![Iran – Israel ನಡುವಿನ ಸಂಘರ್ಷ ಮಹಾ ಯುದ್ಧಕ್ಕೆ ಕಾರಣವಾಗಬಹುದೇ? ಭಾರತದ ನಿಲುವು ಏನು?](https://www.udayavani.com/wp-content/uploads/2024/08/Iran1-415x233.jpg)
DS Veeraiah ಅರಸು ಟರ್ಮಿನಲ್ ಪ್ರಕರಣ: ಬಿಜೆಪಿಯ ವೀರಯ್ಯ ಸಿಐಡಿಯ ಬಲೆಗೆ
ಮುಡಾ ಪ್ರತಿಭಟನೆ ವೇಳೆಯೇ ಕಾರ್ಯಾಚರಣೆ
Team Udayavani, Jul 13, 2024, 12:43 AM IST
![DS Veeraiah ಅರಸು ಟರ್ಮಿನಲ್ ಪ್ರಕರಣ: ಬಿಜೆಪಿಯ ವೀರಯ್ಯ ಸಿಐಡಿಯ ಬಲೆಗೆ](https://www.udayavani.com/wp-content/uploads/2024/07/cid-620x398.jpg)
ಬೆಂಗಳೂರು: ಡಿ. ದೇವರಾಜ ಅರಸು ಟ್ರಕ್ ಟರ್ಮಿ ನಲ್ ನಿಗಮದ 47 ಕೋಟಿ ರೂ. ಹಗರಣದಲ್ಲಿ ಸಿಐಡಿ ಪೊಲೀಸರು ಬಿಜೆಪಿಯ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಅವರನ್ನು ಬಂಧಿಸಿ ದ್ದಾರೆ. ಹಗ ರಣ ದಲ್ಲಿ ವೀರಯ್ಯ ಶಾಮೀ ಲಾಗಿರುವುದಕ್ಕೆ ಸಾಕ್ಷ್ಯಗಳು ಲಭ್ಯವಾದ ಬೆನ್ನಲ್ಲೇ ಅವರ ಮೇಲೆ ಸಿಐಡಿ ಕಣ್ಣಿಟ್ಟಿತ್ತು. ಮೈಸೂರಿ ನಲ್ಲಿ ಬಿಜೆಪಿ ಹಮ್ಮಿ ಕೊಂಡಿದ್ದ ಪ್ರತಿ ಭಟನೆ ಯಲ್ಲಿ ವೀರಯ್ಯ ಭಾಗಿಯಾಗಲು ಮುಂದಾಗಿದ್ದರು. ಆ ವೇಳೆ ಅವರನ್ನು ಬಂಧಿಸಲಾಗಿದೆ.
2021ರಿಂದ 2023ರ ವರೆಗೆ ಡಿ.ಎಸ್. ವೀರಯ್ಯ ಅವರು ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷರಾಗಿದ್ದರು. ಆ ವೇಳೆ ಸುಮಾರು 47 ಕೋಟಿ ರೂ. ಮೌಲ್ಯದ ಹಗರಣ ನಡೆದಿತ್ತು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಸಾದ್ ಅವರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. 2023ರ ಸೆಪ್ಟಂಬರ್ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ವೀರಯ್ಯ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು.ಇದಾದ ಬಳಿಕ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರಕಾರವು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವರ್ಗಾವಣೆ ಮಾಡಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಅಕ್ರಮಕ್ಕೆ ಸಂಬಂಧಿಸಿದ ಸಾಕ್ಷ್ಯ ಸಂಗ್ರಹಿಸಿದ್ದರು. ಇದೇ ಪ್ರಕರಣದಲ್ಲಿ ಈ ಹಿಂದೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಂಕರಪ್ಪ ಬಂಧನವಾಗಿತ್ತು. ಸದ್ಯ ಅವರು ಜೈಲಿನಲ್ಲಿದ್ದಾರೆ.
ಏನಿದು ಹಗರಣ?
ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ 194ನೇ ನಿರ್ದೇಶಕ ಮಂಡಳಿ ಸಭೆಯು 2021ರ ಅಕ್ಟೋಬರ್ನಲ್ಲಿ ನಡೆದಿತ್ತು. ಈ ವೇಳೆ ಟ್ರಕ್ ಟರ್ಮಿನಲ್ಗಳ ನಿರ್ವಹಣೆಗೆ 10 ಕೋಟಿ ರೂ. ಮೊತ್ತದ ತುಂಡು ಗುತ್ತಿಗೆ ನೀಡಲು ಅನುಮೋದನೆ ಹೊರಡಿಸಲಾಗಿತ್ತು. ಬಳಿಕ ಕಾಮಗಾರಿ ನಡೆಸದೆ ಬರೋಬ್ಬರಿ 47 ಕೋಟಿ ರೂ. ಅಕ್ರಮ ನಡೆಸಿದ ಆರೋಪ ಕೇಳಿ ಬಂದಿತ್ತು.
ಟಾಪ್ ನ್ಯೂಸ್
![Iran – Israel ನಡುವಿನ ಸಂಘರ್ಷ ಮಹಾ ಯುದ್ಧಕ್ಕೆ ಕಾರಣವಾಗಬಹುದೇ? ಭಾರತದ ನಿಲುವು ಏನು?](https://www.udayavani.com/wp-content/uploads/2024/08/Iran1-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Vijayapura: ಕರ್ತವ್ಯದಲ್ಲಿದ್ದ ವೇಳೆ ಮೂರ್ಛೆ ಬಂದು ಕುಸಿದು ಬಿದ್ದ ಪೇದೆ](https://www.udayavani.com/wp-content/uploads/2024/08/police-pede-150x84.jpg)
Vijayapura: ಕರ್ತವ್ಯದಲ್ಲಿದ್ದ ವೇಳೆ ಮೂರ್ಛೆ ಬಂದು ಕುಸಿದು ಬಿದ್ದ ಪೇದೆ
![ಶಾಸಕ ಚೆನ್ನಾರೆಡ್ಡಿ ಮತ್ತು ಪುತ್ರನನ್ನು ಇದುವರೆಗೂ ಏಕೆ ಬಂಧಿಸಿಲ್ಲ? ಸಾ.ರಾ.ಮಹೇಶ್ ಪ್ರಶ್ನೆ](https://www.udayavani.com/wp-content/uploads/2024/08/sara-mahesh-150x98.jpg)
ಶಾಸಕ ಚೆನ್ನಾರೆಡ್ಡಿ ಮತ್ತು ಪುತ್ರನನ್ನು ಇದುವರೆಗೂ ಏಕೆ ಬಂಧಿಸಿಲ್ಲ? ಸಾ.ರಾ.ಮಹೇಶ್ ಪ್ರಶ್ನೆ
![Sagara: ಭಟ್ಕಳ ದಿಂದ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್ ಬೆಂಕಿಗಾಹುತಿ… ತಪ್ಪಿದ ದುರಂತ](https://www.udayavani.com/wp-content/uploads/2024/08/bus-1-150x85.jpg)
Sagara: ಭಟ್ಕಳ ದಿಂದ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್ ಬೆಂಕಿಗಾಹುತಿ… ತಪ್ಪಿದ ದುರಂತ
![Rain: ಭಾರಿ ಮಳೆಗೆ ಆಸ್ಪತ್ರೆ ಒಳಗೆಲ್ಲಾ ನೀರು… ಮಳೆ ನೀರಿನಲ್ಲೇ ರಾತ್ರಿ ಕಳೆದ ರೋಗಿಗಳು](https://www.udayavani.com/wp-content/uploads/2024/08/hospital-150x91.jpg)
Rain: ಭಾರಿ ಮಳೆಗೆ ಆಸ್ಪತ್ರೆ ಒಳಗೆ ನುಗ್ಗಿದ ನೀರು.. ಮಳೆ ನೀರಿನಲ್ಲೇ ರಾತ್ರಿ ಕಳೆದ ರೋಗಿಗಳು
![ಬಳ್ಳಾರಿ: ರೈತರಿಂದ ಪಡೆದ ಜಮೀನುಗಳಿಗೆ ಸಿಗದ ಪರಿಹಾರ… ಸರಕಾರದ ವಿರುದ್ಧ CPIM ಪ್ರತಿಭಟನೆ](https://www.udayavani.com/wp-content/uploads/2024/08/BELLARY-150x85.jpg)
ಬಳ್ಳಾರಿ: ರೈತರಿಂದ ಪಡೆದ ಜಮೀನುಗಳಿಗೆ ಸಿಗದ ಪರಿಹಾರ… ಸರಕಾರದ ವಿರುದ್ಧ CPIM ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.