![Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ](https://www.udayavani.com/wp-content/uploads/2024/07/u-415x256.jpg)
Ramayana ಕಲ್ಪನೆಯಲ್ಲ, ಇತಿಹಾಸ: ಮಂತ್ರಾಲಯ ಶ್ರೀ
ರಾಘವೇಶ್ವರ ಭಾರತೀ ಶ್ರೀಗಳ "ಭಾವರಾಮಾಯಣ ರಾಮಾವತರಣ' ಕೃತಿ ಅನಾವರಣ
Team Udayavani, Jun 30, 2024, 12:05 AM IST
![Ramayana ಕಲ್ಪನೆಯಲ್ಲ, ಇತಿಹಾಸ: ಮಂತ್ರಾಲಯ ಶ್ರೀ](https://www.udayavani.com/wp-content/uploads/2024/06/Ramayana-3-620x398.jpg)
ಬೆಂಗಳೂರು: ರಾಮಾಯಣ ಒಂದು ಧರ್ಮ, ಜಾತಿ ಅಥವಾ ವ್ಯಕ್ತಿಗಳಿಗೆ ಸೀಮಿತವಾದ ಗ್ರಂಥವಲ್ಲ. ರಾಮಾಯಣ ಎಂಬುದು ಕಲ್ಪನೆ ಅಲ್ಲ, ಇತಿಹಾಸವಾಗಿದೆ. ಆಧುನಿಕ ಯುಗದಲ್ಲೂ ಈ ಬಗ್ಗೆ ಶೋಧಿಸಬಹುದಾಗಿದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರ ಸ್ವಾಮೀಜಿ ಪ್ರತಿಪಾದಿಸಿದರು.
ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಮೂಲ ವಾಲ್ಮೀಕಿ ರಾಮಾಯಣದ ಸಮಗ್ರ ಭಾವವನ್ನು ಸೆರೆಹಿಡಿದಿರುವ “ಭಾವರಾಮಾಯಣ ರಾಮಾವತರಣ’ ಕೃತಿಯನ್ನು ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪಿಇಎಸ್ ವಿ.ವಿ. ಆವರಣದ ಸಭಾಂಗಣದಲ್ಲಿ ಅನಾವರಣಗೊಳಿಸಿ ಆಶೀರ್ವಚನ ನೀಡಿದರು.
ನಕಲಿ ರಾಮಾಯಣಗಳಿಂದ
ಮೂಲ ರಾಮಾಯಣಕ್ಕೆ ಧಕ್ಕೆ
ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಮಾತನಾಡಿ, ಈ ಜಗತ್ತಿನಲ್ಲಿ ವ್ಯಾಪಿಸಿರುವ ನಕಲಿ ರಾಮಾಯಣ, ಮೂಲ ರಾಮಾಯಣಕ್ಕೆ ಹಾಗೂ ವಾಲ್ಮೀಕಿ ರಾಮಾಯಣಕ್ಕೆ ಧಕ್ಕೆ ಉಂಟಾಗಿರುವುದು ಈ ಕೃತಿ ರಚಿಸಲು ನಮಗೆ ಪ್ರೇರಣೆ. ನಾವು ನಂಬಿಕೊಂಡಿರುವ ರಾಮಾಯಣವೇ ಬೇರೆ, ನೈಜವಾಗಿರುವುದೇ ಬೇರೆ. ಮೂಲ ರಾಮಾಯಣ ಜನರ ಮನಸ್ಸಿನಲ್ಲಿ ಉಳಿಯಬೇಕು ಎಂಬ ಉದ್ದೇಶದಿಂದ ಇದನ್ನು ಬರೆಯಲಾಗಿದೆ. ರಾಮಾಯಣ ಓದುವಾಗ ಸುಖ ಉಂಟಾಗಿ ಸಮಯ ಹೋಗುವುದು ಗೊತ್ತಾಗುವುದಿಲ್ಲ. ಮೂಲ ರಾಮಾಯಣ ಓದುತ್ತಾ ಹೋದರೆ, ಅದು ಶಿಕ್ಷಣ ಕೊಟ್ಟು ನಿಮ್ಮನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದು ವಿವರಿಸಿದರು.
ಏಮ್ ಹೈ ಕನ್ಸಲ್ಟಿಂಗ್ ಸಿಇಒ ಎನ್. ರವಿಶಂಕರ್ ಅವರು ಶ್ರೀ ರಾಘವೇಶ್ವರ ಸ್ವಾಮೀಜಿಗಳೊಂದಿಗೆ ಕೃತಿಯ ಕುರಿತು ಸಂವಾದ ನಡೆಸಿದರು.
108ಕ್ಕೂ ಹೆಚ್ಚು ಗಣ್ಯರಿಂದ ಬಿಡುಗಡೆ
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 108ಕ್ಕೂ ಹೆಚ್ಚು ಗಣ್ಯ ಸಾಧಕರು ಏಕಕಾಲದಲ್ಲಿ ಕೃತಿ ಲೋಕಾರ್ಪಣೆ ಮಾಡಿದ್ದು ವಿಶೇಷವೆನಿಸಿತ್ತು.
ಕೃತಿಯಲ್ಲಿ ರಾಮನ ಜನ್ಮದ ಬಗ್ಗೆ ತಿಳಿಸಲಾಗಿದೆ. ಶ್ರೀರಾಮನ ಜಾತಕದ ಬಗ್ಗೆ “ಜಗನ್ನಾಯಕನ ಜಾತಕ’ ಎಂಬ ಬಗ್ಗೆ ಮುಂದಿನ ಸಂಪುಟದಲ್ಲಿ ವಿವರಿಸಲಾಗಿದೆ. ಭಾವ ರಾಮಾಯಣ ಜತೆಗೆ ಅಜ್ಞಾತ ರಾಮಾಯಣ, ತತ್ತÌ ರಾಮಾಯಣದ ಬಗ್ಗೆಯೂ ಬರೆಯುವ ಆಕಾಂಕ್ಷೆ ಇದೆ.
-ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ,
ಶ್ರೀ ರಾಮಚಂದ್ರಾಪುರ ಮಠ
ಟಾಪ್ ನ್ಯೂಸ್
![Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ](https://www.udayavani.com/wp-content/uploads/2024/07/u-415x256.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Parappana Agrahara ಜೈಲಿನಲ್ಲಿ ಪುತ್ರ ಪ್ರಜ್ವಲ್ನನ್ನು ಭೇಟಿಯಾದ ಭವಾನಿ](https://www.udayavani.com/wp-content/uploads/2024/07/Bhavani-Revanna-150x90.jpg)
Parappana Agrahara ಜೈಲಿನಲ್ಲಿ ಪುತ್ರ ಪ್ರಜ್ವಲ್ನನ್ನು ಭೇಟಿಯಾದ ಭವಾನಿ
![Karnataka High Court; ಮಹಿಳೆಗೆ ಲೈಂಗಿಕ ದೌರ್ಜನ್ಯ ಆರೋಪ: ದೇವರಾಜೇಗೌಡಗೆ ಜಾಮೀನು](https://www.udayavani.com/wp-content/uploads/2024/07/Devarajegowda-150x97.jpg)
Karnataka High Court; ಮಹಿಳೆಗೆ ಲೈಂಗಿಕ ದೌರ್ಜನ್ಯ ಆರೋಪ: ದೇವರಾಜೇಗೌಡಗೆ ಜಾಮೀನು
![Actor Darshan ಭೇಟಿಯಾದ ಕುಟುಂಬ: ಇಡೀ ಕುಟುಂಬ ಕಂಡು ಕಣ್ಣೀರಿಟ್ಟ ದರ್ಶನ್](https://www.udayavani.com/wp-content/uploads/2024/07/actor-darshan-150x84.jpg)
Actor Darshan ಭೇಟಿಯಾದ ಕುಟುಂಬ: ಇಡೀ ಕುಟುಂಬ ಕಂಡು ಕಣ್ಣೀರಿಟ್ಟ ದರ್ಶನ್
![New Law; ಈಗಲೇ ಹೇಳುವುದು ಕಷ್ಟ: ಗೃಹ ಸಚಿವ](https://www.udayavani.com/wp-content/uploads/2024/07/home-minister-parameshwara-150x84.jpg)
New Law; ಈಗಲೇ ಹೇಳುವುದು ಕಷ್ಟ: ಗೃಹ ಸಚಿವ
![High Court ಅಲ್ಪಸಂಖ್ಯಾಕ ಶಾಲೆಗಳಿಗೆ ಆರ್ಟಿಇ ಸುತ್ತೋಲೆ: ಸರಕಾರಕ್ಕೆ ನೋಟಿಸ್](https://www.udayavani.com/wp-content/uploads/2024/07/HC-KAR-150x86.jpg)
High Court ಅಲ್ಪಸಂಖ್ಯಾಕ ಶಾಲೆಗಳಿಗೆ ಆರ್ಟಿಇ ಸುತ್ತೋಲೆ: ಸರಕಾರಕ್ಕೆ ನೋಟಿಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.