ಎಮ್ಮೆಗಳೊಂದಿಗೆ ಸೇರಲು ಬಿಡದಿದ್ದುದಕ್ಕೆ ಇರಿದ ಕೋಣ; ವ್ಯಕ್ತಿ ಮೃತ್ಯು
ಹಲವು ಬಾರಿ ಹೊಂಚು ಹಾಕಿತ್ತು... ದೇವಿಗೆ ಹರಕೆ ಬಿಟ್ಟ ಕೋಣ
Team Udayavani, Jun 19, 2023, 10:11 PM IST
ಜಯಣ್ಣ, ಕೋಣದ ಸಾಂದರ್ಭಿಕ ಚಿತ್ರ
ಚನ್ನಗಿರಿ: ಕೋಣವೊಂದು ಎಮ್ಮೆಗಳ ಜತೆ ಸೇರಲು ಬಿಡುತ್ತಿಲ್ಲ ಎಂದು ವ್ಯಕ್ತಿಯೋಬ್ಬನನ್ನು ಅಟ್ಟಾಡಿಸಿಕೊಂಡು ಕೊಂಬಿನಿಂದ ಇರಿದು ಕೊಂದು ಹಾಕಿರುವ ಘಟನೆ ತಾಲೂಕಿನ ಎನ್. ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನೀರಗಂಟಿ ಜಯಣ್ಣ (49) ಕೋಣನ ಆಕ್ರೋಶಕ್ಕೆ ಬಲಿಯಾದ ವ್ಯಕ್ತಿ. ತಾಲೂಕಿನ ಲಿಂಗದಹಳ್ಳಿ ಗ್ರಾಮದ ಉಡಸಲಾಂಬ ದೇವಿಗೆ ಕೋಣವನ್ನು ಹರಕೆಗಾಗಿ ಬೀಡಲಾಗಿತ್ತು ಈ ಕೋಣವು ಪಕ್ಕದ ಬಸವನಹಳ್ಳಿ ಗ್ರಾಮಕ್ಕೆ ಹೋಗಿ ಊರಿನಲ್ಲಿ ಸಾಕಷ್ಟು ದಾಂಧಲೆಯನ್ನು ನಡೆಸುತ್ತಿತ್ತು. ಹಾಗೆಯೇ ಎಮ್ಮೆಗಳನ್ನು ಕಂಡರೇ ಆಟಾಟೋಪ ತೋರುತ್ತಿತ್ತು. ಅದನ್ನು ತೆಡಯಲು ಗ್ರಾಮದ ನೀರಗಂಟಿ ಜಯಣ್ಣ ಕೋಣವನ್ನು ದೊಣ್ಣೆಯಿಂದ ಓಡಿಸುವಂತಹ ಕೆಲಸವನ್ನು ಮಾಡುತ್ತಿದ್ದರು, ಅದರೇ ಕೋಣ ತನ್ನ ದಾರಿಗೆ ಅಡ್ಡಿಯಾಗುತ್ತಿದ್ದಾನೆ ಎಂದು ಆಕ್ರೋಶದಿಂದ ಜಯಣ್ಣ ಸಿಕ್ಕಕಡೆಯಲ್ಲ ಹೋಗಿ ದಾಳಿಯನ್ನು ನಡೆಸುತ್ತಿತ್ತು. ಹಲವು ಬಾರಿ ಕೋಣದ ಹಲ್ಲೆಯಿಂದ ತಪ್ಪಿಸಿಕೊಂಡಿದ್ದರು. ಕೆಲವೊಮ್ಮೆ ಗಾಯಗಳಾಗಿರುವ ಉದಾಹರಣೆಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ.
ಹೊಂಚುಹಾಕಿ ದಾಳಿಗೆ ಯತ್ನ
ಜಯಣ್ಣ ಹೊರಗಡೆ ಬರುವುದನ್ನೇ ಕಾದು ಹೊಂಚು ಹಾಕುತ್ತಿದ್ದ ಕೋಣ ಹೊರಗೆ ಬಂದ ತತ್ ಕ್ಷಣವೇ ದಾಳಿ ಮಾಡಲು ಯತ್ನಿಸುತ್ತಿತ್ತು. ಆಗ ಜಯಣ್ಣ ಕೋಣವನ್ನು ಎದುರಿಸಲು ಸ್ಥಳೀಯರು ಜತೆಗೂಡಿ ಬೇದರಿಸಿ ಓಡಿಸುತ್ತಿದ್ದರು. ಅದರೇ ಕೋಣ ಜಯಣ್ಣ ಒಬ್ಬಂಟಿಯಾಗಿ ಸಿಕ್ಕ ವೇಳೆ ಅಟ್ಟಾಡಿಸಿಕೊಂಡು ಕೋಂಬಿನಿಂದ ಚುಚ್ಚಿ ಸಾಯಿಸಿದೆ.
ಕೋಣನ ಅಟ್ಟಹಾಸಕ್ಕೆ ಬೇಸತ್ತ ಜನತೆ ಈ ಹಿಂದೆ ಪೋಲಿಸ್ ಠಾಣೆಯ ಮೆಟ್ಟಿಲ್ಲೇರಿದ್ದರು. ಕೋಣವು ದಾಂಧಲೆ ನಡೆಸುತ್ತಿದೆ ರಕ್ಷಣೆ ಕೋರುವಂತೆ ಮನವಿ ಕೂಡ ಮಾಡಿದ್ದರು ಎನ್ನಲಾಗಿದೆ.
ದೇವರ ಕೋಣ ಪದೇ ಪದೇ ದಾಳಿ ನಡೆಸುತ್ತಿದ್ದ ಬಗ್ಗೆ ಲಿಂಗದಹಳ್ಳಿ, ಬಸವನಹಳ್ಳಿ ಗ್ರಾಮಸ್ಥರು ದೇವಸ್ಥಾನಕ್ಕೆ ಸೇರಿದಂತೆ ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿದರು ನಿರ್ಲಕ್ಷ್ಯದಿಂದ ವ್ಯಕ್ತಿ ಮೃತಪಟ್ಟಿದ್ದಾರೆ. ತತ್ ಕ್ಷಣ ಮೃತನ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಕುರಿತು ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ
PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ
Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Talk Fight: ಯಾರು ಏನೇ ಅಂದ್ರೂ ಬಿಜೆಪಿ ಕಾರ್ಯಕರ್ತರು ನನ್ನ ಒಪ್ಪಿದ್ದಾರೆ: ವಿಜಯೇಂದ್ರ
Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.