![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 27, 2018, 3:06 PM IST
ಬೆಂಗಳೂರು: ಜಾರಿ ಬಿದ್ದು ಕಾಲಿಗೆ ಫ್ರ್ಯಾಕ್ಚರ್ ಆದ ಕಾರಣ ನಟಿ ರಮ್ಯಾ ಅವರು ರೆಬೆಲ್ಸ್ಟಾರ್ ಅಂಬರೀಷ್ ಅವರ ಅಂತಿಮ ದರ್ಶನಕ್ಕೆ ಆಗಮಿಸಿಲ್ಲ ಎನ್ನುವ ಮೂಲಕ ಸಚಿವ ಡಿ.ಕೆ.ಶಿವಕುಮಾರ್ ಗೊಂದಲ ಮೂಡಿಸಿದ್ದು, ಆಕ್ರೋಶ ಇನ್ನಷ್ಟು ಹೆಚ್ಚಾಗುವಂತೆ ಮಾಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆಶಿ ರಮ್ಯಾ ಅವರಿಗೆ ನಾನು ಕರೆ ಮಾಡಿದ್ದೆ,ಅಂಕಲ್ ಬರ್ಲಿಕ್ಕೆ ಆಗುವುದಿಲ್ಲ. ಕಾಲಿಗೆ ಫ್ರ್ಯಾಕ್ಟರ್ ಆಗಿದೆ ಎಂದಿದ್ದರು. ಅವರಿಗೆ ನಡಿಯಲಿಕ್ಕೆ ಆಗುತ್ತಿರಲಿಲ್ಲ ಎಂದರು.
ಮಂಡ್ಯ ಸೇರಿದಂತೆ ರಾಜ್ಯಾಧ್ಯಂತ ಅಂಬರೀಷ್ ಅಭಿಮಾನಿಗಳು ರಮ್ಯಾ ವಿರುದ್ಧ ವ್ಯಾಪಕ ಆಕ್ರೋಶ ಹೊರ ಹಾಕಿದ್ದು, ಸಾಮಾಜಿಕ ತಾಣಗಳನ್ನು ಕಿಡಿ ಕಾರಿ ವ್ಯಾಪಕ ಟೀಕೆಗಳ ಪ್ರವಾಹ ಹರಿಯ ಬಿಟ್ಟಿದ್ದಾರೆ. ರಮ್ಯಾ ನಮ್ಮ ಪಾಲಿಗೆ ಇಂದು ಸತ್ತು ಹೋಗಿದ್ದಾರೆ ಎಂದು ಶ್ರದ್ದಾಂಜಲಿ ಸಲ್ಲಿಸಿ ಫ್ಲೆಕ್ಸ್ಗಳನ್ನೂ ಅಲ್ಲಲ್ಲಿ ಹಾಕಲಾಗಿದೆ. ಇನ್ನು ಕೆಲವರು ರಮ್ಯಾ ಸಂಸ್ಕಾರವೇ ಇಲ್ಲದ ಸೊಕ್ಕಿನ ರಾಣಿ ಎಂದು ಟೀಕೆ ಮಾಡಿದ್ದಾರೆ.
ರಮ್ಯಾ ಅವರು ಅಕ್ಟೋಬರ್ 19 ರಂದು ಇನ್ಸ್ಟಾಗ್ರಾಂ ನಲ್ಲಿ ಕಾಲಿನ ಪಾದಕ್ಕೆ ಚಿಕಿತ್ಸೆ ಪಡೆದ ಚಿತ್ರವೊಂದನ್ನು ಪೋಸ್ಟ್ ಮಾಡಿ ಅನಾರೋಗ್ಯಕ್ಕೀಡಾದ ಬಗ್ಗೆ ಹೇಳಿಕೊಂಡಿದ್ದರು. ಮೂಳೆಗಳಿಗೆ ಸಂಬಂಧಿಸಿದ ಆಸ್ಟಿಯೋಕ್ಲ್ಯಾಟೋಮಾ ಎಂಬ ಕಾಯಿಲೆಯಿಂದ ನಾನು ಬಳಲುತ್ತಿದ್ದು, ಕೊಂಚ ತಡ ಮಾಡಿದರೆ ಕ್ಯಾನ್ಸರ್ಗೆ ಗುರಿಯಾಗಬೇಕಿತ್ತು ಎಂದು ಹೇಳಿಕೊಂಡಿದ್ದರು.ಇದೇ ಕಾರಣದಿಂದ ಅವರು ಆಗಮಿಸಿಲ್ಲ ಎಂದು ಅಂದಾಜಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.