ಕೋವಿಡ್ ಉಪಕರಣ ಖರೀದಿಯಲ್ಲಿ ರಾಜ್ಯ ಸರ್ಕಾರದಿಂದ 2000 ಕೋಟಿ ರೂ ಅವ್ಯವಹಾರ: ಸಿದ್ದರಾಮಯ್ಯ

ವೆಂಟಿಲೇಟರ್, ಪಿಪಿಇ ಕಿಟ್, ಸ್ಯಾನಿಟೈಸರ್ ಎಲ್ಲದರಲ್ಲೂ ನಡೆದಿದೆ ಅವ್ಯವಹಾರ

Team Udayavani, Jul 23, 2020, 1:45 PM IST

ಕೋವಿಡ್ ಉಪಕರಣ ಖರೀದಿಯಲ್ಲಿ ರಾಜ್ಯ ಸರ್ಕಾರದಿಂದ 2000 ಕೋಟಿ ರೂ ಅವ್ಯವಹಾರ: ಸಿದ್ದರಾಮಯ್ಯ

ಬೆಂಗಳೂರು: ಕೋವಿಡ್-19 ಚಿಕಿತ್ಸಾ ಉಪಕರಣಗಳ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸಚಿವರು ಮತ್ತು ಅಧಿಕಾರಿಗಳು 2000 ಕೋಟಿ ರೂ ತಮ್ಮ ಜೇಬಿಗಿಳಿಸಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ವಿಷಯದಲ್ಲಿ ಸರ್ಕಾರ ಮಾಡುತ್ತಿರುವ ಜನದ್ರೋಹವನ್ನು ಜನರಿಗೆ ತಿಳಿಸದೇ ಹೋದರೆ ನಾವು ಜನ ದ್ರೋಹಿಗಳಾಗುತ್ತೇವೆ ಎಂದರು.

ಡಿಸಿಎಂ ಅಶ್ವಥ್ ನಾರಾಯಣ ಹಾಗೂ ಶ್ರೀರಾಮುಲು 323 ಕೋಟಿ ರೂ. ಮಾತ್ರ ನಾವು ಖರ್ಚು ಮಾಡಿದ್ದೇವೆ ಎಂದು ಹೇಳುತ್ತಾರೆ. ಇನ್ನೊಬ್ಬ ಮಂತ್ರಿ 33 ಕೋಟಿ ರೂ. ಮಾತ್ರ ಅಂತ ಹೇಳುತ್ತಾರೆ. ನನ್ನ ಪ್ರಕಾರ ಆರೋಗ್ಯ ಇಲಾಖೆ 700 ಕೋಟಿ ರೂ, ಬಿಬಿಎಂಪಿ 200 ಕೋಟಿ ರೂ., ಜಿಲ್ಲಾಡಳಿತ 700 ಕೋಟಿ ರೂ., ಕಾರ್ಮಿಕ ಇಲಾಖೆ 1000 ಕೋಟಿ ರೂ., ವೈದ್ಯಕೀಯ ಇಲಾಖೆ, 815 ಕೋಟಿ ರೂ., ಹಿಂದುಳಿದ ವಿಭಾಗ ಮತ್ತು ಅಲ್ಪ ಸಂಖ್ಯಾತ ಇಲಾಖೆ 1000 ಕೋಟಿ ರೂ. ಖರ್ಚು ಮಾಡಿದ್ದೇವೆ ಅಂತ ಅವರೆ ಹೇಳಿದ್ದಾರೆ.

ಆಹಾರ ಇಲಾಖೆ, ಮಹಿಳಾ ಮಕ್ಕಳ ಇಲಾಖೆ 500 ಕೋಟಿ ರೂ., ಕೊವಿಡ್ ಆರೈಕೆ ಕೇಂದ್ರಕ್ಕೆ 160 ಕೋಟಿ ರೂ., ಕೇಂದ್ರ ಖರಿದಿಸಿದ್ದು 200 ಕೋಟಿ, ಒಟ್ಟು 4160 ಕೋಟಿ ರೂ. ಖರ್ಚು ಮಾಡಿದ್ದಾರೆ. ಇವುಗಳನ್ನು ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಳ ಮಾಡಿ ಖರಿದಿಸಿದ್ದಾರೆ. ಇದರಲ್ಲಿ 2000 ಕೋಟಿ ರೂ. ಅಧಿಕಾರಿಗಳು ಹಾಗೂ ಸಚಿವರು ಜೇಬಿಗೆ ಇಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಇದರಲ್ಲಿ ಸುಳ್ಳು ಹೇಳಿರುವುದು ಸರಕಾರ ನಡೆಸುತ್ತಿರುವ ನೀವುಗಳು. ನೀವು ಸರಿಯಾದ ಮಾಹಿತಿ ನೀಡಬೇಕು. ಸರ್ಕಾರ ಖರ್ಚು ಮಾಡುವ ಒಂದೊಂದು ರೂ. ಲೆಕ್ಕ ಕೊಡಬೇಕು. ಲೆಕ್ಕ ಕೇಳುವ ಕೆಲಸ ನಾವು ಮಾಡುತ್ತೇವೆ ಎಂದು ಸರ್ಕಾರಕ್ಕೆ ತಿವಿದರು.

ದೇಶದಲ್ಲಿ ಲಾಕ್ ಡೌನ್ ಮಾಡಿದಾಗ ಕೋವಿಡ್ ಸಂಖ್ಯೆ ಕಡಿಮೆ ಇತ್ತು  ಈಗ ರಾಜ್ಯದಲ್ಲಿ 50 ಸಾವಿರ ಪ್ರಕರಣ ದಾಖಲಾಗಿವೆ. 1500 ಸಾವಾಗಿದೆ. ಇಷ್ಟೆಲ್ಲ ಖರೀದಿ ಮಾಡಿ, ಏನು ಸಾಧನೆ ಮಾಡಿದಿರಿ. ಇದಕ್ಕೆ ನಾವು ನಿಮಗೆ ಸಹಕಾರ ಕೊಡಬೇಕಾ, ಪ್ರತಿಪಕ್ಷವಾಗಿ ನಾವು ನಮ್ಮ ಕೆಲಸ ಮಾಡಬಾರದೇ ಎಂದು ಪ್ರಶ್ನಿಸಿದರು.

ಪ್ರಧಾನಿ 21 ದಿನ ಸಹಿಸಿಕೊಳ್ಳಿ ಎಲ್ಲ ಸರಿಹೋಗುತ್ತದೆ ಎಂದು ಹೇಳಿದ್ದೀರಿ,120 ದಿನ ಆಗಿದೆ. ಈಗ 12 ಲಕ್ಷ ಪ್ರಕರಣಗಳಾಗಿವೆ ಇದು ನಿಮ್ಮ ಸಾಧನೆಯೇ ವೈಫಲ್ಯವೇ, ಪ್ರಧಾನಿಯವರು ಉತ್ತರಿಸಲಿ ಆಗ್ರಹಿಸಿದರು.

ರಾಜ್ಯದ ಇತಿಹಾಸದಲ್ಲಿ ಇಂತಹ ಭ್ರಷ್ಟ ಸರ್ಕಾರ ಬಂದಿರಲಿಲ್ಲ. ವಲಸೆ ಕಾರ್ಮಿಕರು ರಾಜ್ಯದಲ್ಲಿ ನರಕ ಯಾತನೆ ಅನುಭವಿಸಿದ್ದಾರೆ. ಕಾರ್ಮಿಕರಿಗೆ ಮೂಸಂಬಿ ಹಣ್ಣು ಕೊಟ್ಟಿರುವುದಾಗಿ ಹೇಳಿದ್ದಾರೆ. ಈಗ ಮೂಸಂಬಿ ಸೀಸನ್ ಅಲ್ಲಾ ಎಲ್ಲಿಂದ ಮೂಸಂಬಿ ತಂದಿದ್ದರು ಎಲ್ಲವೂ ಸುಳ್ಳು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಆರೋಗ್ಯ ಇಲಾಖೆಗೆ ಈ ವರ್ಷ 1437 ಕೋಟಿ ಬಿಡುಗಡೆ ಮಾಡಿದ್ದಾರೆ. ಆದರೆ, 3322 ಕೋಟಿ ಖರ್ಚು ಮಾಡಿದ್ದಾರೆ. ರಾಮುಲು ಅವರು ತಮ್ಮ ಇಲಾಖೆಯಲ್ಲಿ ಎಷ್ಟು ಹಣ ಇದೆ, ಎಷ್ಟು ಖರ್ಚಾಗಿದೆ ಎಂದಾದರೂ ತಿಳಿದುಕೊಳ್ಳಬೇಕಲ್ಲ ಎಂದರು.

ಕೇಂದ್ರ ಸರ್ಕಾರ 50 ಸಾವಿರ ವೆಂಟಿಲೇಟರ್ ಖರೀದಿ ಮಾಡಿದೆ. ಪ್ರತಿ ವೆಂಟಿಲೇಟರ್ ಬೆಲೆ 4 ಲಕ್ಷ ಕೊಟ್ಟು ಖರಿದಿಸಿದೆ. ತಮಿಳುನಾಡು 100 ವೆಂಟಿಲೇಟರ್ ಖರಿದಿಸಿದ್ದಾರೆ. 4.78 ಲಕ್ಷ ಒಂದಕ್ಕೆ ಖರಿದಿಸಿದ್ದಾರೆ.  ರಾಜ್ಯ ಸರ್ಕಾರ ಒಂದು ವೆಂಟಿಲೇಟರ್ 5.60 ಲಕ್ಷ. ಎರಡನೇ ಬಾರಿ 12 ಲಕ್ಷ ಕ್ಕೆ ಖದಿರಿಸಿದ್ದಾರೆ. ಅದೇ ತಿಂಗಳು 18.20 ಲಕ್ಷಕ್ಕೆ ಖರಿರೀದಿ ಮಾಡಿದ್ದಾರೆ. ಈ ಮಾಹಿತಿಯನ್ನು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್ ನೀಡಿದ್ದಾರೆ. ಇದನ್ನು ಭ್ರಷ್ಟಾಚಾರದ ವಾಸನೆ ಬರುತ್ತಿದೆ ಅನ್ನೋದನ್ನು ಸುವಾಸನೆ ಬರುತ್ತಿದೆ ಎಂದು ಕರಿಯಬೇಕಾ ಎಂದು ಟೀಕಿಸಿದರು.

ಪಿಪಿಇ ಕಿಟ್ ಖರೀದಿ ಅವ್ಯವಹಾರದ ಬಗ್ಗೆ ಹೇಳಿದ ಅವರು, ರಾಜ್ಯ ಸರ್ಕಾರ 9.65 ಲಕ್ಷ ಪಿಪಿಇ ಕಿಟ್ ಖರೀದಿಸಿದ್ದಾರೆ. ಮಾರುಕಟ್ಟೆಯಲ್ಲಿ ಪಿಪಿಇ ಕಿಟ್ ಗೆ 330 ರೂ ಬೆಲೆಯಿದೆ. ಮಹಾರಾಷ್ಟ್ರದ ಫ್ಲಾಸ್ಕ್ ಸರ್ಜಿ ಅನ್ನುವ ಕಂಪನಿಯಿಂದ 3.5 ಲಕ್ಷ ಖರೀದಿಸಿದ್ದಾರೆ. ಇವು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ವೈದ್ಯರು ಪ್ರತಿಭಟನೆ ನಡೆಸಿದರು. ಅದರಲ್ಲಿ 1.25 ಲಕ್ಷ ವಾಪಸ್ ಕಳುಹಿಸಿದ್ದಾರೆ. ಪ್ರತಿ ಕಿಟ್ ಗೆ ರಾಜ್ಯ ಸರ್ಕಾರ 2117 ರೂ. ಕೊಟ್ಟು ಖರೀದಿಸಿದ್ದಾರೆ ಎಂದರು.

3 ಲಕ್ಷ ಕಿಟ್ ಗಳನ್ನು ಚೀನಾದಿಂದ 94 ಕೋಟಿ 27 ಲಕ್ಷ ಕೊಟ್ಟು ಖರೀದಿಸಿದ್ದಾರೆ. ಇವರು ಸ್ವದೇಶಿ ಭಾಷಣ ಮಾಡುತ್ತಾರೆ. ಇದಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ.  ಗಡಿಯಲ್ಲಿ ಚೀನಾದವರಿದಂದ ನಮ್ಮ ಸೈನಿಕರು ಸತ್ತರು. ಇವರು ಅದೇ ಚೀನಾದಿಂದ ಖರಿದಿಸಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದ ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ಎನ್ ಎಸ್. ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಬಳ್ಳಾರಿ ಸರ್ಕಾರಿ ಕಾಲೇಜು ಪ್ರಿನ್ಸಿಪಾಲರು 1200 ರೂ. ಕೊಟ್ಟು ಪಿಪಿಇ ಕಿಟ್ ಖರೀದಿಸಿದ್ದಾರೆ. ಸುಮಾರು 10 ಲಕ್ಷ ಕೊಟ್ಟು ಮಾಸ್ಕ್ ಖರೀದಿಸಿದ್ದಾರೆ.  ಎನ್ 95 ಮಾಸ್ಕ್ 50 ರೂ ಗೆ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇವರು 120 ರಿಂದ 150 ರೂ ಗೆ ಖರೀದಿಸಿದ್ದಾರೆ. ಥರ್ಮಲ್ ಸ್ಕ್ಯಾನರ್ 5945 ರೂ ಕೊಟ್ಟು ಖರೀದಿ ಮಾಡಿದ್ದಾರೆ. ಅದು ಮಾರುಕಟ್ಟೆಯಲ್ಲಿ 1500-2000 ರೂಗೆ ದೊರೆಯುತ್ತದೆ.  ಸ್ಯಾನಿಟೈಸರ್ ಮಾರುಕಟ್ಟೆಯಲ್ಲಿ 80-100 ರೂ ಇದೆ. ಇವರು 250 ರೂ. ಕೊಟ್ಟು ಖರೀದಿಸಿದ್ದಾರೆ. ಅದನ್ನೇ ಸಮಾಜ ಕಲ್ಯಾಣ ಇಲಾಖೆಯವರು 600 ರೂ ಕೊಟ್ಟು ಖರೀದಿಸಿದ್ದಾರೆ ಎಂದು ಆರೋಪಿಸಿದರು.

ಆಕ್ಷಿಬಿಟರ್ 300 ಖರಿದಿಸಿದ್ದಾರೆ. 4.36 ಲಕ್ಷ ಕೊಟ್ಟು ಖರೀದಿಸಿದ್ದಾರೆ. ಒಟ್ಟು 13.10 ಕೋಟಿ ಹಣ ಖರ್ಚು ಮಾಡಿದ್ದಾರೆ. ಕೇರಳದವರು 2. 86 ಲಕ್ಷ ಕೊಟ್ಟು ಖರೀದಿ ಮಾಡಿದ್ದಾರೆ. ಬೇರೆ ರಾಜ್ಯದವರಿಗೆ ಕಡಿಮೆ ದರಕ್ಕೆ ಸಿಕ್ಕಿದೆ. ನಮ್ಮವರಿಗೆ ಏಕೆ ಸಿಕ್ಕಿಲ್ಲ. ಎಸ್ ಎಂ ಫಾರ್ಮಾಸಿಟಿಕಲ್ ಕಂಪನಿ ರಾಮನಗರ ಮತ್ತು ಕಲಬುರ್ಗಿಯಲ್ಕಿ ಕಳಪೆ ಸ್ಯಾನಿಟೈಸರ್ ನೀಡಿದ್ದಾರೆ. ಜನರಿಗೆ ಬರ ಬಂದರೆ ಸರ್ಕಾರಕ್ಕೆ ಹಬ್ಬ ಅಂತ ಜನ ಹೇಳುತ್ತಿದ್ದರು. ಈಗ ಕೋವಿಡ್ ಈ ಸರ್ಕಾರಕ್ಕೆ ಹಬ್ಬ ಆಗಿದೆ ಎಂದು ಗಂಭೀರ ಆರೋಪ ಮಾಡಿದರು.

ಸಂಸ್ಕೃತಿ, ನಾಗರಿಕತೆ, ಸಂಸ್ಕಾರದ ಬಗ್ಗೆ ಮಾತನಾಡುವ ಇವರು ಅಂತ್ಯ ಸಂಸ್ಕಾರವನ್ನು ಅಮಾನವೀಯವಾಗಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೋವಿಡ್-19 ನಿಯಂತ್ರಣಕ್ಕೆ 4 ಸಾವಿರ ಕೋಟಿಗೂ ಹೆಚ್ಚು ಖರಿದಿ ಮಾಡಿದ್ದಾರೆ. ಇದು ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು. ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಆದರೆ, ಭ್ರಷ್ಟಾಚಾರಕ್ಕೆ ಸಹಕಾರ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.