![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 25, 2018, 6:00 AM IST
ಬೆಂಗಳೂರು: ಚುನಾವಣಾ ಪ್ರಚಾರದ ಹಾಡುಗಳು ಹಾಗೂ ರೇಡಿಯೊ ಜಿಂಗಲ್ಗಳನ್ನು ಬಿಜೆಪಿ ಮಂಗಳವಾರ ಬಿಡುಗಡೆಗೊಳಿಸಿತು.
ಮತದಾರರನ್ನು ಸೆಳೆಯುವ ಐದು ಹಾಡುಗಳು ಮತ್ತು ಮೂರು ರೇಡಿಯೊ ಜಿಂಗಲ್ಗಳನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಹಾಗೂ ಸಂಸದೆ ಮತ್ತು ಬಿಜೆಪಿಯ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಹ ಸಂಚಾಲಕಿ ಶೋಭಾ ಕರಂದ್ಲಾಜೆ ಬಿಡುಗಡೆ ಮಾಡಿದರು.
“ಒಡೆದು ಆಳುವ ಸರಕಾರಕ್ಕೆ ವಿದಾಯ ಹೇಳಿ…’, “ಮೋದಿ ಹಾದಿಗೆ ಮೋದಿಯೇ ಸರಿಸಾಟಿ…’, “ನವಕರುನಾಡಿನ ತಾವರೆ ತೇರಿನ ಹೆಮ್ಮೆಯ ಸಾರಥಿ….’ ಎಂಬ ಹಾಡುಗಳ ಸಹಿತ ಹಲವು ಹಾಡುಗಳು ಗಮನ ಸೆಳೆಯುತ್ತವೆ. ಹಾಡುಗಳ ಉದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರ, ಯಡಿಯೂರಪ್ಪ ಮಂಡಿಸಿದ್ದ ಪ್ರತ್ಯೇಕ ಕೃಷಿ ಬಜೆಟ್, ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದು, ಅಮಿತ್ ಶಾ ಮತ್ತು ಯಡಿಯೂರಪ್ಪ ಜೋಡಿಯ ಕುರಿತ ಮೆಚ್ಚುಗೆ ಸಾಲುಗಳು ಬಂದುಹೋಗುತ್ತವೆ.
ಈ ಹಾಡುಗಳು ಮತ್ತು ಜಿಂಗಲ್ಗಳು ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಸಮಾವೇಶಗಳಲ್ಲಿ, ರಾಜ್ಯಾದ್ಯಂತ ಸಂಚರಿಸುವ ಪಕ್ಷದ ಚುನಾವಣಾ ಪ್ರಚಾರದ ವಾಹನಗಳಲ್ಲಿ ಮೊಳಗಲಿವೆ. ಜತೆಗೆ ಎಫ್ಎಂ ರೇಡಿಯೋದಲ್ಲೂ ಪ್ರಸಾರವಾಗಲಿದೆ. ಇಂದು ಮತ್ತೆ 5 ಹಾಡುಗಳ ಬಿಡುಗಡೆ: ಇನ್ನೂ ಐದು ಹಾಡುಗಳನ್ನು ಬುಧವಾರ ಬಿಡುಗಡೆಗೊಳಿಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
ಪುತ್ತೂರಿನ ಜಗದೀಶ್ ಆಚಾರ್ಯ ರಚಿಸಿ, ಸಂಯೋಜನೆ ಮಾಡಿರುವ ಈ ಹಾಡುಗಳು ಮತ್ತು ಜಿಂಗಲ್ಗಳು ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಹೆಚ್ಚು ಸದ್ದುಮಾಡಿದ್ದ ಸರಗಳ್ಳತನ, ಮಹಿಳೆಯರ ಮೇಲಿನ ದೌರ್ಜನ್ಯ, ರೈತರ ಆತ್ಮಹತ್ಯೆಗಳು ಸಹಿತ ಹಲವು ವೈಫಲ್ಯಗಳು ಮತ್ತು ಬಿಜೆಪಿ ಅಧಿಕಾರಾವಧಿಯಲ್ಲಿನ ಸಾಧನೆಗಳನ್ನು ಬಿಂಬಿಸುತ್ತವೆ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.