ಅಮ್ಮನಿಂದ ಮಗನಿಗೆ ದುಪ್ಪಟ್ಟು ವೇತನ!


Team Udayavani, Nov 4, 2022, 7:20 AM IST

ಅಮ್ಮನಿಂದ ಮಗನಿಗೆ ದುಪ್ಪಟ್ಟು ವೇತನ!

ಬೆಂಗಳೂರು: ಕೃಷಿಯಲ್ಲಿ ಲಾಭ ಮರೀಚಿಕೆಯಾಗಿದೆ. ಹಾಗಾಗಿ ರೈತರು ತಮ್ಮ ಮಕ್ಕಳನ್ನು ಪಟ್ಟಣದಲ್ಲಿ ಓದಿಸಿ ಡಾಕ್ಟರ್‌ ಅಥವಾ ಎಂಜಿನಿಯರ್‌ ಮಾಡುತ್ತಿರುವುದು ಇತ್ತೀಚೆಗೆ ಸಾಮಾನ್ಯ. ಆದರೆ ಇಲ್ಲೊಬ್ಬ ತಾಯಿ ಪಟ್ಟಣದಲ್ಲಿದ್ದ ಮಗನನ್ನು ಹಳ್ಳಿಗೆ ಕರೆಸಿಕೊಂಡು ತಮ್ಮದೇ ಜಮೀನಿನಲ್ಲಿ ಕೆಲಸ ನೀಡಿದ್ದಾರೆ. ಅಷ್ಟೇ ಅಲ್ಲ ಪಟ್ಟಣದಲ್ಲಿ ಅವನು ಪಡೆಯುತ್ತಿದ್ದುದಕ್ಕಿಂತ ಹೆಚ್ಚು-

ಕಡಿಮೆ ದುಪ್ಪಟ್ಟು ಸಂಬಳ ನೀಡುತ್ತಿದ್ದಾಳೆ! :

ಹೌದು, ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಂಟರತಳಾಲು ಗ್ರಾಮದ ಎಂ. ಕವಿತಾ ಕೃಷಿಯಲ್ಲಿ ಹಲವು ಪ್ರಯೋಗಗಳ ಮೂಲಕ ವಿನೂತನ ಸಾಧನೆ ಮಾಡಿದ್ದಾರೆ. ಅಲ್ಲದೆ 20 ಸಾವಿರ ರೂ. ಸಂಬಳಕ್ಕೆ ಪಟ್ಟಣ ದಲ್ಲಿ ದುಡಿಯುತ್ತಿದ್ದ ಪದವೀಧರ ಮಗನ ಕೆಲಸ ಬಿಡಿಸಿ, ತನ್ನ ಜಮೀನಿನಲ್ಲೇ ದುಡಿಮೆಗೆ ಹಚ್ಚಿ, ತಿಂಗಳಿಗೆ 35 ಸಾವಿರ ರೂ. ಸಂಬಳ ಪಾವತಿಸುತ್ತಿದ್ದಾರೆ.

ಇದು ಸಾಧ್ಯವಾದದ್ದು ಕವಿತಾ ಕೃಷಿಯಲ್ಲಿ ಅನುಸರಿಸಿದ ವಿನೂತನ ವಿಧಾನಗಳಿಂದ. ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿರುವ ಅವರು ಕೋಳಿ ಸಾಕಾಣಿಕೆಯನ್ನೂ ಮಾಡು ತ್ತಿದ್ದಾರೆ. ಆದರೆ ಅವುಗಳ ಮಾರಾಟ ವಿಧಾನ ವಿಭಿನ್ನವಾಗಿದೆ. ಸುತ್ತಲಿನ ಹೊಟೇಲ್‌, ಸಂಘ- ಸಂಸ್ಥೆ, ಕಚೇರಿಗಳಿಂದ ಆರ್ಡರ್‌ ಪಡೆಯುವ ಕವಿತಾ, ತಾವು ಸಾಕಿದ ಕೋಳಿ ಗಳಿಂದ ತರಹೇವಾರಿ ಅಡುಗೆ ತಯಾರಿಸಿ ಪೂರೈಸುತ್ತಾರೆ. ಇದರಿಂದ ದುಪ್ಪಟ್ಟು ಆದಾಯ ಬರುತ್ತಿದೆ. ಮಾರಾಟ ಮಾಡಿದರೆ ಒಂದು ಕೋಳಿಗೆ 450-500 ರೂ. ಮಾತ್ರ ಸಿಗುತ್ತದೆ ಎನ್ನುತ್ತಾರೆ ಕವಿತಾ.

ಮಾಂಸಾಹಾರಿ ಅಡುಗೆ :

“ನಾನು ಆಗಷ್ಟೇ ಹೈನುಗಾರಿಕೆ ಆರಂಭಿಸಿದೆ. ಅದರಿಂದ ತಾಲೂಕು ಮಟ್ಟದಲ್ಲಿ ಆತ್ಮ ಯೋಜನೆ ಅಡಿ 10 ಸಾವಿರ ನಗದು ಪ್ರಶಸ್ತಿ ಬಂದಿತ್ತು. ಆ ಹಣದಿಂದ 5 ಹುಂಜ, 15 ಕೋಳಿ ಖರೀದಿಸಿದೆ. ಅದರಿಂದ ಒಂದು ವರ್ಷದಲ್ಲಿ 180 ಕೋಳಿಗಳಾದವು. ಆ ಕೋಳಿಗಳು ಮತ್ತು ಮೊಟ್ಟೆಗಳನ್ನು ಮಾರಾಟ ಮಾಡಲಿಲ್ಲ. ಬದಲಿಗೆ ಹೊಸ ರೀತಿ ಮೌಲ್ಯವರ್ಧನೆ ಮಾಡಿದೆ. ಹೇಗೆಂದರೆ ಸುತ್ತಲಿನ ಕಚೇರಿಗಳು, ಫ್ಯಾಕ್ಟರಿಗಳಿಗೆ, ಹೊಟೇಲ್‌ಗ‌ಳಿಗೆ ಕ್ಯಾಟರಿಂಗ್‌ ಶುರು ಮಾಡಿದೆ. ಪ್ರತೀ ರವಿವಾರ, ಮಂಗಳವಾರ ಮಾಂಸಾಹಾರಿ ಅಡುಗೆ ತಯಾರಿಸಿ ಪೂರೈಸುತ್ತೇನೆ. ಅಕ್ಕಿರೊಟ್ಟಿ, ರಾಗಿರೊಟ್ಟಿಗಳನ್ನೂ ಮಾಡುತ್ತೇನೆ’ ಎಂದು ಕವಿತಾ ತಮ್ಮ ಯಶೋಗಾಥೆಯನ್ನು ವಿವರಿಸುತ್ತಾರೆ.

ಒಂದು ಹಸುವಿನಿಂದ ಆರಂಭ:

ಕವಿತಾ ಓದಿದ್ದು ಎಸೆಸೆಲ್ಸಿ. ಕೆಲವು ದಶಕಗಳ ಹಿಂದೆ ಅವರ ಮಾವ 4 ಎಕರೆ ಜಮೀನನ್ನು ಹಸ್ತಾಂತರಿಸಿದಾಗ ಆ ಜಮೀನು ಅಕ್ಷರಶಃ ಬಂಡೆಯಾಗಿತ್ತು. ಅದನ್ನು ಹದ ಮಾಡಿ ಸತತ ನಾಲ್ಕು ವರ್ಷ ನಷ್ಟ ಅನುಭವಿಸಿದರು. ವೈನ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಪತಿಯೂ ಕೆಲಸ ಬಿಟ್ಟು ಕೃಷಿಗೆ ನಿಂತಿದ್ದರು. ಒಂದೆಡೆ ಕೈಹಿಡಿಯದ ಕೃಷಿ; ಮತ್ತೂಂದೆಡೆ ಗಳಿಕೆಯೂ ಇಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. “ಇದೆಲ್ಲದರ ಮಧ್ಯೆ 30 ಸಾವಿರ ಸಾಲ ಮಾಡಿ, ಒಂದು ಹಸು ಖರೀದಿಸಿದೆ. ಅಲ್ಲಿಂದ ಆರಂಭವಾಯಿತು ನಿಜವಾದ ಕೃಷಿ ಪಯಣ. ವರ್ಷದಲ್ಲೇ ಹಸುಗಳ ಸಂಖ್ಯೆ ಹೆಚ್ಚಿತು. ಕೋಳಿಗಳು ಬಂದವು. ಜಮೀನಿನಲ್ಲಿ ಬೆಳೆ ಕೂಡ ಬರಲು ಆರಂಭಿಸಿತು. ಇಂದು 9 ಎಕರೆ ಜಮೀನಿದೆ. ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯ, ಅಡಿಕೆ, ತೆಂಗು, ದಾಳಿಂಬೆ, ಬಾಳೆ, ಚಕ್ಕೋತ ಮತ್ತಿತರ ಬೆಳೆ ಬೆಳೆಯುತ್ತಿದ್ದು, ಹೂವಿನ ಬೆಳೆ, ಬದುವಿನಲ್ಲಿ ಸಿಲ್ವರ್‌ ಓಕ್‌, ಬೇವು, ರಕ್ತಚಂದನ, ಹೊಂಗೆ ಮರಗಳು ಬೆಳೆದುನಿಂತಿವೆ. ಕುರಿ ಸಾಕಾಣಿಕೆ ಕೂಡ ಮಾಡುತ್ತಿದ್ದೇನೆ’ ಎನ್ನುತ್ತಾರೆ ಕವಿತಾ.

“ನಾನು ಹುಣಸೂರಿನಲ್ಲಿ ಸಂಬಂಧಿಕರ ವೈನ್‌ಶಾಪ್‌ನಲ್ಲಿ ಕ್ಯಾಶಿಯರ್‌ ಆಗಿ ಕೆಲಸ ಮಾಡುತ್ತಿದ್ದೆ. ಈಗ ಅಮ್ಮನೊಂದಿಗೇ ವ್ಯವಸಾಯದಲ್ಲಿ ನೆರವಾಗುತ್ತಿದ್ದೇನೆ. ಅಲ್ಲಿಗಿಂತ ಇಲ್ಲಿ ಹೆಚ್ಚು ಆದಾಯ ಗಳಿಸುತ್ತಿದ್ದೇನೆ. ಕೆಲಸ ನನಗೆ ತೃಪ್ತಿಯೂ ತಂದಿದೆ’ ಎಂದು ಕವಿತಾ ಅವರ ಮಗ ಅಕ್ಷಯ್‌ ತಿಳಿಸಿದ್ದಾರೆ. ಕವಿತಾರ ಸಾಧನೆ ಗುರುತಿಸಿ, ಗುರುವಾರ ಕೃಷಿ ಮೇಳದಲ್ಲಿ ಕೆನರಾಬ್ಯಾಂಕ್‌ ರಾಜ್ಯಮಟ್ಟದ “ಅತ್ಯುತ್ತಮ ರೈತ ಮಹಿಳೆ’ ಪ್ರಶಸ್ತಿ ನೀಡಿ ಗೌರವಿಸಿತು.

ಜಮೀನಿನಲ್ಲಿ ಕೃಷಿ ಹೊಂಡ :

ಮಾಡಿ ಅಲ್ಲಿ ಮೀನು ಸಾಕಾಣಿಕೆ ಮಾಡುತ್ತೇನೆ. ಅದರಿಂದ ಮೀನು ಊಟ ತಯಾರಿಸಿ ಪೂರೈಸಬಹುದಾಗಿದೆ. ಮಗನಿಗೆ ಪಟ್ಟಣದಲ್ಲಿ ತಿಂಗಳಿಗೆ 20 ಸಾವಿರ ಸಂಬಳ ಬರುತ್ತಿತ್ತು. ಅದನ್ನು ಬಿಡಿಸಿ ನಾನೇ  ಅವನಿಗೆ ಈಗ ತಿಂಗಳಿಗೆ 35 ಸಾವಿರ ಸಂಬಳ ಕೊಡುತ್ತೇನೆ. ಇವನ ಜತೆಗೆ ಇನ್ನೂ ಇಬ್ಬರು ನನ್ನೊಂದಿಗೆ ಕೆಲಸ ಮಾಡುತ್ತಿದ್ದು, ಅವರಿಗೂ ಸಂಬಳ ನೀಡುತ್ತಿದ್ದೇನೆ. ಕವಿತಾ 

 

- ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.