ಕೃಷ್ಣಾ, ತುಂಗಭದ್ರಾ ಆರ್ಭಟಕ್ಕೆ ನಲುಗಿದ ರಾಯಚೂರು
Team Udayavani, Oct 24, 2019, 3:05 AM IST
ರಾಯಚೂರು: ಕೃಷ್ಣಾ, ತುಂಗಭದ್ರಾ ನದಿಗಳು ಮತ್ತೆ ಆರ್ಭಟಿಸುತ್ತಿದ್ದು, ನಾರಾಯಣಪುರ ಜಲಾಶಯದಿಂದ ಬುಧವಾರ 3.72 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಇದರಿಂದಾಗಿ ಹಲವು ಸೇತುವೆಗಳು ಜಲಾವೃತವಾಗಿದ್ದು, ಸುತ್ತಲ ಗ್ರಾಮಗಳ ಸಂಪರ್ಕ ಕಡಿದುಕೊಂಡಿವೆ. ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಕಟ್ಟೆಯವರೆಗೆ ನೀರು ಬಂದಿದೆ.
ಗೂಗಲ್ ದೇವಸ್ಥಾನ, ರಾಯಚೂರು ತಾಲೂಕಿನ ಕಾಡ್ಲೂರು ಗ್ರಾಮದ ಶ್ರೀ ಪ್ರಾಣದೇವರ ದೇವಸ್ಥಾನ ಹಾಗೂ ಗುರ್ಜಾಪುರ ಬ್ಯಾರೇಜ್ ಕಂ ಬ್ರಿಡ್ಜ್ ಮುಳುಗಡೆ ಹಂತಕ್ಕೆ ತಲುಪಿವೆ. ತುಂಗಭದ್ರಾ ಜಲಾಶಯದಿಂದ 1.80 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗಿದ್ದು, ತೀರ ಪ್ರದೇಶದ ಗ್ರಾಮಗಳಲ್ಲಿ ನೆರೆ ಭೀತಿ ಎದುರಾಗಿದೆ. ಸೋಮವಾರ ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿದ್ದ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಬಾಲಕನ ಶವ ಮುದುಗೋಟ ಗ್ರಾಮದ ಬಳಿ ಬುಧವಾರ ಪತ್ತೆಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.