Karnataka Government ಶೀಘ್ರ ಡಿಜಿಟಲ್‌ ಬಗರ್‌ಹುಕುಂ ಸಾಗುವಳಿ ಚೀಟಿ

9.29 ಲಕ್ಷ ಅರ್ಜಿ; 54 ಲಕ್ಷ ಎಕರೆ ಮಂಜೂರಾತಿಗಾಗಿ ಬೇಡಿಕೆ

Team Udayavani, Nov 29, 2023, 6:30 AM IST

Karnataka Government ಶೀಘ್ರ ಡಿಜಿಟಲ್‌ ಬಗರ್‌ಹುಕುಂ ಸಾಗುವಳಿ ಚೀಟಿ

ಬೆಂಗಳೂರು: ರಾಜ್ಯಾದ್ಯಂತ 54 ಲಕ್ಷ ಎಕರೆ ಬಗರ್‌ಹುಕುಂ ಸಾಗುವಳಿ ಭೂಮಿಗಾಗಿ 9.29 ಲಕ್ಷ ಅರ್ಜಿಗಳು ಬಂದಿದ್ದು, ಸರಕಾರದ ಬಳಿ ಅಷ್ಟು ಪ್ರಮಾಣದ ಭೂಮಿಯೇ ಇಲ್ಲ. ಹೀಗಾಗಿ 8 ತಿಂಗಳುಗಳ ಒಳಗೆ ಅನರ್ಹರನ್ನು ಪರಿಶೋಧಿಸಿ ಅರ್ಹರಿಗೆ ಡಿಜಿಟಲೀಕೃತ ಸಾಗುವಳಿ ಚೀಟಿ ನೀಡಲು ರಾಜ್ಯ ಸರಕಾರ ಮುಂದಾಗಿದೆ.

ಈ ಹಿಂದೆ ಸಿದ್ದರಾಮಯ್ಯ ಅಧಿಕಾರದಲ್ಲಿ ದ್ದಾಗಲೇ ಬಗರ್‌ಹುಕುಂ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಇದು ವರೆಗೆ 9,29,513 ಅರ್ಜಿಗಳು ಬಂದಿದ್ದು, ಇದರ ಪ್ರಕಾರ 54 ಲಕ್ಷ ಎಕರೆಯನ್ನು ಮಂಜೂರು ಮಾಡಬೇಕಾಗುತ್ತದೆ. ಆದರೆ ಅಷ್ಟು ಪ್ರಮಾಣದ ಸರಕಾರಿ ಭೂಮಿ ಇಲ್ಲ. ಅನರ್ಹರೂ ಅರ್ಜಿ ಸಲ್ಲಿಸಿರುವುದು ಪತ್ತೆಯಾಗಿದೆ. ತಾಂತ್ರಿಕ ದೋಷಗಳೂ ಇದ್ದುದರಿಂದ ಬಗರ್‌ಹುಕುಂ ಸಮಿತಿ ರಚಿಸಿ ಇವುಗಳ ಇತ್ಯರ್ಥಕ್ಕೆ ಕ್ರಮ ಕೈಗೊಂಡಿರಲಿಲ್ಲ. ಈಗ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ 8 ತಿಂಗಳಲ್ಲಿ ಬಗರ್‌ಹುಕುಂ ಸಾಗುವಳಿ ಚೀಟಿಗಳಿಗೆ ಮುಕ್ತಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದ ಅವರು, ಸರಕಾರಿ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದ ಭೂರಹಿತರಿಗೆ ಆ ಜಾಗವನ್ನು ಸಕ್ರಮ ಮಾಡಿಕೊಡಲು ಕಾನೂನಿನಡಿ ಅವಕಾಶ ಒದಗಿಸಲಾಗಿತ್ತು. ಆದರೆ ಸಾಕಷ್ಟು ಸಮಸ್ಯೆಗಳು ಇದ್ದುದರಿಂದ ಇದುವರೆಗೆ ಈ ಪ್ರಕ್ರಿಯೆ ಸರಿಯಾಗಿ ಅನುಷ್ಠಾನಗೊಂಡಿರಲಿಲ್ಲ ಎಂದರು.

ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ
50 ತಾಲೂಕುಗಳಲ್ಲಿ ಬಗರ್‌ಹುಕುಂ ಸಮಿತಿ ರಚನೆಗೆ ಪ್ರಸ್ತಾವನೆ ಬಂದಿದ್ದು, ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆ ಯಲ್ಲಿ ಕೂಡಲೇ ಸಮಿತಿ ರಚಿಸುತ್ತೇವೆ. ಉಳಿದಂತೆ ಜಿಲ್ಲಾಧಿಕಾರಿ ಗಳಿಂದ ಪ್ರಸ್ತಾವನೆ ಪಡೆದು ಸಮಿತಿ ರಚಿಸಲಾಗುತ್ತದೆ. ಸಲ್ಲಿಕೆ ಯಾಗಿರುವ 9.29 ಲಕ್ಷ ಅರ್ಜಿಗಳಿಗೆ ಸಂಬಂಧಿಸಿ ಫ‌ಲಾನು ಭವಿಗಳ ಆಧಾರ್‌ ಜೋಡಣೆ ಮಾಡಿ, ಅವರ ಕುಟುಂಬದ ಜಮೀನಿನ ಮಾಹಿತಿಯನ್ನು ತಹಶೀಲ್ದಾರರು ಪರಿಶೀಲಿಸ ಲಿದ್ದಾರೆ. ಇದಕ್ಕೆ ಪೂರಕವಾಗಿ ಸ್ಯಾಟಲೈಟ್‌ ಚಿತ್ರಗಳು ಮತ್ತು ಸರ್ವೇ ವರದಿ ಪರಿಶೀಲಿಸಿ, ಸಮಿತಿಯ ಮುಂದೆ ಅರ್ಹ ಅರ್ಜಿಗಳನ್ನು ಇರಿಸುತ್ತಾರೆ. ಸಮಿತಿಯು ಪರಿಶೀಲಿಸಿ, ಇತ್ಯರ್ಥಪಡಿಸುತ್ತದೆ ಎಂದು ವಿವರಿಸಿದರು.

ಏನಿದು ಡಿಜಿಟಲ್‌
ಸಾಗುವಳಿ ಚೀಟಿ?
2017ರಿಂದ ಈ ಕಾನೂನು ಬಂದಿದ್ದು, ಈ ಹಿಂದೆ ಸಾಗುವಳಿ ಚೀಟಿ ಕೊಡುವಾಗ ಅಷ್ಟು ಭೂಮಿ ಇತ್ತೇ ಎಂಬುದನ್ನು ನೋಡಿಲ್ಲ. ಅಧಿಕ ಭೂಮಿ ಮಂಜೂರಾಗಿರುವುದೂ ಇದೆ. ಸಾಗುವಳಿ ಚೀಟಿ ವಿತರಣೆ ಆದವರಿಗೆ ದಾಖಲೆ ಇಲ್ಲದಂತಾಗಿದೆ. ಈ ಎಲ್ಲ ಕಾರಣಗಳಿಂದ ಪೋಡಿ ಮಾಡಲು ಹಿನ್ನಡೆ ಯಾಗುತ್ತಿದ್ದು, ಡಿಜಿಟಲೀಕೃತ ಸಾಗುವಳಿ ಚೀಟಿ ಇದೆಲ್ಲಕ್ಕೂ ಪರಿಹಾ ರವಾಗಲಿದೆ. ಡಿಜಿಟಲ್‌ ಚೀಟಿಯಲ್ಲಿ ಸ್ಕ್ಯಾನ್‌ ಮಾಡಬಲ್ಲ ಬಾರ್‌ಕೋಡ್‌, ಸಾಗುವಳಿದಾರರ ಆಧಾರ್‌ ಸಂಖ್ಯೆ, ಭಾವಚಿತ್ರ ಎಲ್ಲವೂ ಇರಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜಮೀನನ್ನು ಪೋಡಿ ಮಾಡಿಸಿ, ನೋಂದಣಿ ಕೂಡ ಮಾಡಿಕೊಡಲಾಗುತ್ತದೆ. ಆನ್‌ಲೈನ್‌ ಮೂಲಕ ಶುಲ್ಕ ಪಾವತಿಗೂ ಅವಕಾಶ ಮಾಡಿಕೊಡಲಾಗುತ್ತದೆ. ಇದರಿಂದ ಪೋಡಿ ಸಮಸ್ಯೆಗೂ ಶಾಶ್ವತ ಪರಿಹಾರ ಸಿಗಲಿದೆ.

ಅರ್ಹತೆಯ ಮಾನದಂಡ ಏನು?
-2004ಕ್ಕೂ ಹಿಂದಿನಿಂದ ಸರಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರಬೇಕು.
-2004ಕ್ಕೂ ಮೊದಲಿನಿಂದ ಸಾಗುವಳಿ ಮಾಡುತ್ತಿದ್ದ 18 ವರ್ಷ ತುಂಬಿದ್ದವರಷ್ಟೇ ಅರ್ಜಿ ಸಲ್ಲಿಸಿರಬೇಕು.
-ಸ್ವಂತ ಭೂಮಿ ಇಲ್ಲದೆ ಅನಿವಾರ್ಯವಾಗಿ ಸರಕಾರಿ ಭೂಮಿಯಲ್ಲಿ ಸಾಗುವಳಿ ನಡೆಸಿರಬೇಕು.
-ಸ್ವಂತ ಭೂಮಿ ಇದ್ದರೂ 4.38 ಎಕರೆಗಿಂತ ಹೆಚ್ಚಿಗೆ ಇರುವಂತಿಲ್ಲ.
-ಸಾಗುವಳಿ ಭೂಮಿ ಇರುವ ತಾಲೂಕು ಅಥವಾ ಜಿಲ್ಲೆಯಲ್ಲೇ ವಾಸವಿರಬೇಕು.

ಈ ಹಿಂದಿನ ಕೆಲವು ಬಗರ್‌ಹುಕುಂ ಸಮಿತಿ ಸಭೆಗಳ ನಡಾವಳಿಗಳೇ ನಾಪತ್ತೆಯಾಗಿದ್ದು, ಶಾಸಕರು ಅಧಿವೇಶನದಲ್ಲಿರುವಾಗ ಸಮಿತಿ ಸಭೆ ನಡೆದಿರುವುದಾಗಿ ದಾಖಲೆ ಸೃಷ್ಟಿಸಲಾಗಿದೆ. ಕೆಲವೆಡೆ ಸದಸ್ಯರೇ ಇಲ್ಲದೆ, ಅವರ ಸಹಿಯೇ ಇಲ್ಲದೆ ಸಭೆಗಳು ನಡೆದಿವೆ. ಹೀಗಾಗಿ ಸಭೆಯನ್ನೂ ಗಣಕೀಕರಣ ಮಾಡಲು ನಿರ್ಧರಿಸಿದ್ದು, ಬಯೋಮೆಟ್ರಿಕ್‌ ಕೂಡ ಅಳವಡಿಸಲಾಗುತ್ತದೆ. ಸಾಗುವಳಿ ಚೀಟಿಯೂ ಡಿಜಿಟಲ್‌ ರೂಪದಲ್ಲಿ ಇರಲಿದೆ. ಜನರಿಗೆ ಜಮೀನೂ ಸಿಗಬೇಕು, ನೆಮ್ಮದಿಯ ಮಾಲಕತ್ವ ಸಿಗಬೇಕು ಎಂಬುದು ನಮ್ಮ ಆದ್ಯತೆ.
-ಕೃಷ್ಣ ಬೈರೇಗೌಡ, ಕಂದಾಯ ಸಚಿವ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

Devegowda

Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್‌.ಡಿ.ದೇವೇಗೌಡ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.