Panchayat Raj;10% ಸೇವೆಯನ್ನೂ ಜನರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ: ಪ್ರಿಯಾಂಕ್‌ ಬೇಸರ

ಪಂಚಾಯತ್‌ರಾಜ್‌ ಇಲಾಖೆ ನಿರ್ವಹಣೆಗೆ ಪಂಚಸೂತ್ರ

Team Udayavani, Oct 20, 2024, 6:30 AM IST

1-a-panch-raj

ಬೆಂಗಳೂರು: ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳು ಸಮನ್ವಯತೆ, ಸಮಯಪ್ರಜ್ಞೆ, ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ಹಾಗೂ ಹೊಣೆಗಾರಿಕೆ ಈ ಪಂಚಸೂತ್ರಗಳನ್ನು ಇರಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಪಂಚಾಯತ್‌ ರಾಜ್‌ ಮತ್ತು ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಗರದಲ್ಲಿ ಆಯೋಜಿಸಲಾಗಿದ್ದ ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುತ್ತ, ರಾಜ್ಯದ ಜನರಿಗೆ ಸ್ವಾಭಿಮಾನ ಬದುಕು ನೀಡುವ ಕೆಲಸವನ್ನು ಪಂಚಾಯತ್‌ ರಾಜ್‌ ಇಲಾಖೆ ಮಾಡಬೇಕಿದೆ. ಸರಕಾರದ ಮೂಲ ಸೌಕರ್ಯ ಯೋಜನೆಗಳ ಅನುಷ್ಠಾನ ಮಾತ್ರವಲ್ಲದೆ, ಜನರ ಬದುಕಲ್ಲಿ ಬದಲಾವಣೆ ತರುವ ಶಕ್ತಿ ಈ ಇಲಾಖೆಗಿದೆ. ಆದರೆ ಇಲಾಖೆಯ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಿಲ್ಲ. ನಮ್ಮಲ್ಲಿ ತಂತ್ರಜ್ಞಾನ, ಸವಲತ್ತು, ಸಂಪನ್ಮೂಲಗಳೆಲ್ಲ ಇದ್ದರೂ ಕೂಡ ನಾವು ಶೇ.10 ಸೇವೆಯನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ನಾವು ಶೇ. 90 ಬಾರಿ ವಿಫ‌ಲರಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇಲಾಖೆಯ ಅಧಿಕಾರಿಗಳ ಮಧ್ಯೆ ಸಮನ್ವಯತೆ ಇಲ್ಲ. ಆದರೆ ಕಾಂಟ್ರ್ಯಾಕ್ಟರ್‌ಗಳ ಜತೆಗೆ ಸಮನ್ವಯತೆ ಇದೆ. ಕಾಂಟ್ರ್ಯಾಕ್ಟರ್‌ಗಳ ಮಧ್ಯೆ ಇರುವ ಸಮನ್ವಯತೆಯ ಶೇ. 50ರಷ್ಟು ನಮ್ಮ ಇಲಾಖೆಯ ಅಧಿಕಾರಿಗಳ ಮಧ್ಯೆ ಇದ್ದರೂ ಸಾಕಿತ್ತು. ಪ್ರತಿ ತಿಂಗಳು ಪರಾಮರ್ಶೆ ಸಭೆ ನಡೆಸಿದಾಗ ಮಕ್ಕಳಿಗೆ ಹೇಳಿದ ಹಾಗೆ ಹೇಳಿದರೂ ಸಹ ಏನೊಂದು ಪ್ರಗತಿ ಕಂಡು ಬಂದಿಲ್ಲ. ನಾನು ಸಭೆ ನಡೆಸಿದಾಗ ನನಗೆ ನಾನು ಗ್ರಾಮೀಣಾಭಿವೃದ್ಧಿ ಸಚಿವನಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದೇನಾ ಎಂಬ ಪ್ರಶ್ನೆ ಬರುತ್ತದೆ. ನಿಮ್ಮ ವಿಫ‌ಲತೆ ನನ್ನ
ಮೇಲೆ ಪ್ರತಿಬಿಂಬಿತವಾಗುತ್ತಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಆ್ಯಪ್‌ ಲೋಕಾರ್ಪಣೆ
ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರಿನ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿ, ಜೀವಜಲ ನೀರಿನ ಗುಣಮಟ್ಟ ಆ್ಯಪ್‌, ಸೇವಾ ದರ್ಶಕ ತಂತ್ರಾಂಶ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಆ್ಯಪ್‌ ಲೋಕಾರ್ಪಣೆ ಮಾಡಲಾಯಿತು.

ಮೊಬೈಲ್‌ ಬಳಕೆಗೆ ತರಾಟೆ
ಸರಕಾರಿ ಕಚೇರಿಯಲ್ಲಿ ಅಧಿಕಾರಿಗಳು, ಸಿಬಂದಿ ಕೇವಲ ಮೊಬೈಲಲ್ಲೇ ವ್ಯಸ್ತರಾಗಿರುತ್ತಾರೆ ಎಂಬ ಆರೋಪ ಜನಸಾಮಾನ್ಯರಲ್ಲಿದೆ. ಇಂದು ಖುದ್ದು ಈ ಅನುಭವ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಪಂಚಾಯತ್‌ ರಾಜ್‌ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಆಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಲವು ಅಧಿಕಾರಿಗಳು ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೂ, ಇಲಾಖೆಯ ಸಚಿವರು, ಹಿರಿಯ ಅಧಿಕಾರಿಗಳು ಮಾತನಾಡುತ್ತಿದಾಗಲೂ ಮೊಬೈಲ್‌ನಲ್ಲೇ ಬ್ಯುಸಿಯಿದ್ದರು. ತಮ್ಮ ಭಾಷಣದಲ್ಲಿ ಇದನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕ್‌ ಖರ್ಗೆ, ಇಲ್ಲಿಯೂ ಮೊಬೈಲ್‌ನಲ್ಲಿ ಬ್ಯುಸಿ ಆಗಿದ್ದಾರೆ ಹೇಗೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿ, ಮುಂದಿನ ಕಾರ್ಯಕ್ರಮದಲ್ಲಿ ಮೊಬೈಲ್‌ನ್ನು ಹೊರಗಿಟ್ಟು ಬರಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಪ್ರಿಯಾಂಕ್‌ ಖರ್ಗೆ ಸೂಚನೆ ನೀಡಿದರು.

ಹಳ್ಳಿಗಳಲ್ಲಿ ಪ್ರತಿ ವರ್ಷ ನೀರಿನ ದರ ಪರಿಷ್ಕರಣೆ
ಗ್ರಾಮೀಣ ಭಾಗದಲ್ಲಿ ಖಚಿತವಾಗಿ ಕಾರ್ಯನಿರ್ವಹಿಸುವ, ಸುಸ್ಥಿರ ಮತ್ತು ನಂಬಿಗಸ್ಥ ಕುಡಿಯುವ ನೀರಿನ ವ್ಯವಸ್ಥೆಗೆ ಗ್ರಾಮೀಣ ಕುಡಿಯುವ ನೀರಿನ ಪೂರೈಕೆಯ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿಯನ್ನು ಕಾರ್ಯಕ್ರಮದಲ್ಲಿ ಪ್ರಕಟಿಸಲಾಯಿತು. ಗ್ರಾಮ ಪಂಚಾಯತ್‌ಗಳು ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲೀಕರಣ ಇಲಾಖೆಗೆ ನೀರಿನ ಬಳಕೆಯ ಆಧಾರದಲ್ಲಿ ದರ ಪಾವತಿಸಬೇಕು. ಗ್ರಾ.ಪಂ. ಬಳಕೆದಾರರಿಂದ ಕಾರ್ಯಾಚರಣೆ, ನಿರ್ವಹಣೆ ವೆಚ್ಚ ವಸೂಲಿ ಆಗುವಂತೆ ದರ ನಿಗದಿ ಮಾಡಿ, ಮಾಸಿಕವಾಗಿ ಬಿಲ್‌ ಕಲೆಕ್ಟ್ ಮಾಡಬೇಕು ಎಂದು ನೀತಿಯಲ್ಲಿ ಹೇಳಲಾಗಿದೆ.

ಟಾಪ್ ನ್ಯೂಸ್

Vijayapura: ಎರಡು ನಾಲಿಗೆ, ಎರಡು ಮೂಗು, ಮೂರು ಕಣ್ಣುಗಳಿರುವ ಕರು ಜನನ

Vijayapura: ಎರಡು ನಾಲಿಗೆ, ಎರಡು ಮೂಗು, ಮೂರು ಕಣ್ಣುಗಳಿರುವ ಕರು ಜನನ

Mayur Patel: ಭೂಮಿ ಅತಿಕ್ರಮಣ ಆರೋಪ; ನಟ ಮಯೂರ್‌ ವಿರುದ್ಧ ಎಫ್ಐಆರ್‌

Mayur Patel: ಭೂಮಿ ಅತಿಕ್ರಮಣ ಆರೋಪ; ನಟ ಮಯೂರ್‌ ವಿರುದ್ಧ ಎಫ್ಐಆರ್‌

ಮುಳ್ಳಯನಗಿರಿಯಲ್ಲಿ ಭಾರೀ ಮಳೆ; ಜಲಪಾತದಂತೆ ಹರಿದ ನೀರು

Chikkamagaluru; ಮುಳ್ಳಯನಗಿರಿಯಲ್ಲಿ ಭಾರೀ ಮಳೆ; ಜಲಪಾತದಂತೆ ಹರಿದ ನೀರು

ಕಿಚ್ಚನಿಗೆ ಮಾತೃ ವಿಯೋಗ; ಸುದೀಪ್‌ ತಾಯಿ ಸರೋಜಾ ಸಂಜೀವ್‌ ಇನ್ನಿಲ್ಲ

Saroja Sanjeev: ಕಿಚ್ಚನಿಗೆ ಮಾತೃ ವಿಯೋಗ; ಸುದೀಪ್‌ ತಾಯಿ ಸರೋಜಾ ಸಂಜೀವ್‌ ಇನ್ನಿಲ್ಲ

BBK11: Hanumantha is a wild card entry in the Bigg Boss house

BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಹನುಮಂತ

Odisha: ಪ್ರಧಾನಿಗೆ 100 ರೂ ನೀಡಿದ ಬುಡಕಟ್ಟು ಮಹಿಳೆ; ನಾರಿಶಕ್ತಿಯ ಆಶೀರ್ವಾದ ಎಂದ ಮೋದಿ

Odisha: ಪ್ರಧಾನಿಗೆ 100 ರೂ ನೀಡಿದ ಬುಡಕಟ್ಟು ಮಹಿಳೆ; ನಾರಿಶಕ್ತಿಯ ಆಶೀರ್ವಾದ ಎಂದ ಮೋದಿ

Online Nikah: ಪಾಕ್‌ ಯುವತಿಯನ್ನು ಆನ್‌ಲೈನ್‌ನಲ್ಲಿ ವಿವಾಹವಾದ ಬಿಜೆಪಿ ಮುಖಂಡದ ಪುತ್ರ!

Online Nikah: ಪಾಕ್‌ ಯುವತಿಯನ್ನು ಆನ್‌ಲೈನ್‌ನಲ್ಲಿ ವಿವಾಹವಾದ ಬಿಜೆಪಿ ಮುಖಂಡನ ಪುತ್ರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Deepavali: ದೀಪಾವಳಿಗೆ ಹಸುರೇತರ ಪಟಾಕಿ ಪೂರ್ಣ ನಿಷೇಧ

HDK (4)

H.D. Kumaraswamy: 2028ರೊಳಗೆ ನಾನು ಸಿಎಂ ಆಗುತ್ತೇನೆ…

1-eeewqe

ED ಯಿಂದ ದಾಖಲೆ ಪರಿಶೀಲನೆ; ಲೋಕಾದಿಂದ ಸಂಸದನ ವಿಚಾರಣೆ: ಇಂದೂ ತನಿಖೆ ಮುಂದುವರಿಕೆ?

1-a-ganji

Kalidas Samman; ಗಂಜೀಫಾ ರಘುಪತಿ ಭಟ್ಟರಿಗೆ ರಾಷ್ಟ್ರೀಯ ಕಾಳಿದಾಸ್‌ ಸಮ್ಮಾನ್‌

Siddu-DKSHI

Congress; ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸವಾಲು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Vijayapura: ಎರಡು ನಾಲಿಗೆ, ಎರಡು ಮೂಗು, ಮೂರು ಕಣ್ಣುಗಳಿರುವ ಕರು ಜನನ

Vijayapura: ಎರಡು ನಾಲಿಗೆ, ಎರಡು ಮೂಗು, ಮೂರು ಕಣ್ಣುಗಳಿರುವ ಕರು ಜನನ

Mayur Patel: ಭೂಮಿ ಅತಿಕ್ರಮಣ ಆರೋಪ; ನಟ ಮಯೂರ್‌ ವಿರುದ್ಧ ಎಫ್ಐಆರ್‌

Mayur Patel: ಭೂಮಿ ಅತಿಕ್ರಮಣ ಆರೋಪ; ನಟ ಮಯೂರ್‌ ವಿರುದ್ಧ ಎಫ್ಐಆರ್‌

ಮುಳ್ಳಯನಗಿರಿಯಲ್ಲಿ ಭಾರೀ ಮಳೆ; ಜಲಪಾತದಂತೆ ಹರಿದ ನೀರು

Chikkamagaluru; ಮುಳ್ಳಯನಗಿರಿಯಲ್ಲಿ ಭಾರೀ ಮಳೆ; ಜಲಪಾತದಂತೆ ಹರಿದ ನೀರು

ಕಿಚ್ಚನಿಗೆ ಮಾತೃ ವಿಯೋಗ; ಸುದೀಪ್‌ ತಾಯಿ ಸರೋಜಾ ಸಂಜೀವ್‌ ಇನ್ನಿಲ್ಲ

Saroja Sanjeev: ಕಿಚ್ಚನಿಗೆ ಮಾತೃ ವಿಯೋಗ; ಸುದೀಪ್‌ ತಾಯಿ ಸರೋಜಾ ಸಂಜೀವ್‌ ಇನ್ನಿಲ್ಲ

BBK11: Hanumantha is a wild card entry in the Bigg Boss house

BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಹನುಮಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.