Sirsi-Kumta road: ರಾಗಿಹೊಸಳ್ಳಿ ಗುಡ್ಡ ಕುಸಿತ; ಮತ್ತಷ್ಟು ಅವಾಂತರ!
Team Udayavani, Jul 19, 2024, 9:34 AM IST
ಶಿರಸಿ: ರಾಗಿಹೊಸಳ್ಳಿ ಗುಡ್ಡಕುಸಿದು ರಾಷ್ಟ್ರಿಯ ಹೆದ್ದಾರಿ 766ಇ ಶಿರಸಿ-ಕುಮಟಾ ಸಂಪರ್ಕ ಕಡಿತವಾಗಿದ್ದು, ಶುಕ್ರವಾರಕ್ಕೆ 5ನೇ ದಿನಕ್ಕೆ ಕಾಲಿಟ್ಟಿದೆ.
ಜು.15ರ ಸೋಮವಾರ ರಾತ್ರಿ ಕುಸಿದ ಗುಡ್ಡ ತೆರವಿಗೆ ಜು.16ರ ಮಂಗಳವಾರದಿಂದ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಲಾಗುತ್ತಿತ್ತು. ಸಾಗರ ಮಾಲಾ ಯೋಜನೆಯಲ್ಲಿ ಗುತ್ತಿಗೆ ಪಡೆದ ಆರ್.ಎಸ್.ಎನ್.ಎಸ್. ಕಂಪನಿ ಹಾಗೂ ತಾಲೂಕು ಆಡಳಿತ ಮರ ಹಾಗೂ ಮಣ್ಣಿನ ತೆರವು ಮಾಡುತ್ತಿತ್ತು. ಇದೀಗ ಜು.20ರ ಶನಿವಾರ ಸಂಜೆಯೊಳಗೆ ತೆರವು ಕಾರ್ಯಾಚರಣೆ ಮುಗಿಸಿ ನಾಳೆಯಿಂದ (ಶನಿವಾರ) ಸಂಚಾರಕ್ಕೆ ಬಳಸಬಹುದೆಂಬ ಲೆಕ್ಕಾಚಾರ ಕೂಡ ಈಗ ತಲೆಕೆಳಗಾಗಿದೆ.
ಜು. 18ರ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಮತ್ತೆ ಗುಡ್ಡ ರಸ್ತೆಗೆ ಬಿದ್ದಿದೆ. ಎಕರೆಗೂ ಅಧಿಕ ಕ್ಷೇತ್ರದ ಮಣ್ಣು ರಸ್ತೆಯಿಂದ ತೆರವು ಮಾಡಿದರೂ ಖಾಲಿಯಾಗದ ಸ್ಥಿತಿ ನಿರ್ಮಾಣವಾಗಿದೆ.
ಬದಲಿ ಮಾರ್ಗ ಹೀಗಿದೆ :
ಅಂಕೋಲಾ, ಕಾರವಾರ, ಗೋವಾಗಳಿಗೆ ಸಂಚರಿಸುವವರು ಯಲ್ಲಾಪುರ ಮಾರ್ಗವಾಗಿ ಸಂಚರಿಸಬೇಕು, ಗೋಕರ್ಣ ಕುಮಟಾಕ್ಕೆ ಯಾಣ ಮಾರ್ಗವಾಗಿ ಸಂಚರಿಸಬೇಕು, ಹಾಗೆಯೇ ಹೊನ್ನಾವರ ಕುಮಟಾ, ಮಂಗಳೂರು ಭಾಗಗಳಿಗೆ ಸಂಚರಿಸುವವರು ಸಿದ್ದಾಪುರ ಬಡಾಳ ಘಟ್ಟದ ಮೂಲಕ ಸಂಚರಿಸಲು ಸೂಚಿಸಲಾಗಿದೆ ಎಂದು ಶಿರಸಿ ತಹಶೀಲ್ದಾರ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Koppal: ಚಿಕನ್, ಮಟನ್ ಸೆಂಟರ್ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ
Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್?
Caste census: ನಾಡಿದ್ದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ
Result: ಇಂದು ಯುಜಿನೀಟ್ ಪರಿಷ್ಕೃತ ತಾತ್ಕಾಲಿಕ ಫಲಿತಾಂಶ ಪ್ರಕಟ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.