ಶಾಲೆ ದಿನಕ್ಕೊಂದು ಧ್ವನಿ: ಕೋವಿಡ್ ದೂರವಾಗಲಿ, ಅನಂತರ ಶಾಲೆ ಆರಂಭವಾಗಲಿ

ಸೋಂಕು ಶೂನ್ಯವಾಗುವ ತನಕ ತರಗತಿ ಬೇಡ; ಸರಕಾರ ಅನಗತ್ಯ ಗೊಂದಲ ಸೃಷ್ಟಿಸದಿರಲಿ

Team Udayavani, Jun 10, 2020, 7:10 AM IST

ಕೋವಿಡ್ ದೂರವಾಗಲಿ, ಅನಂತರ ಶಾಲೆ ಆರಂಭವಾಗಲಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬೆಂಗಳೂರು: ಕೋವಿಡ್ ಶೂನ್ಯಕ್ಕೆ ಬರುವವರೆಗೂ ಹತ್ತನೇ ತರಗತಿಯವರೆಗಿನ ತರಗತಿ ಆರಂಭಿಸುವುದು ಸಲ್ಲದು. ಸರಕಾರ ಅನಗತ್ಯ ಗೊಂದಲ ಸೃಷ್ಟಿಸುವ ಬದಲು ದೃಢ ನಿಲುವು ಪ್ರಕಟಿಸಬೇಕಿದೆ.

ತರಾತುರಿಯಲ್ಲಿ ಶಾಲೆ ಆರಂಭಿಸಿದರೆ ಮುಂದಾಗುವ ಸಮಸ್ಯೆ- ಸಂಕಷ್ಟಗಳಿಗೆ ಸರಕಾರವೇ ಹೊಣೆಯಾಗಬೇಕಾದೀತು.

ಶಾಲೆಗಳ ಆರಂಭಕ್ಕೆ ಅವಸರದ, ಗೊಂದಲದ ನಿರ್ಧಾರ- ಚಿಂತನೆಗಳಿಗೆ ಮುಂದಾಗುವುದು ಸರಿಯಲ್ಲ ಎನ್ನುವುದು ನನ್ನ ಅನಿಸಿಕೆ. ಶಾಲೆಗಳು 2-3 ತಿಂಗಳು ತಡವಾಗಿ ಆರಂಭವಾದರೆ ಜಗತ್ತು ಮುಳುಗುವುದಿಲ್ಲ. ಶೈಕ್ಷಣಿಕ ವರ್ಷದ ಪಠ್ಯ ಸರಿದೂಗಿಸಲು ಹಲವಾರು ಮಾರ್ಗಗಳಿವೆ. ಮುಖ್ಯವಾಗಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸರಕಾರವು ವಾಸ್ತವಿಕ ನೆಲೆಗಟ್ಟಿನಲ್ಲಿ ಯೋಚಿಸಿ ಸ್ಪಷ್ಟ ನಿರ್ಧಾರಕ್ಕೆ ಬರುವುದು ಸೂಕ್ತ.

ಅಭಿಪ್ರಾಯ ಸಂಗ್ರಹ ಬೇಕಿಲ್ಲ
ಶಾಲೆಗಳ ಆರಂಭದ ವಿಚಾರದಲ್ಲಿ ಹೆತ್ತವರು, ಶಾಲಾಭಿವೃದ್ಧಿ ಸಮಿತಿಗಳ ಸಭೆ ಕರೆದು ಅಭಿಪ್ರಾಯ ಸಂಗ್ರಹದಂತಹ ಕಾರ್ಯ ಕೈಬಿಡುವುದೇ ಒಳಿತು. ಮಕ್ಕಳ ಆರೋಗ್ಯ ದೃಷ್ಟಿಯಿಂದ ಸರಕಾರ ದೃಢ ನಿರ್ಧಾರ ಪ್ರಕಟಿಸಿದರೆ ಯಾವ ಹೆತ್ತವರು ತಾನೇ ಬೇಡ ಎನ್ನುತ್ತಾರೆ?

ಮಕ್ಕಳ ನಿಯಂತ್ರಣ ಸಾಧ್ಯವೇ?
ಸಣ್ಣ ಮಕ್ಕಳು ಒಂದೆಡೆಯೇ ಕುಳಿತಿರಬಲ್ಲರೇ? ಸಾಮಾಜಿಕ ಅಂತರ ಪಾಲನೆಯಂತಹ ನಿಯಮ ಪಾಲಿಸಲು ಅವರಿಂದ ಸಾಧ್ಯವೇ? ನನ್ನ ನಿಲುವು ಇಷ್ಟೇ – ಅನುಭವಿಗಳನ್ನು ಕರೆದು ಮಾರ್ಗದರ್ಶನ ಪಡೆಯಲಿ, ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ 10ನೇ ತರಗತಿಯವರೆಗೆ ಶಾಲೆಗಳ ಆರಂಭ ಇಲ್ಲ ಎಂಬ ದೃಢ ನಿಲುವನ್ನು ಸರಕಾರ ಸ್ಪಷ್ಟಪಡಿಸಲಿ.

ಸಾರಿಗೆ ವ್ಯವಸ್ಥೆ ಹೇಗೆ?
ಮಕ್ಕಳನ್ನು ಶಾಲೆಗೆ ಕರೆತರಲು ಶಾಲಾ ಆಡಳಿತ ಮಂಡಳಿಗಳು ಬಸ್‌, ವ್ಯಾನ್‌ ಇತ್ಯಾದಿ ವಾಹನ ವ್ಯವಸ್ಥೆ ಮಾಡಿರುತ್ತವೆ. ಹಲವರು ಆಟೋ ರಿಕ್ಷಾ, ವ್ಯಾನ್‌ಗಳಲ್ಲಿ ಕಳುಹಿಸಿಕೊಡುತ್ತಾರೆ. ಒಂದು ಆಟೋ ರಿಕ್ಷಾದಲ್ಲಿ 10-15 ಮಕ್ಕಳನ್ನು ಕರೆದೊಯ್ಯುತ್ತಾರೆ ಎನ್ನುವುದು ವಾಸ್ತವ. ಒಂದು ವೇಳೆ ಈ ವಾಹನಗಳ ಚಾಲಕರಿಗೋ ಶಾಲೆಯ ಆಯಾ ಗಳಿಗೋ ಸೋಂಕಿನ ಲಕ್ಷಣ ಕಂಡು ಬಂದರೆ, ಯಾವುದಾದರೂ ಒಂದು ಮಗು ಸೋಂಕು ಪೀಡಿತವಾದರೆ ಇಡೀ ಶಾಲೆಯ ಗತಿ ಏನು? ಇದನ್ನೆಲ್ಲ ಸರಕಾರ ಚಿಂತಿಸಿದೆಯೇ.

ಮಾರ್ಗೋಪಾಯ ಏನು?
ಸೆಪ್ಟಂಬರ್‌ನಿಂದ ಶಾಲೆ ಆರಂಭಿಸಿದರೂ ವಿಳಂಬ ಸರಿದೂಗಿಸಲು ಹಲವು ಮಾರ್ಗಗಳಿವೆ. ಅವುಗಳ ಬಗ್ಗೆ ಸರಕಾರ ಚಿಂತಿಸಲಿ.

– ತಿಂಗಳಲ್ಲಿ ಒಂದು ಶನಿವಾರ ಬಿಟ್ಟು ಉಳಿದ ಎಲ್ಲ ಶನಿವಾರ ಪೂರ್ಣ ಶಾಲೆ ನಡೆಯಲಿ

– ಜಯಂತಿಗಳ ರಜೆ, ಅಕ್ಟೋಬರ್‌ ರಜೆ ರದ್ದುಪಡಿಸಿ

– ಪಠ್ಯಗಳನ್ನು 20 ಚಾಪ್ಟರ್‌ ಬದಲು 10ಕ್ಕೆ ಇಳಿಸಿ

– ವಿಶೇಷ ತರಗತಿ ಆಯೋಜಿಸಿ

– ಶೈಕ್ಷಣಿಕ ವರ್ಷವನ್ನು ಮಾರ್ಚ್‌ – ಎಪ್ರಿಲ್‌ ಬದಲು ಮೇ ಮಧ್ಯದವರೆಗೆ ಮುಂದುವರಿಸಿ

ಎಸೆಸೆಲ್ಸಿ ಪರೀಕ್ಷೆ ಇರಲಿ
ಸದ್ಯದ ಸ್ಥಿತಿಯಲ್ಲಿ ಶಿಕ್ಷಕರು ಶಾಲೆಗೆ ಹೋಗಿ ಮಾಡುವುದೇನು ಎಂಬುದರ ಬಗ್ಗೆಯೂ ಸರಕಾರ ಚಿಂತಿಸಲಿ. ಆದರೆ ಎಸೆಸೆಲ್ಸಿ ಪರೀಕ್ಷೆ ಇಲ್ಲದೆ ಪಾಸು ಮಾಡುವ ಪದ್ಧತಿ ಸರಿಯಲ್ಲ.

– ಬಸವರಾಜ ಹೊರಟ್ಟಿ , ಮಾಜಿ ಶಿಕ್ಷಣ ಸಚಿವರು

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.