾರತೀಯ ಶಾಸ್ತ್ರೀಯ ಚಿತ್ರರಚನೆ ಸಾಧನೆಯನ್ನು ಗುರುತಿಸಿ ಗೌರವಿಸಲಾಗಿದೆ. ಪ್ರಶಸ್ತಿಯು 5 ಲಕ್ಷ ರೂ. ನಗದನ್ನು ಒಳಗೊಂಡಿದ್ದು, ನ. 12ರಂದು ಉಜ್ಜಯಿನಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಳಿವಿನಂಚಿನಲ್ಲಿದ್ದ ಕರ್ನಾಟಕದ ಗಂಜೀಫಾ ಚಿತ್ರಕಲೆಯನ್ನು ಮುನ್ನೆಲೆಗೆ ತರುವಲ್ಲಿ ಇವರ ಪಾತ್ರ ಮಹತ್ತರವಾದುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಎರಡು ನಾಲಿಗೆ, ಎರಡು ಮೂಗು, ಮೂರು ಕಣ್ಣುಗಳಿರುವ ಕರು ಜನನ
Mayur Patel: ಭೂಮಿ ಅತಿಕ್ರಮಣ ಆರೋಪ; ನಟ ಮಯೂರ್ ವಿರುದ್ಧ ಎಫ್ಐಆರ್
Chikkamagaluru; ಮುಳ್ಳಯನಗಿರಿಯಲ್ಲಿ ಭಾರೀ ಮಳೆ; ಜಲಪಾತದಂತೆ ಹರಿದ ನೀರು
Saroja Sanjeev: ಕಿಚ್ಚನಿಗೆ ಮಾತೃ ವಿಯೋಗ; ಸುದೀಪ್ ತಾಯಿ ಸರೋಜಾ ಸಂಜೀವ್ ಇನ್ನಿಲ್ಲ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಹನುಮಂತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.