Savarkar ಗೋ ಹ*ತ್ಯೆಯ ಪರವಾಗಿದ್ದರು,ಜಿನ್ನಾ ಹಂದಿ ಮಾಂಸ ಸೇವಿಸಿದ್ದರು: ದಿನೇಶ್ ಗುಂಡೂರಾವ್

ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ .. ಸಮರ್ಥನೆಗಿಳಿದ ಕಾಂಗ್ರೆಸ್.. ವಿವಾದಕ್ಕೆ ಕಾರಣವಾದ ಹೇಳಿಕೆಗಳೇನು?

Team Udayavani, Oct 3, 2024, 5:21 PM IST

1-dinnu

ಬೆಂಗಳೂರು: ಸಾವರ್ಕರ್ ಮತ್ತು ಮುಹಮ್ಮದ್ ಅಲಿ ಜಿನ್ನಾ ಅವರ ಕುರಿತು ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ಅವರು ಗಾಂಧಿ ಜಯಂತಿಯಂದು ನೀಡಿದ ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದು, ಬಿಜೆಪಿ ತೀವ್ರ ಆಕ್ರೋಶ ಹೊರ ಹಾಕಿದ್ದು ಕಾಂಗ್ರೆಸ್ ಸಮರ್ಥನೆ ಮಾಡಿಕೊಂಡಿದೆ.

ಅಕ್ಟೋಬರ್ 2 ರಂದು “ಗಾಂಧಿ ಅಸಾಸಿನ್: ದಿ ಮೇಕಿಂಗ್ ಆಫ್ ನಾಥುರಾಮ್ ಗೋಡ್ಸೆ & ಹಿಸ್ ಐಡಿಯಾ ಆಫ್ ಇಂಡಿಯಾ” ದ ಕನ್ನಡ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ “ಸಾವರ್ಕರ್ ಗೋಹತ್ಯೆಯ ವಿರೋಧಿಯಾಗಿರಲಿಲ್ಲ. ಅವರು ಚಿತ್ಪಾವನ ಬ್ರಾಹ್ಮಣರಾಗಿದ್ದರೂ ಮಾಂಸಾಹಾರಿಯಾಗಿದ್ದರು. ಅವರು ಆಧುನಿಕತಾವಾದಿಯಾಗಿದ್ದರು. ಇದು ಮೂಲಭೂತ ಚಿಂತನೆಯಾಗಿತ್ತು. ಗೋ ಮಾಂಸವನ್ನು ತಿನ್ನುತ್ತಿದ್ದರು ಮತ್ತು ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದರು. ಆದರೆ ಮಾಹಾತ್ಮ ಗಾಂಧೀಜಿಯವರು ಸಸ್ಯಾಹಾರಿಯಾಗಿದ್ದರು ಮತ್ತು ಅವರಿಗೆ ಹಿಂದೂ ಧರ್ಮದಲ್ಲಿ ಅಪಾರ ನಂಬಿಕೆ ಇತ್ತು. ಆದರೆ ಅವರ ಕಾರ್ಯಗಳು ವಿಭಿನ್ನವಾಗಿತ್ತು, ಅವರು ಪ್ರಜಾಪ್ರಭುತ್ವದ ವ್ಯಕ್ತಿ” ಎಂದು ಹೇಳಿಕೆ ನೀಡಿದ್ದರು.

ಮಾತ್ರವಲ್ಲದೆ, ”ಜಿನ್ನಾ ಒಬ್ಬ ಕಠಿನ ಇಸ್ಲಾಮಿಸ್ಟ್ ನಂಬಿಕೆಯುಳ್ಳವರಾಗಿದ್ದರು. ಅವರು ವೈನ್ ಸೇವಿಸುತ್ತಿದ್ದರು ಮತ್ತು ಅವರು ಬಹುಶಃ ಹಂದಿಮಾಂಸವನ್ನು ಸೇವಿಸಿದ್ದಾರೆ ಎಂದು ಜನರು ಹೇಳುತ್ತಾರೆ. ಆದರೆ ಅವರು ಮುಸ್ಲಿಂ ಐಕಾನ್ ಆದರು. ಅವರು ಮೂಲಭೂತವಾದಿಯಾಗಿರಲಿಲ್ಲ ಆದರೆ ಸಾವರ್ಕರ್ ಮೂಲಭೂತವಾದಿ. ಜಿನ್ನಾ ಅವರು ರಾಷ್ಟ್ರಪತಿ, ಪ್ರಧಾನ ಮಂತ್ರಿಯಾಗಲು ಬಯಸಿದ್ದರಿಂದ ಅವರ ತತ್ವಶಾಸ್ತ್ರದಲ್ಲಿ ರಾಜಿ ಮಾಡಿಕೊಂಡರು” ಎಂದು ಹೇಳಿದರು.

”ಜಿನ್ನಾ ಅವರದು ಸೆಕ್ಯುಲರ್ ಫಿಲಾಸಫಿ. ಈ ರೀತಿಯ ತತ್ವಶಾಸ್ತ್ರ/ಮೂಲಭೂತವಾದವನ್ನು ಬೆಳೆಸುತ್ತಿರುವ ಆರ್ ಎಸ್ ಎಸ್ ಮತ್ತು ಹಿಂದೂ ಮಹಾಸಭಾದ ವಿರುದ್ಧ ನೀವು ಹೋರಾಡಬೇಕಾದರೆ, ನಾವು ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಇದಕ್ಕೆ ಉತ್ತರಿಸಬೇಕಾಗಿದೆ. ಒಂದೆಡೆ ಸಾರ್ವಜನಿಕರಲ್ಲಿ ಅರಿವು ಇದೆ ಆದರೆ ನಾವು ಹೇಗೆ ವರ್ತಿಸುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಸಾಂಪ್ರದಾಯಿಕವಾಗಿರುವ ಅನೇಕ ಜನರಿದ್ದಾರೆ ಆದರೆ ಮೂಲಭೂತವಾದವು ಅವರ ತತ್ವ ಎಂದು ಅರ್ಥವಲ್ಲ” ಎಂದರು.

ಬಿಜೆಪಿ ಆಕ್ರೋಶ
ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ”ಸನ್ಮಾನ್ಯ ದಿನೇಶ್ ಗುಂಡೂರಾವ್ ಅವರೆ, ಬ್ರಾಹ್ಮಣ ಸಮಾಜದ ವೀರ ಸಾವರ್ಕರ್‌ ಅವರು ಗೋಮಾಂಸ ಸೇವಿಸುತ್ತಿದ್ದರು ಎಂದು ನಿಮಗೆ ಬ್ರಾಹ್ಮಣ ಸಮಾಜದ ನಿಮ್ಮ ತಂದೆ ಗುಂಡೂರಾವ್‌ ಹೇಳಿದ್ದರೊ ಅಥವಾ ಮುಸ್ಲಿಂ ಸಮಾಜದ ನಿಮ್ಮ ಪತ್ನಿ ತಬಸ್ಸುಮ್‌ ಅವರು ಹೇಳಿದ್ದರೊ..??” ಎಂದು ಎಕ್ಸ್ ಪೋಸ್ಟ್ ಮೂಲಕ ಪ್ರಶ್ನಿಸಿತ್ತು.

ಬಿಜೆಪಿಗೆ ತಿರುಗೇಟು ನೀಡಿರುವ ದಿನೇಶ್ ಗುಂಡೂರಾವ್ ವೀರ ಸಾವರ್ಕರ್ ಚಿತ್ರದ ದೃಶ್ಯವೊಂದರ ತುಣುಕನ್ನು ಪೋಸ್ಟ್ ಮಾಡಿದ್ದು, ‘ಸಾವರ್ಕರ್ ಒಬ್ಬ ನಾಸ್ತಿಕ, ಮಾಂಸಾಹಾರಿ “Sorry”…ಇದು ನಾನು ಹೇಳಿದ್ದಲ್ಲ. ನನ್ನ ತಂದೆಯಾಗಲಿ, ನನ್ನ ಪತ್ನಿಯಾಗಲಿ ಹೇಳಿದ್ದಲ್ಲ. ಇದನ್ನು ಹೇಳಿದ್ದು ಸ್ವತಃ ಸಾವರ್ಕರ್ ಅವರೇ! Now, live with it..” ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಸಮರ್ಥನೆ

ಕಾಂಗ್ರೆಸ್ ವಕ್ತಾರ ನಾಗರಾಜ್ ಯಾದವ್ ಪ್ರತಿಕ್ರಿಯಿಸಿ ”ಕಾಂಗ್ರೆಸ್ ಮತ್ತು ದಿನೇಶ್ ಗುಂಡೂರಾವ್ ಎಂದಿಗೂ ಯಾರ ವಿರುದ್ಧವೂ ವೈಯಕ್ತಿಕ ಟೀಕೆಗಳನ್ನು ಮಾಡುವುದಿಲ್ಲ. ಅವರು ದೇಶದ ಜಾತ್ಯತೀತ ತತ್ತ್ವ ನಂಬುತ್ತಾರೆ. ರಾಜಕೀಯವಾಗಿ ಉಳಿಯಲು ಬದುಕಲು ಬಿಜೆಪಿ ಹೇಳಿಕೆ ನೀಡುತ್ತಿದೆ. ಬಿಜೆಪಿಗೆ ಸಾವರ್ಕರ್ ಅವರ ಅಜೆಂಡಾ ಮತ್ತು ನಮಗೆ ಮಹಾತ್ಮ ಗಾಂಧಿ ಅವರ ಅಜೆಂಡಾ. ಬಿಜೆಪಿಯವರು ದಿನೇಶ್ ಗುಂಡೂರಾವ್ ಅವರ ತಪ್ಪು ಹುಡುಕಲು ಬಯಸುತ್ತಾರೆ. ಈ ದೇಶ ಎಲ್ಲರಿಗೂ ಸೇರಿದ್ದು, ದೇಶ ಜಾತಿ ಮತ್ತು ಧರ್ಮವನ್ನು ಮೀರಿದ ದೇಶ, ನಮ್ಮ ವೈಯಕ್ತಿಕ ಅಭ್ಯಾಸಗಳನ್ನು ಲೆಕ್ಕಿಸದೆ ನಾವು ಭಾರತೀಯರು ಎಂದು ಅವರು ಹೇಳಲು ಪ್ರಯತ್ನಿಸುತ್ತಿದ್ದರು” ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಟಾಪ್ ನ್ಯೂಸ್

1-redddi

Ballari;13 ವರ್ಷದ ಬಳಿಕ ಜನಾರ್ದನ ರೆಡ್ಡಿ ಗ್ರ್ಯಾಂಡ್ ಎಂಟ್ರಿ: ಅಭಿಮಾನಿಗಳ ಸಂಭ್ರಮಾಚರಣೆ

Sagara: ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಅಗತ್ಯ ನ್ಯಾಯ; ಮಧು ಬಂಗಾರಪ್ಪ ಭರವಸೆ

Sagara: ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಅಗತ್ಯ ನ್ಯಾಯ ಒದಗಿಸಲು ಬದ್ಧ; ಮಧು ಬಂಗಾರಪ್ಪ

Udupi: ಉಚ್ಚಿಲ ದಸರಾ 2024ಕ್ಕೆ ವಿದ್ಯುಕ್ತ ಚಾಲನೆ

Udupi: ಉಚ್ಚಿಲ ದಸರಾ 2024ಕ್ಕೆ ವಿದ್ಯುಕ್ತ ಚಾಲನೆ

balachandra

Corruption;ರಾಜೀನಾಮೆ ಕೊಡಬೇಕೆಂಬ ಬೇಡಿಕೆಗಳಿಗೆ ಈಗ ಬೆಲೆ ಕಡಿಮೆ: ಬಾಲಚಂದ್ರ ಜಾರಕಿಹೊಳಿ

Mahindra Thar ROXX: 60 ನಿಮಿಷಗಳಲ್ಲಿ 1,76,218 ಮಹೀಂದ್ರಾ ಥಾರ್‌ ರೊಕ್ಸ್‌ ಬುಕ್ಕಿಂಗ್!

Mahindra Thar ROXX: 60 ನಿಮಿಷಗಳಲ್ಲಿ 1,76,218 ಮಹೀಂದ್ರಾ ಥಾರ್‌ ರೊಕ್ಸ್‌ ಬುಕ್ಕಿಂಗ್!

1-dde

Mysore Dasara ವೇದಿಕೆಯಲ್ಲಿ ರಾಜಕೀಯ..; ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ

121

Border 2: ಸನ್ನಿ ಡಿಯೋಲ್‌ ʼಬಾರ್ಡರ್-2‌ʼಗೆ ʼಫೌಜಿʼಯಾಗಿ ಬಂದ ಸುನಿಲ್‌ ಶೆಟ್ಟಿ ಪುತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gold

Dharwad: ಖಾಸಗಿ ಬಸ್‌ನಲ್ಲಿ 77 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ

1-redddi

Ballari;13 ವರ್ಷದ ಬಳಿಕ ಜನಾರ್ದನ ರೆಡ್ಡಿ ಗ್ರ್ಯಾಂಡ್ ಎಂಟ್ರಿ: ಅಭಿಮಾನಿಗಳ ಸಂಭ್ರಮಾಚರಣೆ

balachandra

Corruption;ರಾಜೀನಾಮೆ ಕೊಡಬೇಕೆಂಬ ಬೇಡಿಕೆಗಳಿಗೆ ಈಗ ಬೆಲೆ ಕಡಿಮೆ: ಬಾಲಚಂದ್ರ ಜಾರಕಿಹೊಳಿ

1-dde

Mysore Dasara ವೇದಿಕೆಯಲ್ಲಿ ರಾಜಕೀಯ..; ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ

Davanagere: ವಿದ್ಯುತ್ ಪರಿವರ್ತಕ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಮೃತ್ಯು

Davanagere: ವಿದ್ಯುತ್ ಪರಿವರ್ತಕ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಮೃತ್ಯು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mangaluru: ಕಿಶೋರ್‌ ಕುಮಾರ್‌, ರಾಜು ಪೂಜಾರಿ ನಾಮಪತ್ರ ಸಲ್ಲಿಕೆ

Legislative Council By-election: ಕಿಶೋರ್‌ ಕುಮಾರ್‌, ರಾಜು ಪೂಜಾರಿ ನಾಮಪತ್ರ ಸಲ್ಲಿಕೆ

gold

Dharwad: ಖಾಸಗಿ ಬಸ್‌ನಲ್ಲಿ 77 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ

1

Gangolli: ನಿಂದನೆ, ಜೀವ ಬೆದರಿಕೆ: ದೂರು

Zebra Movie:  ಡಾಲಿ ‘ಜೀಬ್ರಾ’ಗೆ ಶಿವಣ್ಣ ಸಾಥ್‌

Zebra Movie: ಡಾಲಿ ‘ಜೀಬ್ರಾ’ಗೆ ಶಿವಣ್ಣ ಸಾಥ್‌

1-redddi

Ballari;13 ವರ್ಷದ ಬಳಿಕ ಜನಾರ್ದನ ರೆಡ್ಡಿ ಗ್ರ್ಯಾಂಡ್ ಎಂಟ್ರಿ: ಅಭಿಮಾನಿಗಳ ಸಂಭ್ರಮಾಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.