![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 8, 2024, 12:43 AM IST
ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಉತ್ತರ 14 ಕ್ಷೇತ್ರಗಳಲ್ಲಿ ಮಂಗಳವಾರ ನಡೆದಿದ್ದು, 227 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರಗೊಂಡಿದೆ. ಬಿರುಬಿಸಿಲಿನ ಹೊರತಾಗಿಯೂ ಮತದಾರರು ಅತ್ಯುತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದ್ದು, ಶೇ. 71.4 ಮತದಾನವಾಗಿದೆ.
ಮೊದಲ ಹಂತದಲ್ಲಿ ಶೇ.69.56ರಷ್ಟು ಮತದಾನವಾಗಿದ್ದು, ಒಟ್ಟಾರೆಯಾಗಿ ರಾಜ್ಯದ 28 ಕ್ಷೇತ್ರಗಳಲ್ಲಿ ಅಂದಾಜು ಸರಾಸರಿ ಶೇ. 70.48 ಮತ ಚಲಾವಣೆಯಾಗಿದೆ. ಇದ ರೊಂದಿಗೆ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪೂರ್ಣ ಗೊಂಡಂತಾಗಿದೆ. 7 ಹಂತಗಳ ಚುನಾವಣೆ ಜೂ. 1ರಂದು ಮುಕ್ತಾಯವಾಗಲಿದ್ದು, ಜೂ. 4ರಂದು ಫಲಿತಾಂಶ ಪ್ರಕಟ ವಾಗಲಿದೆ. ಹಾಗಾಗಿ ರಾಜ್ಯದ ಜನತೆ ಫಲಿತಾಂಶಕ್ಕಾಗಿ ಇನ್ನೂ 27 ದಿನ ಕಾಯಬೇಕಾಗಿದೆ.
ಹಂತ-2ರಲ್ಲಿ ಭಾರೀ ಮತದಾನ
2ನೇ ಹಂತದಲ್ಲಿ ಬಿಸಿಲು ಲೆಕ್ಕಿಸದೆ ಮತದಾರರು ಉತ್ಸಾಹ ತೋರಿದ್ದು, ಅಂತಿಮವಾಗಿ ಶೇ. 71.4 ಮತದಾನವಾಗಿದೆ. ಕಳೆದ ಬಾರಿಗಿಂತ ಶೇ. 2.55ರಷ್ಟು ಮತದಾನ ಹೆಚ್ಚಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ 14 ಕ್ಷೇತ್ರಗಳಲ್ಲಿ ಶೇ. 68.85ರಷ್ಟು ಮತದಾನವಾಗಿತ್ತು. ವಿಶೇಷವೆಂದರೆ ಮೊದಲ ಹಂತದಲ್ಲಿ ಮತದಾನ ನಡೆದ 14 ಕ್ಷೇತ್ರಗಳಿಗಿಂತ ಮಂಗಳವಾರ ಮತದಾನ ನಡೆದ 14 ಕ್ಷೇತ್ರಗಳಲ್ಲಿ ಪ್ರತೀ ಎರಡು ಗಂಟೆಗಳ ಸರಾಸರಿ ಮತದಾನದಲ್ಲಿ ಶೇ. 3ರಿಂದ 4ರಷ್ಟು ಹೆಚ್ಚಳವಾಗಿತ್ತು. ಅದರಂತೆ ಮೊದಲ ಹಂತದ 14 ಕ್ಷೇತ್ರಗಳ ಮತದಾರರಿಗಿಂತ ಎರಡನೇ ಹಂತದ 14 ಕೇತ್ರಗಳ ಮತದಾರರು ಮತದಾನದಲ್ಲಿ ಮೇಲುಗೈ ಸಾಧಿಸಿದ್ದಾರೆ. ಎರಡನೇ ಹಂತದಲ್ಲಿ ಅತೀ ಹೆಚ್ಚು ಮತದಾನ ಚಿಕ್ಕೋಡಿಯಲ್ಲಿ ಶೇ. 78.41 ಹಾಗೂ ಅತೀ ಕಡಿಮೆ ರಾಯಚೂರಿನಲ್ಲಿ ಶೇ. 62 ಮತದಾನವಾಗಿದೆ.
ಸುರಪುರ ಉಪಚುನಾವಣೆ: ಶೇ.73.76 ಮತದಾನ
ಸುರಪುರ: ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ ಹಿನ್ನೆಲೆಯಲ್ಲಿ ಸುರಪುರ ವಿಧಾನಸಭೆ ಕ್ಷೇತ್ರದಲ್ಲಿ ಮಂಗಳವಾರ ನಡೆದ ಉಪಚುನಾವಣೆ ಸಣ್ಣಪುಟ್ಟ ಅಹಿತಕರ ಘಟನೆ ಹೊರತುಪಡಿಸಿದರೆ ಶಾಂತಿಯುತವಾಗಿತ್ತು. ಅಂದಾಜು ಶೇ.73.76 ಮತದಾನವಾಗಿದೆ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.